ಹಳದಿ ರೇಷ್ಮೆ ಧೋತಿ: ಅಯೋಧ್ಯೆ ರಾಮ ಮಂದಿರದ ಅರ್ಚಕರಿಗೆ ಹೊಸ ಡ್ರೆಸ್ ಕೋಡ್

ತಿಳಿ ಹಳದಿ ಬಣ್ಣವನ್ನು ಭಗವಾನ್ ರಾಮನಿಗೆ ಪ್ರಿಯವೆಂದು ಪರಿಗಣಿಸಲಾಗಿದೆ ಮತ್ತು ಆದ್ದರಿಂದ ಆ ಬಣ್ಣವನ್ನೇ ಈ ವಸ್ತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.
diyas lit in Ayodhya Ram Temple
ರಾಮ ಮಂದಿರದ ಆವರಣದಲ್ಲಿ ದೀಪಾಲಂಕಾರ online desk
Updated on

ಅಯೋಧ್ಯೆ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ಶನಿವಾರದಿಂದ (ಆ.15 ರಿಂದ) ಅರ್ಚಕರು ಹೊಸ ವಸ್ತ್ರ ಸಂಹಿತೆಯನ್ನು ಅನುಸರಿಸಲು ಪ್ರಾರಂಭಿಸಿದ್ದಾರೆ. ಎಲ್ಲಾ ಅರ್ಚಕರು ಈಗ ಏಕರೂಪದ ಸಾಂಪ್ರದಾಯಿಕ ಉಡುಪನ್ನು ಧರಿಸುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇವಾಲಯದ ಟ್ರಸ್ಟ್‌ನ ಧಾರ್ಮಿಕ ಸಮಿತಿಯ ಸದಸ್ಯರಾದ ಮಿಥಿಲೇಶ್ ನಂದಿನಿ ಶರಣ್, ರಾಮನಂದಿ ಸಂಪ್ರದಾಯಕ್ಕೆ ಅನುಗುಣವಾಗಿ ಉಡುಪನ್ನು ಸೂಚಿಸಲಾಗಿದೆ ಎಂದು ಹೇಳಿದರು. ಇನ್ನು ಮುಂದೆ ಅರ್ಚಕರು ತಿಳಿ-ಹಳದಿ ರೇಷ್ಮೆ ಧೋತಿಗಳು ಮತ್ತು ಅದಕ್ಕೆ ಹೊಂದಿಕೆಯಾಗುವ ರೇಷ್ಮೆ ಉತ್ತರೀಯಗಳನ್ನು ಧರಿಸುತ್ತಾರೆ.

ತಿಳಿ ಹಳದಿ ಬಣ್ಣವನ್ನು ಭಗವಾನ್ ರಾಮನಿಗೆ ಪ್ರಿಯವೆಂದು ಪರಿಗಣಿಸಲಾಗಿದೆ ಮತ್ತು ಆದ್ದರಿಂದ ಆ ಬಣ್ಣವನ್ನೇ ಈ ವಸ್ತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.

diyas lit in Ayodhya Ram Temple
Watch | ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣ; ಖರ್ಗೆ-ರಿಜಿಜು ವಾಗ್ವಾದ!

ಪುರೋಹಿತರು 'ಪಂಚಕೇಶ್' ಸಂಪ್ರದಾಯವನ್ನು ಅನುಸರಿಸುತ್ತಾರೆ ಅಥವಾ ಸಂಪೂರ್ಣವಾಗಿ ಕ್ಷೌರ ಮಾಡಿಕೊಳ್ಳುತ್ತಾರೆ, ಭಾಗಶಃ ಬೆಳೆದ ಕೂದಲು ಅಥವಾ ಗಡ್ಡವನ್ನು ಅನುಮತಿಸಲಾಗುವುದಿಲ್ಲ. ಸಾಂಪ್ರದಾಯಿಕ ರಾಮನಂದಿ ತಿಲಕವನ್ನು ಧರಿಸುವುದನ್ನು ಸಹ ಕಡ್ಡಾಯಗೊಳಿಸಲಾಗಿದೆ.

ರೇಷ್ಮೆ ವಸ್ತ್ರಗಳ ಪಾವಿತ್ರ್ಯತೆ ಮತ್ತು ಶುದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಲಾಗಿದೆ ಎಂದು ಧಾರ್ಮಿಕ ಸಮಿತಿ ಸದಸ್ಯ ಮಹಂತ್ ರಾಜ್‌ಕುಮಾರ್ ದಾಸ್ ಹೇಳಿದರು.

ರಾಮ ಲಲ್ಲಾ ಅವರ ಪೂಜೆ ಮತ್ತು ಸೇವೆಗೆ ಸಮವಸ್ತ್ರದ ಉಡುಪನ್ನು ಹೆಚ್ಚಿನ ಶಿಸ್ತು, ಏಕರೂಪತೆ ಮತ್ತು ಧಾರ್ಮಿಕ ಘನತೆಯನ್ನು ತರುತ್ತದೆ ಎಂದು ಸಮಿತಿ ಹೇಳಿದೆ. ಹೊಸ ವಸ್ತ್ರ ಸಂಹಿತೆ ಆಗಸ್ಟ್ 15 ರಂದು ಜಾರಿಗೆ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com