'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ವಿಚಾರದಲ್ಲಿ ನನ್ನನ್ನು ಅನಗತ್ಯವಾಗಿ ಎಳೆದು ತರಲಾಯಿತು; ಅದು ಮುಗಿದ ಅಧ್ಯಾಯ: ನರವಣೆ

ರಕ್ಷಣಾ ಸಚಿವಾಲಯ ಪುಸ್ತಕವನ್ನು ಪರಿಶೀಲಿಸುವವರೆಗೆ ಅದನ್ನು ತಡೆಹಿಡಿಯುವಂತೆ ಪ್ರಕಾಶಕರಿಗೆ ಸೂಚನೆ ನೀಡಿತ್ತು. ನನ್ನ ಮಟ್ಟಿಗೆ ವಿಷಯ ಅಲ್ಲಿಗೆ ಮುಗಿದು ಹೋಗಿತ್ತು. ನಾನು ಆ ವಿಷಯವನ್ನು ಅಲ್ಲಿಗೆ ಬಿಟ್ಟಿದ್ದೆ.
MM Naravane
ಎಂ.ಎಂ.ನರವಣೆ
Updated on

ನವದೆಹಲಿ: 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಎಂಬ ಅಪ್ರಕಟಿತ ಆತ್ಮಚರಿತ್ರೆ ಪುಸ್ತಕದ ವಿಷಯದಲ್ಲಿ ತಮ್ಮನ್ನು ಅನಗತ್ಯವಾಗಿ ಎಳೆದು ತರಲಾಯಿತು ಎಂದು ಮಾಜಿ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಹೇಳಿದ್ದಾರೆ.

‘ದಿ ಕ್ಯೂರಿಯಸ್ ಅಂಡ್ ದಿ ಕ್ಲಾಸಿಫೈಡ್: ಅನ್‌ಅರ್ಥಿಂಗ್ ಮಿಲಿಟರಿ ಮಿಕ್ಸ್ ಅಂಡ್ ಮಿಸ್ಟರೀಸ್’ಎಂಬ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನರವಣೆ, ತಮ್ಮ ಆತ್ಮಚರಿತ್ರೆ ಪುಸ್ತಕದ ಸುತ್ತ ನಡೆದ ಬೆಳವಣಿಗೆಯನ್ನು ಪ್ರಸ್ತಾಪಿಸಿದ್ದಲ್ಲದೇ, ನಾನು ಆ ಘಟನೆಯಿಂದ ಹೊರ ಬಂದಿದ್ದು, ಈಗಾಗಲೇ ಎರಡು ಪುಸ್ತಕಗಳನ್ನು ಬರೆದಿದ್ದೇನೆ. ಮೂರನೆಯದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ರಕ್ಷಣಾ ಸಚಿವಾಲಯ ಪುಸ್ತಕವನ್ನು ಪರಿಶೀಲಿಸುವವರೆಗೆ ಅದನ್ನು ತಡೆಹಿಡಿಯುವಂತೆ ಪ್ರಕಾಶಕರಿಗೆ ಸೂಚನೆ ನೀಡಿತ್ತು. ನನ್ನ ಮಟ್ಟಿಗೆ ವಿಷಯ ಅಲ್ಲಿಗೆ ಮುಗಿದು ಹೋಗಿತ್ತು. ನಾನು ಆ ವಿಷಯವನ್ನು ಅಲ್ಲಿಗೆ ಬಿಟ್ಟಿದ್ದೆ. ನನ್ನ ಪಾಲಿಗೆ ಅದು ಮುಗಿದ ಅಧ್ಯಾಯ. ಆದರೆ, ಅನಗತ್ಯವಾಗಿ ನನ್ನನ್ನು ಉಲ್ಲೇಖಿಸುವುದು, ಪ್ರಕಟವಾಗದ ಪುಸ್ತಕದ ವಿಷಯಕ್ಕೆ ನನ್ನನ್ನು ಎಳೆದು ತಂದು ಸುದ್ದಿಯಾಗುವಂತೆ ಮಾಡಿದ್ದು ಅಗತ್ಯವಿರಲಿಲ್ಲ ಎಂದು ನರವಣೆ ತಿಳಿಸಿದ್ದಾರೆ.

ನರವಣೆ ಅವರ ಇತ್ತೀಚಿನ ಪುಸ್ತಕವು ಮನರಂಜನಾ ಓದಿಗಾಗಿ ಸಿದ್ಧಪಡಿಸಲಾಗಿದೆ. ರೂಪಾ ಪಬ್ಲಿಕೇಷನ್ಸ್ ಹೊರತಂದಿರುವ ಈ ಪುಸ್ತಕವು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಸಂಬಂಧಿಸಿದ ಕೆಲವು ರೋಚಕ ಕಥೆಗಳು ಮತ್ತು ದಂತಕಥೆಗಳನ್ನು ಒಳಗೊಂಡಿದೆ.

MM Naravane
ನನ್ನ ಆತ್ಮಚರಿತ್ರೆ ಇನ್ನೂ ಪ್ರಕಟವಾಗಿಲ್ಲ: ಪ್ರಕಾಶಕರ ಬೆಂಬಲಕ್ಕೆ ನಿಂತ ಮಾಜಿ ಸೇನಾ ಮುಖ್ಯಸ್ಥ ನರವಾಣೆ

ಪುಸ್ತಕದಲ್ಲಿ ನರವಣೆ ಅವರು ಭಾರತೀಯ ಸಶಸ್ತ್ರ ಪಡೆಗಳಲ್ಲಿ ಬಳಕೆಯಾಗುವ ‘ಜೈ ಹಿಂದ್’ ಅಭಿನಂದನೆಯ ಮೂಲವನ್ನು ಸ್ವಾತಂತ್ರ್ಯ ಚಳವಳಿಯಿಂದ ಹಿಡಿದು ಸೇನೆಯಲ್ಲಿ ಅದರ ಅಳವಡಿಕೆಯವರೆಗೆ ವಿವರಿಸಿದ್ದಾರೆ.

ಜೈ ಹಿಂದ್ ಮೊದಲು ಭಾರತೀಯ ವಾಯುಪಡೆಯಲ್ಲಿ ಬಳಕೆಯಾಯಿತು. ನಂತರ ಸೇನೆ ಮತ್ತು ನೌಕಾಪಡೆಯಲ್ಲೂ ಅಳವಡಿಸಿಕೊಳ್ಳಲಾಯಿತು. ಹಿಂದೆ ಸೆಲ್ಯೂಟ್ ಮಾಡುವಾಗ ಯಾವುದೇ ಶಬ್ದ ಮಾಡುತ್ತಿರಲಿಲ್ಲ. ಆಯಾ ರೆಜಿಮೆಂಟ್‌ಗಳು ‘ಸತ್ ಶ್ರೀ ಅಕಾಲ್’ ಅಥವಾ ‘ರಾಮ್ ರಾಮ್’ ಎಂಬ ತಮ್ಮದೇ ಆದ ಘೋಷಣೆಗಳನ್ನು ಬಳಸುತ್ತಿದ್ದವು.

ಈ ಪುಸ್ತಕವು ಅಸ್ಸಾಂ ರೆಜಿಮೆಂಟ್‌ನ ಬದ್ಲುರಾಮ್‌ನ ಕಥೆ ಸೇರಿದಂತೆ ಮಿಲಿಟರಿ ದಂತಕಥೆಗಳ ಬಗ್ಗೆಯಾಗಿದೆ. ನರವಾಣೆ ಅವರ ಪ್ರಕಾರ, ಬದ್ಲುರಾಮ್ 1944 ರಲ್ಲಿ ಕೊಹಿಮಾ ಕದನದ ಸಮಯದಲ್ಲಿ ನಿಧನರಾದರು, ಆದರೆ ಪಡಿತರವನ್ನು ಅವರ ಹೆಸರಿನಲ್ಲಿ ವಿತರಿಸುವುದನ್ನು ಮುಂದುವರೆಸಲಾಯಿತು, ಯುದ್ಧದ ನಿರ್ಣಾಯಕ ಹಂತದಲ್ಲಿ ಅವರ ಘಟಕವನ್ನು ಅಜಾಗರೂಕತೆಯಿಂದ ಉಳಿಸಿಕೊಂಡರು.

ಈ ಘಟನೆಯು ನಂತರ ಜನಪ್ರಿಯ ರೆಜಿಮೆಂಟಲ್ ಹಾಡು "ಬದ್ಲುರಾಮ್ ಕಾ ಬದನ್" ಗೆ ಸ್ಫೂರ್ತಿ ನೀಡಿತು, ಇದನ್ನು ಅಸ್ಸಾಂ ರೆಜಿಮೆಂಟ್‌ನ ಅನಧಿಕೃತ ಗೀತೆ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.

MM Naravane
ಕೇಂದ್ರ ಸರ್ಕಾರದಿಂದ ಮುಂದಿನ ಸಿಡಿಎಸ್ ಆಯ್ಕೆ ಪ್ರಕ್ರಿಯೆ ಶುರು: ಜನರಲ್ ಎಂ.ಎಂ. ನರವಣೆ ಹೆಸರು ಮುಂಚೂಣಿಯಲ್ಲಿ

ಈ ವರ್ಷದ ಆರಂಭದಲ್ಲಿ ನವರಣೆ ಅವರ ‘ಅಪ್ರಕಟಿತ ಆತ್ಮಚರಿತ್ರೆ’ಯಾದ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪುಸ್ತಕದ ವಿಚಾರ ರಾಜಕೀಯ ವಲಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸತ್ತಿನಲ್ಲಿ ನರವಣೆ ಅವರ ಆತ್ಮಚರಿತ್ರೆಯ ಆಯ್ದ ಭಾಗಗಳನ್ನು ಉಲ್ಲೇಖಿಸಿದ್ದರು.

ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ನೇತೃತ್ವದ ಸರ್ಕಾರ ತೆಗೆದುಕೊಂಡ ನಿಲುವಿನ ಬಗ್ಗೆ ಪ್ರಸ್ತಾಪಿಸಲಾಗಿತ್ತು ಎಂದು ಹೇಳಲಾಗುವ ವಿಚಾರದ ಸುತ್ತ ರಾಜಕೀಯ ಜಟಾಪಟಿಗೂ ಕಾರಣವಾಗಿತ್ತು. ಪೆಬ್ರವರಿಯಲ್ಲಿ ಅಪ್ರಕಟಿತ ಪುಸ್ತಕದ ಮಾಹಿತಿಯನ್ನು ಉಲ್ಲೇಖಿಸದಂತೆ ತಡೆಯಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com