

ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ್ ಜೊತೆಗೆ 18 ನೇ ಶತಮಾನದ ಮೈಸೂರು ದೊರೆ ಟಿಪ್ಪು ಸುಲ್ತಾನ್ ಹೋಲಿಸುವುದರೊಂದಿಗೆ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಹರ್ಷವರ್ಧನ್ ಸಪ್ಕಲ್ ವಿವಾದ ಹುಟ್ಟುಹಾಕಿದ್ದಾರೆ. ಅವರದು ನಾಚಿಕೆಗೇಡಿನ ಹೇಳಿಕೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕಿಡಿಕಾರಿದ್ದಾರೆ.
ಮಾಲೆಗಾಂವ್ ಮಹಾನಗರ ಪಾಲಿಕೆ ಉಪಮೇಯರ್ ಶಾನ್-ಎ-ಹಿಂದ್ ನಿಹಾಲ್ ಅಹಮದ್ ಅವರ ಕಚೇರಿಯಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರ ಇಡುವುದಕ್ಕೆ ಶಿವಸೇನೆ ಕಾರ್ಪೋರೇಟರ್ ಹಾಗೂ ಹಿಂದೂ ಸಂಘಟನೆಗಳು ಭಾರಿ ವಿರೋಧ ವ್ಯಕ್ತಪಡಿಸಿವೆ.
ಈ ವಿವಾದ ಕುರಿತು ಬುಲ್ಧಾನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಪ್ಕಲ್, ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ ಮತ್ತು ಅವರ ಸ್ವರಾಜ್ಯ ಪರಿಕಲ್ಪನೆ ಉಲ್ಲೇಖಿಸುತ್ತಾ, ಬ್ರಿಟಿಷರ ವಿರುದ್ಧ ಯುದ್ಧಕ್ಕೆ ಟಿಪ್ಪು ಸುಲ್ತಾನನ ಕರೆಯನ್ನು ಉದಾಹರಣೆಯಾಗಿ ನೀಡಿದರು. ಅಲ್ಲದೇ ಅದೇ ಮಾರ್ಗದಲ್ಲಿ ವ್ಯಕ್ತಪಡಿಸಿದ ಆದರ್ಶ ಎಂದು ಪ್ರತಿಪಾದಿಸಿದರು.
"ಆ ಅರ್ಥದಲ್ಲಿ, ಟಿಪ್ಪು ಸುಲ್ತಾನ್ ಭಾರತದ ಯೋಧ ಮತ್ತು ಭೂಮಿಪುತ್ರ. ಅವರು ಎಂದಿಗೂ ವಿಷಕಾರಿ ಸಿದ್ಧಾಂತಗಳನ್ನು ಸ್ವೀಕರಿಸಲಿಲ್ಲ. ಬದಲಿಗೆ ಶೌರ್ಯದ ಸಂಕೇತವಾಗಿ, ನಾವು ಟಿಪ್ಪು ಸುಲ್ತಾನ್ ಅನ್ನು ಶಿವಾಜಿ ಮಹಾರಾಜರಿಗೆ ಸಮಾನವಾಗಿ ಪರಿಗಣಿಸಬೇಕು ಎಂದು ಕಾಂಗ್ರೆಸ್ ನಾಯಕ ಹೇಳಿದರು.
ಸಪ್ಕಾಲ್ ವಿರುದ್ಧ ಫಡ್ನವೀಸ್ ತೀವ್ರ ವಾಗ್ದಾಳಿ ನಡೆಸಿದ್ದು, ಈ ಹೋಲಿಕೆ ಖಂಡನೀಯವಾಗಿದ್ದು, ಸಪ್ಕಲ್ ತನ್ನ ಹೇಳಿಕೆ ಬಗ್ಗೆ ನಾಚಿಕೆಪಡಬೇಕು ಎಂದಿದ್ದಾರೆ.
Advertisement