ಭಾರತಕ್ಕೆ ಉತ್ತಮ ವಿರೋಧಪಕ್ಷಕ್ಕಾಗಿ ಅಭಿಯಾನ ಅಗತ್ಯ: ಸೀತಾರಾಮನ್

ಭಾರತ ಉತ್ತಮ ವಿರೋಧ ಪಕ್ಷ ಮತ್ತು ಉತ್ತಮ ವಿರೋಧ ಪಕ್ಷದ ನಾಯಕರನ್ನು ಬಯಸುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ.
 Nirmala Sitharaman
ನಿರ್ಮಲಾ ಸೀತಾರಾಮನ್online desk
Updated on

ನವದೆಹಲಿ: ಭಾರತ ಉತ್ತಮ ವಿರೋಧ ಪಕ್ಷ ಮತ್ತು ಉತ್ತಮ ವಿರೋಧ ಪಕ್ಷದ ನಾಯಕರನ್ನು ಬಯಸುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ. 2017 ರಲ್ಲಿ ಏಕೀಕೃತ ಪರೋಕ್ಷ ತೆರಿಗೆ ಪದ್ಧತಿಯನ್ನು ಜಾರಿಗೆ ತರುವ ಮೊದಲು ಮೋದಿ ಸರ್ಕಾರದ ಜಿಎಸ್‌ಟಿ ಸುಧಾರಣೆಗಳ ಕುರಿತಾದ ಟೀಕೆಗಳನ್ನು ಅವರು 'ತಿಳಿವಳಿಕೆ ಇಲ್ಲದವರು' ಮತ್ತು ವಾಸ್ತವಗಳಿಂದ ದೂರ ಉಳಿದವರು' ಎಂದು ಟೀಕಿಸಿದರು.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಿರ್ಮಲಾ ಸೀತಾರಾಮನ್, ಜಿಎಸ್‌ಟಿ ಪರಿಚಯಿಸಿದಾಗ ನಾಲ್ಕು ತೆರಿಗೆ ಸ್ಲ್ಯಾಬ್‌ಗಳನ್ನು ಉಳಿಸಿಕೊಂಡಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸರ್ಕಾರವನ್ನು ದೂಷಿಸಿದ್ದಕ್ಕಾಗಿ ಮತ್ತು ಕೇವಲ ಎರಡು ಸ್ಲ್ಯಾಬ್‌ಗಳನ್ನು ಮಾತ್ರ ಇರಿಸಿಕೊಳ್ಳುವ ಮೂಲಕ ರಚನೆಯನ್ನು ತರ್ಕಬದ್ಧಗೊಳಿಸುವ ಇತ್ತೀಚಿನ ಕ್ರಮಕ್ಕೆ ಸಮರ್ಥನೆಯನ್ನು ಪ್ರತಿಪಾದಿಸಿದ್ದಕ್ಕಾಗಿ ಕಾಂಗ್ರೆಸ್ ನ್ನು ಅವರು ತೀವ್ರವಾಗಿ ಟೀಕಿಸಿದರು.

 Nirmala Sitharaman
ಬಿಜೆಪಿಗೆ ನೂತನ ಸಾರಥಿ: ನಿರ್ಮಲಾ ಸೀತಾರಾಮನ್ ಸೇರಿದಂತೆ ಮೂವರು ಮಹಿಳೆಯರ ಹೆಸರು ಮುಂಚೂಣಿಗೆ!

ಇದು ಬಿಜೆಪಿಯ ನಿರ್ಧಾರವಾಗಿರಲಿಲ್ಲ ಅಥವಾ ಆಗಿನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ವಿಭಿನ್ನ ತೆರಿಗೆ ಸ್ಲ್ಯಾಬ್‌ಗಳನ್ನು ಅಥವಾ ನಿರ್ದಿಷ್ಟ ವಸ್ತುವಿಗೆ ಜಿಎಸ್‌ಟಿ ದರ ಹೇಗಿರಬೇಕು ಎಂಬುದನ್ನು ನಿರ್ಧರಿಸುತ್ತಿದ್ದರು ಎಂಬುದೂ ಅಲ್ಲ ಕಾಂಗ್ರೆಸ್ ಮಂತ್ರಿಗಳು ಸಹ ಇದರ ಭಾಗವಾಗಿದ್ದರು ಎಂದು ಸೀತಾರಾಮನ್ ಹೇಳಿದರು.

"ಅವರಿಗೆ (ವಿರೋಧ ಪಕ್ಷ) ಅದರ ಬಗ್ಗೆ ತಿಳಿದಿಲ್ಲವೇ?" ಜುಲೈ 2017 ರಲ್ಲಿ ಜಾರಿಗೆ ಬರುವ ಮೊದಲು ವಿರೋಧ ಪಕ್ಷದ ಆಡಳಿತದ ರಾಜ್ಯಗಳು ನಿರ್ಣಾಯಕ ಪಾತ್ರ ವಹಿಸಿದ ನಾಲ್ಕು ಜಿಎಸ್‌ಟಿ ದರಗಳ ವಿಕಸನವನ್ನು ವಿವರಿಸಿದ ಸೀತಾರಾಮನ್, ಮರ ಕಡಿಯುವಂತಹ ವಿಷಯಗಳ ವಿರುದ್ಧ ಸಾರ್ವಜನಿಕ ಚಳುವಳಿಯ ರೀತಿಯಲ್ಲಿ ದೇಶಕ್ಕೆ ಉತ್ತಮ ವಿರೋಧ ಪಕ್ಷ ಮತ್ತು ಉತ್ತಮ ವಿರೋಧ ಪಕ್ಷದ ನಾಯಕರಿಗಾಗಿ ಅಭಿಯಾನದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com