'ಭೂಮಿ ಮೇಲಿನ ನಿಯಂತ್ರಣವು ವಿಜಯವನ್ನು ನಿರ್ಧರಿಸುತ್ತದೆ': Indian Army Chief Gen Dwivedi

ಭಾರತದ ವಿಷಯದಲ್ಲಿ, ಭೂಮಿಯ ಮೇಲಿನ ನಿಯಂತ್ರಣವು ವಿಜಯವನ್ನು ನಿರ್ಧರಿಸುತ್ತದೆ. ಭಾರತದಲ್ಲಿ, ನಮಗೆ ಎರಡು ದಿಕ್ಕಿನಲ್ಲಿ ಬೆದರಿಕೆಗಳಿರುವುದರಿಂದ, ಭೂಮಿ ವಿಜಯದ ಕರೆನ್ಸಿಯಾಗಿ ಉಳಿಯುತ್ತದೆ...
Indian Army Chief Gen Dwivedi
ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ
Updated on

ನವದೆಹಲಿ: ಯಾವುದೇ ಯುದ್ಧದಲ್ಲಿ ಸೇನೆಯ ಕಾಲ್ದಳಗಳು ಅತ್ಯಂತ ನಿರ್ಣಾಯಕವಾಗಿದ್ದು, ಭೂಮಿ ಮೇಲಿನ ನಿಯಂತ್ರಣವು ವಿಜಯವನ್ನು ನಿರ್ಧರಿಸುತ್ತದೆ ಎಂದು ಮಂಗಳವಾರ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ (Gen Upendra Dwivedi) ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜನರಲ್ ದ್ವಿವೇದಿ ಅವರು, 'ಭಾರತದ ವಿಷಯದಲ್ಲಿ, ಭೂಮಿಯ ಮೇಲಿನ ನಿಯಂತ್ರಣವು ವಿಜಯವನ್ನು ನಿರ್ಧರಿಸುತ್ತದೆ. ಭಾರತದಲ್ಲಿ, ನಮಗೆ ಎರಡು ದಿಕ್ಕಿನಲ್ಲಿ ಬೆದರಿಕೆಗಳಿರುವುದರಿಂದ, ಭೂಮಿ ವಿಜಯದ ಕರೆನ್ಸಿಯಾಗಿ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

'ಭೂಮಿಯ ಮೌಲ್ಯವು ಕೇವಲ ಆರ್ಥಿಕವಾಗಿ ಮಾತ್ರವಲ್ಲ, ರಾಷ್ಟ್ರೀಯ ಭದ್ರತೆ ಮತ್ತು ಕಾರ್ಯತಂತ್ರದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಈ ಸಂದರ್ಭದಲ್ಲಿ, ಭೂಮಿಯ ನಿಯಂತ್ರಣ ಮತ್ತು ರಕ್ಷಣೆಯು ದೇಶದ ಸಾಮರ್ಥ್ಯ ಮತ್ತು ಪ್ರಾಬಲ್ಯವನ್ನು ಗುರುತಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ' ಎಂದು ಹೇಳಿದರು.

ಇದೇ ವೇಳೆ ಯುದ್ಧದ ಬದಲಾಗುತ್ತಿರುವ ಸ್ವರೂಪ ಮತ್ತು ಪರಿವರ್ತನಾ ಸುಧಾರಣೆಗಳ ಭಾಗವಾಗಿ ಉದಯೋನ್ಮುಖ ತಂತ್ರಜ್ಞಾನಗಳನ್ನು ಸೇರಿಸಲು ಭಾರತೀಯ ಸೇನೆಯ ಪ್ರಯತ್ನಗಳ ಬಗ್ಗೆಯೂ ಮಾತನಾಡಿದ ಜನರಲ್ ದ್ವಿವೇದಿ, 'ನಾವು ಯುದ್ಧ ಮಾಡುವಾಗ, ಸೈನ್ಯವು ಏಕಾಂಗಿಯಾಗಿ ಹೋರಾಡುವುದಿಲ್ಲ. ನಮ್ಮಲ್ಲಿ ಗಡಿ ಭದ್ರತಾ ಪಡೆ ಮತ್ತು ಇಂಡೋ-ಟಿಬೆಟಿಯನ್ ಗಡಿ ಪೊಲೀಸರೂ ಇದ್ದಾರೆ. ನಂತರ ತ್ರಿ-ಸೇವೆಗಳು, ರಕ್ಷಣಾ ಸೈಬರ್ ಏಜೆನ್ಸಿಗಳು, ರಕ್ಷಣಾ ಬಾಹ್ಯಾಕಾಶ ಏಜೆನ್ಸಿಗಳು ಇವೆ. ಈಗ ನಾವು cognitive warfare agenciesಗಳ ಬಗ್ಗೆ ಮಾತನಾಡುತ್ತಿದ್ದೇವೆ ಎಂದರು.

Indian Army Chief Gen Dwivedi
Theatre Commands ಎಂದರೇನು? ಥಿಯೇಟರ್‌ ಕಮಾಂಡ್‌ ಕುರಿತು ಭಾರತೀಯ ವಾಯುಪಡೆಗೇಕೆ ಆತಂಕ? (ಜಾಗತಿಕ ಜಗಲಿ)

'ಇದಲ್ಲದೆ, ಇಸ್ರೋ, ನಾಗರಿಕ ರಕ್ಷಣಾ, ನಾಗರಿಕ ವಿಮಾನಯಾನ, ರೈಲ್ವೆ, ಎನ್‌ಸಿಸಿ, ರಾಜ್ಯ ಮತ್ತು ಕೇಂದ್ರ ಆಡಳಿತಗಳಂತಹ ಏಜೆನ್ಸಿಗಳಿವೆ. ಒಬ್ಬರು ಹಲವು ಏಜೆನ್ಸಿಗಳೊಂದಿಗೆ ವ್ಯವಹರಿಸಬೇಕಾದರೆ, theaterisation ಉತ್ತರವಾಗಿದೆ. ಏಕೆಂದರೆ ಆಜ್ಞೆಯ ಏಕತೆ ಹೆಚ್ಚು ಮುಖ್ಯವಾಗಿರುತ್ತದೆ. ನಿರ್ಣಾಯಕ ಹಂತಗಳಲ್ಲಿ ಸಮನ್ವಯವನ್ನು ಸಾಧಿಸಲು ನಿಮಗೆ ಒಬ್ಬ ಕಮಾಂಡರ್ ಅಗತ್ಯವಿದೆ. theaterisation ಸಂಪೂರ್ಣವಾಗಿ ಅವಶ್ಯಕವಾಗಿದೆ' ಎಂದು ಅವರು ಪ್ರತಿಪಾದಿಸಿದ್ದರು.

ಕಳೆದ ತಿಂಗಳು ಉಕ್ರೇನ್ ಸಂಘರ್ಷದ ಕುರಿತು ಅಲಾಸ್ಕಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ನಡೆದ ಶೃಂಗಸಭೆಯ ಮಾತುಕತೆಗಳನ್ನು ಉಲ್ಲೇಖಿಸಿದ ಅವರು, ನೀವು ಇಬ್ಬರು ಅಧ್ಯಕ್ಷರ ನಡುವೆ ನಡೆದ ಚರ್ಚೆ, ಕೈ ವಿನಿಮಯ ಮಾಡಿಕೊಳ್ಳಲು ಇಬ್ಬರು ಎಷ್ಟು ಭೂಮಿ ಇದೆ ಎಂಬುದರ ಕುರಿತು ಚರ್ಚಿಸಿದರು ಎಂದು ಪ್ರತಿಪಾದಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com