SIR ಢವಢವ: ಚರ್ಚೆ ನಡೆಯದೇ ಸುಗಮ ಕಲಾಪಕ್ಕೆ ಅವಕಾಶ ಕೊಡಲ್ಲ- ಸಮಾಜವಾದಿ ಪಕ್ಷ

ಚುನಾವಣಾ ಆಯೋಗ ಎಸ್‌ಐಆರ್ ಅನ್ನು ನಡೆಸುತ್ತಿದೆ ಎಂದು ಹೇಳುವ ಮೂಲಕ ಸರ್ಕಾರ ಚರ್ಚೆಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ
Ram Gopal Yadav
ರಾಮ್ ಗೋಪಾಲ್ ಯಾದವ್
Updated on

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಸೋಲು ಪ್ರತಿಪಕ್ಷಗಳಲ್ಲಿ ತೀವ್ರ ಹತಾಶೆ ಮೂಡಿಸಿದ್ದು, ನಾಳೆಯಿಂದ ಆರಂಭವಾಗಲಿರುವ ಸಂಸತ್ತು ಚಳಿಗಾಲದ ಅಧಿವೇಶನದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಚರ್ಚೆ ನಡೆಸದಿದ್ದರೆ ಸುಗಮ ಕಲಾಪಕ್ಕೆ ಅವಕಾಶ ನೀಡಲ್ಲ ಎಂದು ಸಮಾಜವಾದಿ ಪಕ್ಷ ಹೇಳಿದೆ.

ಸರ್ಕಾರ ಇಂದು ಕರೆದ ಸರ್ವಪಕ್ಷ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಪಿ ನಾಯಕ ರಾಮ್ ಗೋಪಾಲ್ ಯಾದವ್, ಚುನಾವಣಾ ಆಯೋಗ ಎಸ್‌ಐಆರ್ ಅನ್ನು ನಡೆಸುತ್ತಿದೆ ಎಂದು ಹೇಳುವ ಮೂಲಕ ಸರ್ಕಾರ ಚರ್ಚೆಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. SIR ಕುರಿತು ಚರ್ಚೆ ನಡೆಸದಿದ್ದರೆ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದರು.

SIR ನಲ್ಲಿ ಸಾಕಷ್ಟು ಪ್ರಮಾಣದ ಅಕ್ರಮ ನಡೆದಿರುವುದರಿಂದ ಸಮಾಜವಾದಿ ಪಕ್ಷ ಈ ವಿಚಾರವನ್ನು ಎತ್ತುತ್ತಿದ್ದೇವೆ ಎಂದು ಹೇಳಿದರು.

Ram Gopal Yadav
'ಅವರ ಕೈಗೆ ರಕ್ತ ಅಂಟಿದೆ': SIR ಸಂಬಂಧಿತ 40 ಸಾವುಗಳನ್ನು ಉಲ್ಲೇಖಿಸಿ CEC ಗೆ ಟಿಎಂಸಿ ತರಾಟೆ

ಮೊದಲು ನಾವು ಕೇಳುತ್ತಿದ್ದೆವು. ಈಗ ಜನರ ಮತಗಳು ಕಡಿತಗೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಬಿಹಾರದಲ್ಲಿ, ದುಷ್ಕೃತ್ಯಗಳು ನಡೆದಿವೆ. ನಾವು SIR ಬಗ್ಗೆ ಚರ್ಚೆಗೆ ಒತ್ತಾಯಿಸಿದ್ದೇವೆ. ಚುನಾವಣಾ ಆಯೋಗವನ್ನು ಉಲ್ಲೇಖಿಸಿ ಸರ್ಕಾರ ಹಿಂದೆ ಸರಿಯಲು ಸಾಧ್ಯವಿಲ್ಲ" ಎಂದು ಯಾದವ್ ಹೇಳಿದರು.

ಚುನಾವಣಾ ಆಯೋಗವನ್ನು ಸರ್ಕಾರ ರಚಿಸಿದೆ ಮತ್ತು ಸೃಷ್ಟಿಯಾದುದಕ್ಕಿಂತ ಸೃಷ್ಟಿಯಾದವರು ದೊಡ್ಡವರು. ತಪ್ಪುಗಳು ನಡೆಯುತ್ತಿರುವಾಗ ಯಾಕೆ ಚರ್ಚೆ ನಡೆಯುತ್ತಿಲ್ಲ. ಪ್ರಧಾನಿ ಮೋದಿ ಇಲ್ಲದಿದ್ದರೆ ಚರ್ಚೆ ನಡೆಯುವುದಿಲ್ಲವೇ? ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com