Kurnool bus fire: ವಿಧಿವಿಜ್ಞಾನ ತಂಡದಿಂದ ತನಿಖೆ ಆರಂಭ; ಮೃತದೇಹಗಳ DNA ಮಾದರಿ ಸಂಗ್ರಹ; ಬೈಕ್ ಸವಾರ ಸಾವು; Video

ಕರ್ನೂಲ್‌ನ ಕಲ್ಲೂರು ಮಂಡಲದ ಚಿನ್ನೇಟಕೂರಿನಲ್ಲಿ 42 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ ಬೆಂಕಿಗೆ ಆಹುತಿಯಾಯಿತು, ಬೈಕ್ ಬಸ್ ಅಡಿಯಲ್ಲಿ ಸಿಲುಕಿಕೊಂಡು ಅದರ ಒಡೆದ ಇಂಧನ ಟ್ಯಾಂಕ್‌ನಿಂದ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹತ್ತಿ ಉರಿದಿದೆ.
Kurnool bus fire
ಕರ್ನೂಲ್ ಬಸ್ ದುರಂತ
Updated on

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಶುಕ್ರವಾರ ಬೆಳಗ್ಗೆ ಭೀಕರ ಬಸ್ ಬೆಂಕಿ ದುರಂತ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಧಾವಿಸಿ ಮೃತದೇಹಗಳ ಪತ್ತೆಹಚ್ಚುವ ಕೆಲಸ ಮಾಡುತ್ತಿದೆ.

ವಿಧಿವಿಜ್ಞಾನ ತಂಡವು ವಾಹನದ ವಿವರವಾದ ಪರಿಶೀಲನೆಯನ್ನು ಪ್ರಾರಂಭಿಸಿ ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ಮತ್ತು ಘಟನೆಗೆ ಕಾರಣವಾದ ಘಟನೆಗಳ ಅನುಕ್ರಮವನ್ನು ನಿರ್ಧರಿಸಲು ತಜ್ಞರು ಪುರಾವೆಗಳನ್ನು ಸಂಗ್ರಹಿಸುತ್ತಿದ್ದಾರೆ.

ಕರ್ನೂಲ್‌ನ ಕಲ್ಲೂರು ಮಂಡಲದ ಚಿನ್ನೇಟಕೂರಿನಲ್ಲಿ 42 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ ಬೆಂಕಿಗೆ ಆಹುತಿಯಾಯಿತು, ಬೈಕ್ ಬಸ್ ಅಡಿಯಲ್ಲಿ ಸಿಲುಕಿಕೊಂಡು ಅದರ ಒಡೆದ ಇಂಧನ ಟ್ಯಾಂಕ್‌ನಿಂದ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹತ್ತಿ ಉರಿದಿದೆ.

ಕರ್ನೂಲ್ ಜಿಲ್ಲಾಧಿಕಾರಿ ಎ ಸಿರಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ, ಬಸ್‌ನಲ್ಲಿ ಇಬ್ಬರು ಚಾಲಕರು ಸೇರಿದಂತೆ 42 ಪ್ರಯಾಣಿಕರಿದ್ದರು. ಒಟ್ಟು 21 ಪ್ರಯಾಣಿಕರು ಬಚಾವಾಗಿದ್ದಾರೆ ಎಂದು ಮಾಹಿತಿ ನೀಡಿದರು.

11 ಮೃತ ದೇಹಗಳನ್ನು ಬಸ್‌ನಿಂದ ಹೊರತೆಗೆಯಲಾಗಿದೆ. 21 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 9 ಮೃತ ದೇಹಗಳ ಬಗ್ಗೆ ನಾವು ದೃಢಪಡಿಸಬೇಕಾಗಿದೆ ಎಂದರು.

ಅಪಘಾತದ ನಂತರ ಬಸ್ ಬಾಗಿಲು ತೆಗೆಯಲು ಸಾಧ್ಯವಾಗಲಿಲ್ಲ. ಇಬ್ಬರು ಚಾಲಕರು ಬೆಂಕಿಯಿಂದ ಪಾರಾಗಿದ್ದಾರೆ. ಹೈದರಾಬಾದ್‌ನಿಂದ ಬಸ್ ಹತ್ತಿದ್ದ ಹೆಚ್ಚಿನ ಪ್ರಯಾಣಿಕರು ಬೆಂಕಿ ಹೊತ್ತಿಕೊಂಡಾಗ ಗಾಢ ನಿದ್ರೆಯಲ್ಲಿದ್ದರು.

ಜಿಲ್ಲಾಧಿಕಾರಿ ಕಚೇರಿ ನಿಯಂತ್ರಣ ಕೊಠಡಿಯ ಸಂಪರ್ಕ ವಿವರಗಳು 08518-277305. ಗಾಯಾಳುಗಳನ್ನು ಚಿಕಿತ್ಸೆಗಾಗಿ ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಸ್ಥಾಪಿಸಲಾದ ನಿಯಂತ್ರಣ ಕೊಠಡಿಯ ಸಂಪರ್ಕ ವಿವರಗಳಿಗೆ 9121101059 ನ್ನು ಸಂಪರ್ಕಿಸಬಹುದು.

Kurnool bus fire
Kurnool Bus Fire: ಆಂಧ್ರ ಪ್ರದೇಶದಲ್ಲಿ ಹೈದರಾಬಾದ್-ಬೆಂಗಳೂರು ಖಾಸಗಿ ಬಸ್ ಬೆಂಕಿ ಅವಘಡ: 21 ಮಂದಿ ಸಜೀವ ದಹನ; Video

ಬೈಕ್ ಸವಾರ ಕೂಡ ಸಾವು

ಬೈಕ್ ಸವಾರನನ್ನು ಕರ್ನೂಲ್ ಜಿಲ್ಲೆಯ ತಂಡರಪಡು ಗ್ರಾಮದ ಟಿವಿ9 ಕಾಲೋನಿಯ ನಿವಾಸಿ ಗ್ರಾನೈಟ್ ದಿನಗೂಲಿ ನೌಕರ ಶಿವ ಶಂಕರ್ (21) ಎಂದು ಗುರುತಿಸಲಾಗಿದ್ದು, ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ.

ಡಿಎನ್ ಎ ಮಾದರಿ ಸಂಗ್ರಹ

ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಮತ್ತು ವೈದ್ಯಕೀಯ ತಂಡಗಳ ಜಂಟಿ ಪ್ರಯತ್ನದಿಂದ ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ಮುಂದುವರೆಯಿತು, ಅವರು ಬೆಂಕಿಯನ್ನು ನಿಯಂತ್ರಣಕ್ಕೆ ತಂದು ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದರು.

ಕೆಲವು ಶವಗಳು ಗುರುತಿಸಲಾಗದಷ್ಟು ಸುಟ್ಟುಹೋಗಿದ್ದು, ಅಧಿಕಾರಿಗಳು ಮೃತರ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡಗಳನ್ನು ಕರೆತಂದಿದ್ದಾರೆ.

ಅಪಘಾತದ ಕಾರಣದ ಬಗ್ಗೆ ವಿವರವಾದ ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿರಿ ತಿಳಿಸಿದ್ದಾರೆ. ಬಸ್ಸಿನ ಸುರಕ್ಷತಾ ಕಾರ್ಯವಿಧಾನಗಳು, ಅಗ್ನಿಶಾಮಕಗಳ ಲಭ್ಯತೆ ಮತ್ತು ಪ್ರಯಾಣದ ಸಮಯದಲ್ಲಿ ಚಾಲಕನ ಜಾಗರೂಕತೆಯ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಪ್ರಾಥಮಿಕ ತನಿಖೆಯಿಂದ ಇಂಧನ ಟ್ಯಾಂಕ್ ಒಡೆದು ಪೆಟ್ರೋಲ್ ಸೋರಿಕೆಯಿಂದ ಬೆಂಕಿ ಹತ್ತಿ ಉರಿದಿರಬಹುದು ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com