ಕುಂಕುಮ-ಹಿಜಾಬ್ ವಿವಾದದ ನಡುವೆ ಲೆನ್ಸ್‌ಕಾರ್ಟ್ ಅಂಗಡಿಗೆ ನುಗ್ಗಿ ಸಿಬ್ಬಂದಿಗೆ ತಿಲಕ ಹಚ್ಚಿದ ನಾಜಿಯಾ ಖಾನ್, Video!

ಲೆನ್ಸ್‌ಕಾರ್ಟ್ ಪ್ರಸ್ತುತ ದೊಡ್ಡ ವಿವಾದದ ಕೇಂದ್ರಬಿಂದುವಾಗಿದೆ. ಕಂಪನಿಯು ತನ್ನ ಉದ್ಯೋಗಿಗಳಿಗೆ ಕೆಲಸದ ಸಮಯದಲ್ಲಿ ಕುಂಕುಮ ಮತ್ತು ತಿಲಕ ಧರಿಸುವುದನ್ನು ನಿಷೇಧಿಸಿದ್ದು ಹಿಜಾಬ್‌ಗೆ ಅನುಮತಿಸಿದೆ ಎಂಬ ಆರೋಪವಿದೆ.
Nazia elahi khan
ನಾಜಿಯಾ ಇಲಾಹಿ ಖಾನ್
Updated on

ಕನ್ನಡಕ ಚಿಲ್ಲರೆ ವ್ಯಾಪಾರಿ ಲೆನ್ಸ್‌ಕಾರ್ಟ್ ಪ್ರಸ್ತುತ ದೊಡ್ಡ ವಿವಾದದ ಕೇಂದ್ರಬಿಂದುವಾಗಿದೆ. ಕಂಪನಿಯು ತನ್ನ ಉದ್ಯೋಗಿಗಳಿಗೆ ಕೆಲಸದ ಸಮಯದಲ್ಲಿ ಕುಂಕುಮ ಮತ್ತು ತಿಲಕ ಧರಿಸುವುದನ್ನು ನಿಷೇಧಿಸಿದ್ದು ಹಿಜಾಬ್‌ಗೆ ಅನುಮತಿಸಿದೆ ಎಂಬ ಆರೋಪಗಳಿವೆ. ಮುಸ್ಲಿಂ ಬಿಜೆಪಿ ನಾಯಕರೊಬ್ಬರ ನೇತೃತ್ವದಲ್ಲಿ ಮುಂಬೈನ ಹಿಂದೂ ಸಂಘಟನೆಗಳ ಸದಸ್ಯರು ಲೆನ್ಸ್‌ಕಾರ್ಟ್ ಶೋ ರೂಂಗೆ ನುಗ್ಗಿ ಪ್ರತಿಭಟಿಸಿದ್ದು ತಿಲಕ ಹಚ್ಚಿ, ಅವರ ಕೈಗೆ ಪವಿತ್ರ ದಾರಗಳನ್ನು ಕಟ್ಟಿ ಘೋಷಣೆಗಳನ್ನು ಕೂಗಿದರು.

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ನಾಯಕಿ ನಾಜಿಯಾ ಇಲಾಹಿ, ಇತರ ಕಾರ್ಯಕರ್ತರೊಂದಿಗೆ ಮುಂಬೈನ ಲೆನ್ಸ್‌ಕಾರ್ಟ್ ಅಂಗಡಿಗೆ ನುಗ್ಗಿ ಸಿಬ್ಬಂದಿಯನ್ನು ಕಟುವಾಗಿ ಪ್ರಶ್ನಿಸಿದರು. ಆವರಣದೊಳಗೆ "ಜೈ ಶ್ರೀ ರಾಮ್" ಘೋಷಣೆಗಳನ್ನು ಸಹ ಕೂಗಿದರು. ಅಂಗಡಿಯ ವ್ಯವಸ್ಥಾಪಕ ಮೊಹ್ಸಿನ್ ಖಾನ್ ನನ್ನು ನಾಜಿಯಾ ಇಲಾಹಿ ಆಪಾದಿತ ನಿರ್ಬಂಧಗಳ ಬಗ್ಗೆ ಪ್ರಶ್ನಿಸಿದರು. ವೈರಲ್ ಆಗಿರುವ ವಿಡಿಯೋದಲ್ಲಿ, "ನೀವು ಮೊಹ್ಸಿನ್ ಖಾನ್ ಆಗಿರುವುದರಿಂದ ತಿಲಕ ಧರಿಸುವುದನ್ನು ನಿಷೇಧಿಸಲಾಗಿದೆಯೇ?" ಎಂದು ಅವರು ಕೇಳುತ್ತಿರುವುದು ಕೇಳಬಹುದಾಗಿದೆ.

Nazia elahi khan
ಧರ್ಮದ ವಿಚಾರವಾಗಿ 'The Rebel Kid' ಅಪೂರ್ವ ಮುಖಿಜಾ ಆನ್ ಲೈನ್ ನಲ್ಲಿ ವಿವಾದಕ್ಕೆ ಗುರಿ! Video ನೋಡಿ...

ಅಂಗಡಿಯ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಾಜಿಯಾ ಇಲಾಹಿ, ಆಡಳಿತ ಮಂಡಳಿಯು ಒಂದು ಧರ್ಮವನ್ನು ಇನ್ನೊಂದಕ್ಕಿಂತ ಹೆಚ್ಚಾಗಿ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು. ಇದು ಹಿಂದೂ ರಾಷ್ಟ್ರ. ಮಾಲೀಕರು ಕ್ಷಮೆಯಾಚಿಸದಿದ್ದರೆ, ಲೆನ್ಸ್‌ಕಾರ್ಟ್ ಅನ್ನು ಬಹಿಷ್ಕರಿಸಲಾಗುವುದು ಅಥವಾ ಅದರ ಎಲ್ಲಾ ಮಳಿಗೆಗಳನ್ನು ಮುಚ್ಚಲಾಗುವುದು" ಎಂದು ಅವರು ಹೇಳಿದರು. ನಾಜಿಯಾ ಹಿಂದೂ ಉದ್ಯೋಗಿಗಳನ್ನು ಮುಂದೆ ಕರೆದು ಅವರ ಹಣೆಗೆ ತಿಲಕ ಹಚ್ಚಿ, ಒಬ್ಬರ ಧಾರ್ಮಿಕ ಗುರುತನ್ನು ವ್ಯಕ್ತಪಡಿಸುವಲ್ಲಿ ಯಾವುದೇ ನಾಚಿಕೆ ಇರಬಾರದು ಎಂದು ಹೇಳಿದ್ದು ಪರಿಸ್ಥಿತಿ ಉಲ್ಬಣಗೊಂಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com