

ನವದೆಹಲಿ: ವಾಯು ಮಾಲಿನ್ಯದ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾನುವಾರ ಒತ್ತಾಯಿಸಿದ್ದು, ಕೇಂದ್ರ ಬಜೆಟ್ನಲ್ಲಿ ಈ ಸಮಸ್ಯೆಯನ್ನು ನಿಭಾಯಿಸಲು "ಸಾಕಷ್ಟು ಹಣ" ನೀಡಬೇಕೆಂದು ಸರ್ಕಾರವನ್ನು ಕೇಳಿಕೊಂಡಿದ್ದಾರೆ.
ಫೇಸ್ಬುಕ್ ಪೋಸ್ಟ್ನಲ್ಲಿ, ನಾಗರಿಕರ ಸಂದೇಶಗಳನ್ನು ಓದಿದ ರಾಹುಲ್ ಗಾಂಧಿ, ವಾಯು ಮಾಲಿನ್ಯವನ್ನು ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಗ್ರಹಿಸಿದರು.
2025 ರ ಚಳಿಗಾಲದ ಅಧಿವೇಶನದಲ್ಲೂ ದೆಹಲಿ ವಾಯು ಮಾಲಿನ್ಯದ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ರಾಹುಲ್ ಗಾಂಧಿ ಒತ್ತಾಯಿಸಿದ್ದರು.
ವಿಡಿಯೋದಲ್ಲಿ, ವಾಯು ಮಾಲಿನ್ಯದ ಬಗ್ಗೆ ಸರ್ಕಾರವು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡುವ ಸಮಯ ಬಂದಿದೆ ಮತ್ತು ಪ್ರಧಾನಿ ಮಾಲಿನ್ಯವನ್ನು ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಬೇಕು... ಈ ಸಮಸ್ಯೆಯನ್ನು ನಿಭಾಯಿಸಲು ಬಜೆಟ್ನಲ್ಲಿ ಸಾಕಷ್ಟು ಹಣ ನೀಡಬೇಕು ಎಂದು" ರಾಹುಲ್ ಗಾಂಧಿ ಹೇಳಿದ್ದಾರೆ.
ಪೋಸ್ಟ್ ಅನ್ನು ಹಂಚಿಕೊಂಡ ರಾಹುಲ್ ಗಾಂಧಿ, "ಕಳೆದ ಕೆಲವು ದಿನಗಳಿಂದ, ಮಾಲಿನ್ಯವು ಜನರ ಜೀವನಕ್ಕೆ ಏನು ಮಾಡುತ್ತಿದೆ ಎಂಬುದರ ಕುರಿತು ಭಾರತೀಯರಿಂದ ಬಂದ ಸಾವಿರಾರು ಸಂದೇಶಗಳನ್ನು ನಾನು ಓದಿದ್ದೇನೆ. ಮಕ್ಕಳು, ಪೋಷಕರು ತಮ್ಮ ನಾಳೆಗಾಗಿ ಆತಂಕಗೊಂಡಿದ್ದಾರೆ. ಭಾರತದಾದ್ಯಂತ ಹಲವು ನಗರಗಳಲ್ಲಿನ ಕುಟುಂಬಗಳು ಇದೇ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಮಾಲಿನ್ಯವು ಇನ್ನು ಮುಂದೆ ಕೇವಲ ಪರಿಸರ ಸಮಸ್ಯೆಯಲ್ಲ; ಇದು ರಾಷ್ಟ್ರೀಯ ಆರೋಗ್ಯ ತುರ್ತುಸ್ಥಿತಿ. ಸಂಸತ್ತು ಅದರ ಬಗ್ಗೆ ಚರ್ಚಿಸಬೇಕು. ಭಾರತೀಯರು ವರದಿಗಳು ಅಥವಾ ವಾಕ್ಚಾತುರ್ಯವನ್ನು ಕೇಳುತ್ತಿಲ್ಲ. ಅವರು ಶುದ್ಧ ಗಾಳಿಯನ್ನು ಕೇಳುತ್ತಿದ್ದಾರೆ" ಎಂದು ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಭಾನುವಾರ ಬೆಳಗ್ಗೆ 'ತುಂಬಾ ಕಳಪೆ ವರ್ಗ'ದಲ್ಲಿಯೇ ಇದ್ದು, ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) ಇಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ 318 ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ತಿಳಿಸಿದೆ.
Advertisement