‘ಭಾರತವನ್ನು ಟಾರ್ಗೆಟ್ ಮಾಡಲು ಶತ್ರು ರಾಷ್ಟ್ರಗಳ ಅಸ್ತ್ರ ಡ್ರಗ್ಸ್, ಕ್ಷಣಿಕ ಸುಖಕ್ಕೆ ಅಮೂಲ್ಯ ಜೀವನ ನಾಶ ಮಾಡಿಕೊಳ್ಳಬೇಡಿ’: ಪ್ರಧಾನಿ ಮೋದಿ ಎಚ್ಚರಿಕೆ

ಡ್ರಗ್ಸ್‌ ನಿಮಗೆ ಕೆಲಕಾಲ ‘ಸುಖ’ ನೀಡಬಹುದು. ಆದರೆ ಅದು ನಿಮ್ಮ ಇಡೀ ವೃತ್ತಿಜೀವನ ಮತ್ತು ವೈಯಕ್ತಿಕ ಬದುಕನ್ನು ‘ಹಾಳು’ ಮಾಡಿಬಿಡುತ್ತದೆ ಎಂದು ಕರೆ ನೀಡಿದರು.
Enemy nations use drugs to target Indian youths
ಪ್ರಧಾನಿ ಮೋದಿ
Updated on

ನವದೆಹಲಿ: ಮಾದಕ ವಸ್ತುಗಳ ಬಳಕೆ ದೇಶದ ಯುವಜನತೆಯ ಭವಿಷ್ಯಕ್ಕೆ ದೊಡ್ಡ ಅಪಾಯವಾಗಿದ್ದು, ಶತ್ರು ರಾಷ್ಟ್ರಗಳು ಯುವಕರನ್ನು ಗುರಿಯಾಗಿಸಲು ಡ್ರಗ್ಸ್‌ ಪೂರೈಕೆಯನ್ನು ತಮ್ಮ ಭಯೋತ್ಪಾದಕ ಯೋಜನೆಗಳ ಭಾಗವಾಗಿ ಬಳಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ.

ಭಾನುವಾರ ‘ನಶಾ ಮುಕ್ತ ಯುವ ಫಾರ್ ವಿಕಸಿತ ಭಾರತ ಸಂಕಲ್ಪ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಯುವಕರು ಮಾದಕ ವ್ಯಸನದಿಂದ ದೂರವಿರುವ ಸಂಕಲ್ಪ ಮಾಡಬೇಕು. ಡ್ರಗ್ಸ್‌ ನಿಮಗೆ ಕೆಲಕಾಲ ‘ಸುಖ’ ನೀಡಬಹುದು. ಆದರೆ ಅದು ನಿಮ್ಮ ಇಡೀ ವೃತ್ತಿಜೀವನ ಮತ್ತು ವೈಯಕ್ತಿಕ ಬದುಕನ್ನು ‘ಹಾಳು’ ಮಾಡಿಬಿಡುತ್ತದೆ ಎಂದು ಕರೆ ನೀಡಿದರು.

‘ಯುವಕರೇ ದೇಶದ ಭವಿಷ್ಯ’

ದೇಶದ ಯುವಜನತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿರುವುದು ಅತ್ಯಂತ ಅಗತ್ಯ ಎಂದು ಪ್ರಧಾನಿ ಹೇಳಿದರು. ಯುವಕರು ಎಲ್ಲ ರೀತಿಯ ಮಾದಕ ವಸ್ತುಗಳ ವ್ಯಸನದಿಂದ ದೂರವಿದ್ದಾಗ ಮಾತ್ರ ಆರೋಗ್ಯಕರ ಹಾಗೂ ಶಕ್ತಿಶಾಲಿ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಯುವಕರೇ ದೇಶದ ಭವಿಷ್ಯ ಎಂಬುದು ಶತ್ರು ರಾಷ್ಟ್ರಗಳಿಗೆ ತಿಳಿದಿದೆ. ಹೀಗಾಗಿ, ಯುವಜನತೆಯನ್ನು ದುರ್ಬಲಗೊಳಿಸುವ ಉದ್ದೇಶದಿಂದ ಅವು ಡ್ರಗ್ಸ್‌ ಪೂರೈಕೆಯನ್ನು ಭಯೋತ್ಪಾದಕ ಚಟುವಟಿಕೆಗಳ ಭಾಗವಾಗಿ ಬಳಸುತ್ತಿವೆ ಎಂದು ಮೋದಿ ಆರೋಪಿಸಿದರು.

Enemy nations use drugs to target Indian youths
'PM ಮೋದಿ ದೇಶದಲ್ಲಿ ಎಲ್ಲವನ್ನೂ ಅದ್ಭುತವಾಗಿ ಮಾಡುತ್ತಿರುವುದಾದರೇ, ನೀವು ಭಾರತವನ್ನು ಪ್ರೀತಿಸುವುದಾದರೇ ದುಬೈನಲ್ಲಿ ಏಕೆ ವಾಸಿಸಬೇಕು'

‘ವ್ಯಸನದಿಂದ ಹೊರಬಂದವರು ಹೋರಾಟಗಾರರು’

ಡ್ರಗ್ಸ್‌ ವ್ಯಸನಕ್ಕೆ ಒಳಗಾದವರನ್ನು ಸಮಾಜ ನೋಡುವ ರೀತಿಯಲ್ಲೂ ಬದಲಾವಣೆ ಅಗತ್ಯ ಎಂದು ಹೇಳಿದ ಪ್ರಧಾನಿ ಮೋದಿ, ಮಾದಕ ವ್ಯಸನದಿಂದ ಹೊರಬಂದು ಸಾಮಾನ್ಯ ಜೀವನಕ್ಕೆ ಮರಳುವವರು ನಿಜವಾದ ಹೋರಾಟಗಾರರು. ಅಂತಹವರನ್ನು ಸಮಾಜ ಗೌರವಿಸಬೇಕು ಮತ್ತು ಅವರನ್ನು ತಮ್ಮವರಂತೆ ಸ್ವೀಕರಿಸಬೇಕು ಎಂದು ಕರೆ ನೀಡಿದರು.

“ಸಮಾಜವು ಅವರನ್ನು ಗೌರವಿಸಬೇಕು, ಅಪ್ಪಿಕೊಳ್ಳಬೇಕು ಮತ್ತು ಅವರಿಗೆ ಎರಡನೇ ಅವಕಾಶ ನೀಡಬೇಕು” ಎಂದು ಹೇಳಿದರು.

ಯುವಕರಿಗೆ ‘ನಶಾ ಮುಕ್ತ’ ಸಂಕಲ್ಪ

‘ನಶಾ ಮುಕ್ತ ಯುವ ಫಾರ್ ವಿಕಸಿತ ಭಾರತ ಸಂಕಲ್ಪ ಅಭಿಯಾನ’ದ ಮೂಲಕ ದೇಶದ ಯುವಜನತೆಯಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಅಭಿಯಾನಕ್ಕೆ ವರ್ಚುವಲ್‌ ಆಗಿ ಚಾಲನೆ ನೀಡಿದ ವೇಳೆ ಹೆಚ್ಚಿನ ಸಂಖ್ಯೆಯ ಯುವಕರು ಭಾಗವಹಿಸಿದ್ದರು. ತಮ್ಮನ್ನು Gen-Z ಪ್ರತಿನಿಧಿಗಳೆಂದು ಗುರುತಿಸಿಕೊಂಡಿದ್ದ ಯುವಕರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಆಗ್ರಹಿಸಿ ದೆಹಲಿ ಸೇರಿದಂತೆ ದೇಶದ ವಿವಿಧೆಡೆ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಗಳು ನಡೆದ ಕೆಲವೇ ದಿನಗಳ ಬಳಿಕ ಪ್ರಧಾನಿ ಮೋದಿ ಅವರು ಯುವಜನತೆಯನ್ನು ಉದ್ದೇಶಿಸಿ ಈ ಸಂದೇಶ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com