

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷ ಜಾಗತಿಕ ಸಮುದ್ರ ಸಾರಿಗೆಯ ಮೇಲೆ ಬೀರಿದ ಪರಿಣಾಮಗಳ ಜೊತೆಗೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಬಹಿರಂಗಪಡಿಸಿದಂತೆ ‘ಆಪರೇಶನ್ ಸಿಂಧೂರ್’ ಸಮಯದಲ್ಲಿ ಭಾರತೀಯ ನೌಕಾಪಡೆ ಪಾಕಿಸ್ತಾನ ಮೇಲೆ ದಾಳಿ ನಡೆಸುವ ಅಂಚಿನಲ್ಲಿದ್ದದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ.
ಆಪರೇಷನ್ ಸಿಂಧೂರ್ ನ ವೇಳೆ ಸಮುದ್ರ ಮಾರ್ಗದಿಂದ ಪಾಕಿಸ್ತಾನ ಮೇಲೆ ದಾಳಿ ನಡೆಸಲು ಭಾರತೀಯ ನೌಕಾಪಡೆ ಕೇವಲ ಕೆಲವು ನಿಮಿಷಗಳ ದೂರದಲ್ಲಿತ್ತು. ಆಗ "ಅವರು ‘ಕೈನೇಟಿಕ್ ಕ್ರಮಗಳನ್ನು ನಿಲ್ಲಿಸುವಂತೆ’ ವಿನಂತಿಸಿದರು ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಬುಧವಾರ ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ನೌಕಾಪಡೆ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ, ಕಳೆದ ವರ್ಷ ಪಹಲ್ಗಾಂ ಭಯೋತ್ಪಾದಕ ದಾಳಿಯ ನಂತರ ನಡೆಸಲಾದ ‘ಆಪರೇಶನ್ ಸಿಂಧೂರ್’ ಸಂದರ್ಭದಲ್ಲಿ ತೋರಿದ ವಿಶಿಷ್ಟ ಸೇವೆಗೆ ಇಬ್ಬರು ಉನ್ನತ ನೌಕಾ ಅಧಿಕಾರಿಗಳಿಗೆ ಯುದ್ಧ ಸೇವಾ ಪದಕಗಳನ್ನು ಅವರು ಪ್ರದಾನ ಮಾಡಿದರು.
ಪಾಕಿಸ್ತಾನ ಸೈನಿಕ ದಾಳಿಗಳನ್ನು ನಿಲ್ಲಿಸುವಂತೆ ವಿನಂತಿಸಿದ್ದರು, ಸಮುದ್ರ ಮಾರ್ಗದಿಂದ ನಾವು ಪಾಕಿಸ್ತಾನ ಮೇಲೆ ದಾಳಿ ನಡೆಸಲು ಕೇವಲ ಕೆಲವೇ ನಿಮಿಷಗಳಷ್ಟೇ ದೂರದಲ್ಲಿದ್ದೆವು ಎಂಬುದು ಈಗ ರಹಸ್ಯವಲ್ಲ ಎಂದು ನೌಕಾಪಡೆಯ ಪಾತ್ರದ ಬಗ್ಗೆ ಮಾತನಾಡುವಾಗ ಅವರು ಹೇಳಿದರು.
ಪಶ್ಚಿಮ ಏಷ್ಯಾ ಸಂಘರ್ಷದ ಸಮುದ್ರ ಸಾರಿಗೆಯ ಮೇಲಿನ ಪರಿಣಾಮ ಕುರಿತು ಮಾತನಾಡುತ್ತಾ, ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ಒಳಗೊಂಡ ಯುದ್ಧ ಆರಂಭವಾದ ನಂತರದಿಂದ ಆ ಪ್ರದೇಶದಲ್ಲಿ 20 ಕ್ಕೂ ಹೆಚ್ಚು ವ್ಯಾಪಾರ ನೌಕೆಗಳ ಮೇಲೆ ದಾಳಿ ನಡೆದಿದೆ ಎಂದು ಅವರು ಹೇಳಿದರು. ಸಂಘರ್ಷದ ನಡುವೆ ಸುಮಾರು 1,900 ಹಡಗುಗಳು ಸಿಲುಕಿಕೊಂಡಿವೆ ಎಂದು ಅವರು ತಿಳಿಸಿ, ಹಾರ್ಮುಜ್ ಜಲಸಂಧಿಯ ಮೂಲಕದ ದೈನಂದಿನ ಸಂಚಾರವು ಸಂಘರ್ಷಕ್ಕೂ ಮುನ್ನದ ಸರಾಸರಿ 130 ಹಾದುಹೋಗುವಿಕೆಗಳಿಗಿಂತ ತೀವ್ರವಾಗಿ ಕುಸಿದು, ಈಗ ದಿನಕ್ಕೆ ಕೇವಲ ಆರು-ಏಳು ಹಾದುಹೋಗುವಿಕೆಗಳಿಗೆ ಇಳಿದಿದೆ ಎಂದು ಹೇಳಿದರು.
Advertisement