'39 ದಿನಗಳ ಯುದ್ಧದಲ್ಲಿ ಅಮೆರಿಕ ಸಾಧಿಸಿದ್ದಾದರೂ ಏನು?' ಸಿಎಂ ಒಮರ್ ಅಬ್ದುಲ್ಲಾ ಪ್ರಶ್ನೆ

ಯುದ್ಧ ಪ್ರಾರಂಭವಾಗುವ ಮೊದಲೇ ಹಾರ್ಮುಜ್ ಮಾರ್ಗವು ಮುಕ್ತ ಮತ್ತು ಉಚಿತವಾಗಿ ಲಭ್ಯವಿತ್ತು. ಈಗ ಯುದ್ಧದಿಂದ ಉಂಟಾದ ಪ್ರಯೋಜನವೇನು ಎಂದು ಪ್ರಶ್ನಿಸಿದ್ದಾರೆ.
Jammu and Kashmir CM Omar Abdullah
ಸಿಎಂ ಒಮರ್ ಅಬ್ದುಲ್ಲಾ
Updated on

ಶ್ರೀನಗರ: ಅಮೆರಿಕ-ಇರಾನ್ ಯುದ್ದದಿಂದ ಡೊನಾಲ್ಟ್ ಟ್ರಂಪ್ ಸಾಧಿಸಿದ್ದು ಏನು ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಕದನ ವಿರಾಮದ ಭಾಗವಾಗಿ ಮಹತ್ವದ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲಾಗಿದೆ. ಯುದ್ಧ ಪ್ರಾರಂಭವಾಗುವ ಮೊದಲೇ ಹಾರ್ಮುಜ್ ಮಾರ್ಗವು ಮುಕ್ತ ಮತ್ತು ಉಚಿತವಾಗಿ ಲಭ್ಯವಿತ್ತು. ಈಗ ಯುದ್ಧದಿಂದ ಉಂಟಾದ ಪ್ರಯೋಜನವೇನು ಎಂದು ಪ್ರಶ್ನಿಸಿದ್ದಾರೆ.

ಕದನ ವಿರಾಮವು ಜಲಸಂಧಿಯನ್ನು ಮತ್ತೆ ತೆರೆಯಲು ಅನುವು ಮಾಡಿಕೊಟ್ಟಿದೆ, ಯುದ್ಧ ಪ್ರಾರಂಭವಾಗುವ ಮೊದಲು ಎಲ್ಲರಿಗೂ ಮುಕ್ತವಾಗಿ ಜಲಸಂಧಿ ತೆರೆದಿತ್ತು ಅಲ್ಲವೇ. ಈ 39 ದಿನಗಳ ಯುದ್ಧದಲ್ಲಿ ಅಮೆರಿಕಾ ನಿಖರವಾಗಿ ಏನು ಸಾಧಿಸಿತು? ಇದೊಂದು ಅನ್ಯಾಯದ ಯುದ್ಧ ಎಂದು ಒಮರ್ ಅಬ್ದುಲ್ಲಾ ಪೋಸ್ಟ್ ಮಾಡಿದ್ದಾರೆ.

ಪಶ್ಚಿಮ ಏಷ್ಯಾವನ್ನು ನಾಶ ಮಾಡಿ, ಜಾಗತಿಕ ಇಂಧನ ಮಾರುಕಟ್ಟೆಯನ್ನು ಅಲ್ಲೋಲ ಕಲ್ಲೋಲಗೊಳಿಸಿದ ನಂತರ ಇರಾನ್, ಅಮೆರಿಕ ಮತ್ತು ಇಸ್ರೇಲ್ ಬುಧವಾರ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಘೋಷಿಸಿವೆ.

Jammu and Kashmir CM Omar Abdullah
ಜಗತ್ತಿನ ಮುಂದೆ ಬೆತ್ತಲಾದ ವಿಶ್ವಗುರು: ಕುಗ್ಗಿತು 56 ಇಂಚಿನ ಎದೆ; ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com