'ಬಿಜೆಪಿ ಭಯದಿಂದ AAP ಬಿಟ್ಟಿಲ್ಲ, ಅಸಹ್ಯದಿಂದ ಹೊರ ಬಂದ್ದಿದ್ದೇನೆ': ರಾಘವ್ ಚಡ್ಡಾ

ಆಮ್ ಆದ್ಮಿ ಪಕ್ಷವು ಈಗ ತಪ್ಪು ಹಾದಿಯಲ್ಲಿ ನಡೆಯುತ್ತಿದೆ. ಪರಿಣಾಮವಾಗಿ, ಒಬ್ಬೊಬ್ಬರಾಗಿ, ಅನೇಕ ನಾಯಕರು ಆಮ್ ಆದ್ಮಿ ಪಕ್ಷವನ್ನು ತೊರೆಯುತ್ತಿದ್ದಾರೆ" ಎಂದು ಚಡ್ಡಾ ಆರೋಪಿಸಿದ್ದಾರೆ.
Raghav Chadha
ರಾಘವ್ ಚಡ್ಡಾ
Updated on

ನವದೆಹಲಿ: ಆಮ್ ಆದ್ಮಿ ಪಕ್ಷದಿಂದ ಹೊರಬಂದ ಒಂದು ದಿನದ ನಂತರ, ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರು, ಆಪ್ ತನ್ನ ಮೂಲ ತತ್ವಗಳಿಂದ ವಿಮುಖವಾಗಿದೆ ಮತ್ತು ಪ್ರಾಮಾಣಿಕ ಕಾರ್ಯಕರ್ತರಿಗೆ ಇನ್ನು ಮುಂದೆ ಅಲ್ಲಿ ಜಾಗ ಇಲ್ಲ ಎಂದು ಶನಿವಾರ ಹೇಳಿದ್ದಾರೆ.

"ಇಂದು, ಆಮ್ ಆದ್ಮಿ ಪಕ್ಷವನ್ನು ತಮ್ಮ ರಕ್ತ ಮತ್ತು ಬೆವರಿನಿಂದ ಪೋಷಿಸಿ, ಹೆಚ್ಚಿನ ನಿರೀಕ್ಷೆಗಳೊಂದಿಗೆ ಸೇರಿದ ಪ್ರತಿಯೊಬ್ಬ ನಿಜವಾದ ದೇಶಭಕ್ತ ಆಮ್ ಆದ್ಮಿ ಪಕ್ಷವನ್ನು ತೊರೆದಿದ್ದಾರೆ ಅಥವಾ ಅದನ್ನು ತೊರೆಯುತ್ತಿದ್ದಾರೆ ಎಂದು ಚಡ್ಡಾ ಹೇಳಿದ್ದಾರೆ.

ಪ್ರತಿಯೊಬ್ಬ ಪ್ರಾಮಾಣಿಕ, ಶ್ರಮಶೀಲ ವ್ಯಕ್ತಿಯು ಇನ್ನು ಮುಂದೆ ಆಮ್ ಆದ್ಮಿ ಪಕ್ಷದಲ್ಲಿ ಕೆಲಸ ಮಾಡಲು ಅವಕಾಶವಿಲ್ಲ ಎಂದು ಭಾವಿಸುತ್ತಾನೆ. ಆಮ್ ಆದ್ಮಿ ಪಕ್ಷವು ಈಗ ತಪ್ಪು ಹಾದಿಯಲ್ಲಿ ನಡೆಯುತ್ತಿದೆ. ಪರಿಣಾಮವಾಗಿ, ಒಬ್ಬೊಬ್ಬರಾಗಿ, ಅನೇಕ ನಾಯಕರು ಆಮ್ ಆದ್ಮಿ ಪಕ್ಷವನ್ನು ತೊರೆಯುತ್ತಿದ್ದಾರೆ" ಎಂದು ಚಡ್ಡಾ ಆರೋಪಿಸಿದ್ದಾರೆ.

Raghav Chadha
ರಾಘವ್ ಚಡ್ಡಾ, ಇತರರು ಎಎಪಿ ಬಿಟ್ಟು ಹೋಗುತ್ತಿರಲಿಲ್ಲ...: ಅಣ್ಣಾ ಹಜಾರೆ ಸ್ಫೋಟಕ ಹೇಳಿಕೆ

ಇನ್ನೂ ಅನೇಕ ಸಂಸದರು ಒಟ್ಟಿಗೆ ಪಕ್ಷವನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ಚಡ್ಡಾ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಒಬ್ಬರಲ್ಲ, ಇಬ್ಬರಲ್ಲ, ಮೂವರಲ್ಲ, ನಾಲ್ವರಲ್ಲ, ಐದು ಅಲ್ಲ, ಆರು ಅಲ್ಲ, ಏಳು ಸಂಸದರು ಒಟ್ಟಿಗೆ ಆಮ್ ಆದ್ಮಿ ಪಕ್ಷವನ್ನು ತೊರೆಯುತ್ತಿದ್ದಾರೆ. ಏಕೆಂದರೆ ಆಮ್ ಆದ್ಮಿ ಪಕ್ಷವು ಭ್ರಷ್ಟ ಮತ್ತು ರಾಜಿ ಮಾಡಿಕೊಂಡ ಕೈಗಳಲ್ಲಿ ಸಿಲುಕಿದೆ ಎಂದು" ಎಂದು ಹೇಳಿದ್ದಾರೆ.

ಬಿಜೆಪಿ ಭಯದಿಂದ ಪಕ್ಷ ತೊರೆದಿದ್ದಾರೆ ಎಂಬ ಎಎಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಚಡ್ಡಾ, ಈ ನಿರ್ಧಾರವು ಭಯಕ್ಕಿಂತ ಹೆಚ್ಚಾಗಿ ಭ್ರಮನಿರಸನದಿಂದ ಹೊರ ಬಂದಿದ್ದೇನೆ ಎಂದು ಪ್ರತಿಪಾದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com