

ಸಚಿವರು, ಅಧಿಕಾರಿಗಳು, ಪ್ರಾಂಶುಪಾಲರು ಮತ್ತು ಶಿಕ್ಷಕರು ಸೇರಿದಂತೆ ಸರ್ಕಾರದ ಶಿಕ್ಷಣ ಇಲಾಖೆಯ ಎಲ್ಲರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿದರೆ, ಅವುಗಳ ಸ್ಥಿತಿ 'ಮಾಂತ್ರಿಕವಾಗಿ' ಸುಧಾರಿಸುತ್ತದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಮಂಗಳವಾರ ಹೇಳಿದ್ದಾರೆ.
'ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವ ಎಲ್ಲರೂ, ಸಚಿವರು, ಅಧಿಕಾರಿಗಳು, ಪ್ರಾಂಶುಪಾಲರು ಮತ್ತು ಶಿಕ್ಷಕರು ಸೇರಿದಂತೆ, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು. ನಂತರ ನಮ್ಮ ಸರ್ಕಾರಿ ಶಾಲೆಗಳು ಎಷ್ಟು ಬೇಗನೆ ಮಾಂತ್ರಿಕವಾಗಿ ಸುಧಾರಿಸುತ್ತವೆ ಎಂಬುದನ್ನು ನೋಡಿ' ಎಂದು ದೀಪ್ಕೆ ಟ್ವೀಟ್ನಲ್ಲಿ ಹೇಳಿದ್ದಾರೆ.
ಸರ್ಕಾರಿ ಅಧಿಕಾರಿಗಳನ್ನು ಟೀಕಿಸುತ್ತಾ, ಅವರೆಲ್ಲರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಏಕೆ ಸೇರಿಸುತ್ತಾರೆ? ಅವರಿಗೆ ತಮ್ಮ ಸ್ವಂತ ಕೆಲಸದ ಮೇಲೆ ನಂಬಿಕೆ ಇಲ್ಲವೇ? ಎಂದು ಪ್ರಶ್ನಿಸಿದರು.
ಕಳೆದ ತಿಂಗಳು ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯಲ್ಲಿ ವಾರಗಳ ಕಾಲ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಮುಕ್ತಾಯಗೊಂಡ ನಂತರ, ಸಿಜೆಪಿ ಸದ್ಯ ಒತ್ತಡದ ಗುಂಪಾಗಿ ಉಳಿಯಲಿದೆ ಎಂದು ದೀಪ್ಕೆ ತಿಳಿಸಿದ್ದು, ನಾವು ರಾಜಕೀಯ ಪಕ್ಷವನ್ನು ರಚಿಸುತ್ತಿಲ್ಲ; ನಾವು ಕೇವಲ ಒತ್ತಡದ ಗುಂಪಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದ್ದಾರೆ. ಇದೀಗ ಹಳ್ಳಿಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಇರುವ ಸಮಸ್ಯೆಗಳನ್ನು ಎತ್ತಿ ತೋರಿಸಲು 'ಸ್ಕೂಲ್ ಥಿಕ್ ಕರೋ' ಅಭಿಯಾನವನ್ನು ನಡೆಸುತ್ತಿದೆ.
ಅದರ ಭಾಗವಾಗಿ, ಅಭಿಜಿತ್ ದಿಪ್ಕೆ ಸದ್ಯ ಹಳ್ಳಿಗಳಲ್ಲಿನ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು, ದಿಪ್ಕೆ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ತಮ್ಮ ಹುಟ್ಟೂರು ಸಂತುಕ್ ಪಿಂಪ್ರಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ತಮ್ಮ ಮೊದಲ ಶಾಲಾ ಆಡಿಟ್ ಅನ್ನು ನಡೆಸಿದರು.
ಕಳಪೆ ನೀರು ಸರಬರಾಜು, ಕುಡಿಯುವ ನೀರಿನ ಕೊರತೆ, ಬೆಂಚುಗಳು, ಕೊಳಕು ಶೌಚಾಲಯಗಳು ಮತ್ತು ಮುರಿದ ಕಿಟಕಿಗಳು ಸೇರಿದಂತೆ ವಿದ್ಯಾರ್ಥಿಗಳಿಗೆ ಇರುವ ಕೆಲವು ಸಮಸ್ಯೆಗಳನ್ನು ಪಟ್ಟಿ ಮಾಡಿದರು.
ಮತ್ತೊಂದು ವಿಡಿಯೋ ಹಂಚಿಕೊಂಡ ಅವರು, 'ಸರ್ಕಾರಿ ಶಾಲೆಯ ಒಡೆದ ಕಿಟಕಿಗಳನ್ನು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯ ಬ್ಯಾನರ್ಗಳಿಂದ ಮುಚ್ಚಲಾಗಿದೆ' ಎಂದು ಆರೋಪಿಸಿದರು. ಶಾಲೆಯಲ್ಲಿ ಮುಚ್ಚಿಹೋಗಿರುವ ಶೌಚಾಲಯಗಳನ್ನು ತೋರಿಸುವ ವಿಡಿಯೋವನ್ನು ದೀಪ್ಕೆ ಹಂಚಿಕೊಂಡಿದ್ದಾರೆ.
ಶಿಕ್ಷಣ ಮತ್ತು ಪರೀಕ್ಷಾ ಸುಧಾರಣೆಗಳ ಕುರಿತು ದೀಪ್ಕೆ ಅವರು ತಿಂಗಳುಗಳಿಂದ ಸರ್ಕಾರವನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ. ಬೋಸ್ಟನ್ ವಿಶ್ವವಿದ್ಯಾಲಯದ ಪದವೀಧರರಾಗಿರುವ ದೀಪ್ಕೆ, ತಮ್ಮ ಕಾಕ್ರೋಚ್ ಜನತಾ ಪಾರ್ಟಿ ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡಿದ ನಂತರ ಮೇ ತಿಂಗಳಲ್ಲಿ ಭಾರತಕ್ಕೆ ಮರಳಿದರು.
ಸೋಮವಾರ, ದೀಪ್ಕೆ ತಮ್ಮ ಶೈಕ್ಷಣಿಕ ಅರ್ಹತೆಗಳ ಸತ್ಯಾಸತ್ಯತೆಯನ್ನು ಪ್ರಶ್ನಿಸಲು ಪ್ರಯತ್ನಿಸುತ್ತಿರುವ ವಿಮರ್ಶಕರಿಗೆ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದು, ತಮ್ಮ ಪದವಿ ಮತ್ತು ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದನ್ನು ದೃಢೀಕರಿಸುವ ದಾಖಲೆಗಳನ್ನು ತೋರಿಸಲು ಸಿದ್ಧರಿರುವುದಾಗಿ ಹೇಳಿದರು.
ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಪದವಿಗೆ ಸಂಬಂಧಿಸಿದ ಪುರಾವೆಯನ್ನು ಪಡೆಯಲು ಜನರನ್ನು ಒತ್ತಾಯಿಸಿದರು. ಪ್ರತ್ಯೇಕ ಪೋಸ್ಟ್ನಲ್ಲಿ, 'ಬೋಸ್ಟನ್ ವಿಶ್ವವಿದ್ಯಾಲಯವು ನಾನು ಹಳೆಯ ವಿದ್ಯಾರ್ಥಿಯಾಗಿರುವುದಕ್ಕೆ ನನ್ನ ಬಗ್ಗೆ ಒಂದು ಲೇಖನವನ್ನು ಪ್ರಕಟಿಸಿದೆ' ಎಂದಿದ್ದಾರೆ.