184 ಕಿ.ಮೀ ಕನ್ವರ್ ಯಾತ್ರೆ: ಬುರ್ಕಾ ಧರಿಸ್ತೀನಿ.. ಆದರೆ ಬೋಲೆನಾಥ್ ಅಜ್ಞಾನ ಕಳೆಯುತ್ತಾರೆ; ಶಿವನಿಗೆ ಜಲಾಭಿಷೇಕ ಮಾಡಿದ ತಮನ್ನಾ, Video!

ತಾನೂ ಇಷ್ಟಪಟ್ಟ ಹುಡುಗನನ್ನು ಮದುವೆಯಾಗುವ ಬಯಕೆ ಈಡೇರಿದ ಹಿನ್ನೆಲೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಶಿವನಿಗೆ ಕನ್ವರ್ ಅರ್ಪಿಸಿದರು. ಹರಿದ್ವಾರದಿಂದ 184 ಕಿಲೋಮೀಟರ್ ದೂರ ನಡೆದುಕೊಂಡು ಹೋಗಿ ಪ್ರಾಚೀನ ನೈಮಿಶಾರಣ್ಯ ತೀರ್ಥ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿದರು.
ಮುಸ್ಲಿಂ ಮಹಿಳೆಯಿಂದ ಕನ್ವರ್ ಯಾತ್ರೆ
ಮುಸ್ಲಿಂ ಮಹಿಳೆಯಿಂದ ಕನ್ವರ್ ಯಾತ್ರೆ
Updated on

ತಾನೂ ಇಷ್ಟಪಟ್ಟ ಹುಡುಗನನ್ನು ಮದುವೆಯಾಗುವ ಬಯಕೆ ಈಡೇರಿದ ಹಿನ್ನೆಲೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಶಿವನಿಗೆ ಕನ್ವರ್ ಅರ್ಪಿಸಿದರು. ಕನ್ವರ್ ನೀರನ್ನು ತೆಗೆದುಕೊಂಡು ಹರಿದ್ವಾರದಿಂದ 184 ಕಿಲೋಮೀಟರ್ ದೂರ ನಡೆದುಕೊಂಡು ಹೋಗಿ ಪ್ರಾಚೀನ ನೈಮಿಶಾರಣ್ಯ ತೀರ್ಥ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿದರು.

ತಮನ್ನಾ ಮಲಿಕ್ ಸಂಭಾಲ್‌ನ ಅಸ್ಮೋಲಿಯ ಬದನ್‌ಪುರ್ ಬಸೇ ಗ್ರಾಮದಿಂದ ಸಂಭಾಲ್ ಕೊಟ್ವಾಲಿ ಪ್ರದೇಶದ ಶಹಜಾದಿ ಸರೈ ಗ್ರಾಮದಲ್ಲಿರುವ ನೈಮಿಶಾರಣ್ಯ ತೀರ್ಥ ಗ್ರಾಮದ ಪ್ರಾಚೀನ ಕ್ಷೇಮ್‌ನಾಥ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಕನ್ವರ್ ಯಾತ್ರೆ ಪೂರ್ಣಗೊಳಿಸಿದರು. ಈ ಪ್ರಯಾಣದ ಸಮಯದಲ್ಲಿ ಅಸ್ಮೋಲಿ ಪೊಲೀಸ್ ಠಾಣೆಯು ತಾಜ್‌ಪುರ ಗ್ರಾಮದಲ್ಲಿ ಭದ್ರತೆ ಒದಗಿಸಿತು. ರೈಸಟ್ಟಿ ಪೊಲೀಸ್ ಠಾಣೆಯು ಬೈಪಾಸ್ ವಾಜಿದ್‌ಪುರಂನಲ್ಲಿ ಭದ್ರತೆ ಒದಗಿಸಿತು. ಸಂಭಾಲ್ ಕೊತ್ವಾಲಿ ಪೊಲೀಸರು ನೈಮಿಶಾರಣ್ಯ ತೀರ್ಥದಲ್ಲಿ ಭದ್ರತೆ ಒದಗಿಸಿದರು. ಮಧ್ಯಾಹ್ನ 1 ಗಂಟೆಗೆ ದೇವಸ್ಥಾನಕ್ಕೆ ಆಗಮಿಸಿದ ತಮನ್ನಾ ಶಿವಲಿಂಗಕ್ಕೆ ಜಲಭಿಷೇಕ ಮಾಡಿದರು.

ತಮನ್ನಾ ಮಲಿಕ್ ಶಿವಭಕ್ತಿಯನ್ನು ನೋಡಲು ನೂರಾರು ಭಕ್ತರು ಜಮಾಯಿಸಿದರು. ಇತರ ಕನ್ವರ್ ಯಾತ್ರಾ ಗುಂಪುಗಳು ಸಹ ಅವರ ದರ್ಶನ ಪಡೆಯಲು ವಿವಿಧ ಸ್ಥಳಗಳಲ್ಲಿ ನಿಂತಿದ್ದವು. 7 ವರ್ಷ ವಯಸ್ಸಿನವರಿಂದ ಹಿಡಿದು 60 ವರ್ಷ ವಯಸ್ಸಿನವರೆಗಿನ ಜನರು ಈ ಮುಸ್ಲಿಂ ಶಿವಭಕ್ತರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡುಬಂದಿತ್ತು. ನೈಮಿಶಾರಣ್ಯ ದೇಗುಲದಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಾಥ್ ಪಂಥದೊಂದಿಗೆ ಸಂಬಂಧ ಹೊಂದಿರುವ ಮಹಂತ್ ಬಾಲಯೋಗಿ ದಿನನಾಥ್, ತಮನ್ನಾಳನ್ನು ಸ್ವಾಗತಿಸಿದರು. ದೇವಾಲಯದಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ್ದು ದೇವಾಲಯವು ಭಕ್ತರಿಂದ ತುಂಬಿತ್ತು.

ತಮನ್ನಾ ಅವರ ಪತಿ ಅಮನ್ ತ್ಯಾಗಿ, ಆಡಳಿತ, ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಮತ್ತು ಪೊಲೀಸರಿಂದ ಸಂಪೂರ್ಣ ಬೆಂಬಲವನ್ನು ಪಡೆದಿರುವುದಾಗಿ ಹೇಳಿದ್ದಾರೆ. ಭದ್ರತಾ ವ್ಯವಸ್ಥೆಗಳು ತುಂಬಾ ಬಿಗಿಯಾಗಿತ್ತು. ಯಾವುದೇ ಸಮಸ್ಯೆ ಆಗಿಲ್ಲ ಎಂದು ಅವರು ಹೇಳಿದರು. ಅಮ್ರೋಹಾ ಮತ್ತು ನೂರ್ಪುರ್ ಸೇರಿದಂತೆ ಅನೇಕ ಸ್ಥಳಗಳಲ್ಲಿ ಜನರು ಅವರನ್ನು ಬೆಂಬಲಿಸಿದರು.

ಅಮನ್ ಅವರು ಮೂರು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಆರ್ಯನ್ ಮತ್ತು ಯಕ್ಷ ಎಂಬ ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದಾರೆ ಎಂದು ತಿಳಿಸಿದರು. ಮದುವೆಯ ನಂತರ ತಮನ್ನಾ ಮನೆಗೆ ಬಂದಾಗ, ಅವರ ಅಜ್ಜಿ ಅವಳಿಗೆ 'ತುಳಸಿ' ಎಂದು ಹೆಸರಿಟ್ಟರು ಎಂದು ಅವರು ಹೇಳಿದರು. ಆದರೂ ಅವರ ಮೂಲ ಹೆಸರು ಬದಲಾವಣೆ ಆಗಿಲ್ಲ. ಬದಲಿಗೆ ಅವರ ಮೂಲ ಹೆಸರಿಗೆ 'ತುಳಸಿ' ಎಂದು ಸೇರಿಸಲಾಗಿದೆ ಎಂದರು.

ಮುಸ್ಲಿಂ ಮಹಿಳೆಯಿಂದ ಕನ್ವರ್ ಯಾತ್ರೆ
ಮಹಾರಾಷ್ಟ್ರ: ಮಾಲೆಗಾಂವ್ ಉಪಮೇಯರ್ ಕೊಠಡಿಯಲ್ಲಿ ಗಾಂಧಿ, ಅಂಬೇಡ್ಕರ್ ಫೋಟೋ ತೆಗೆದು ಟಿಪ್ಪು ಫೋಟೋ; ಭುಗಿಲೆದ್ದ ವಿವಾದ!

ಶಿವಭಕ್ತೆ ತಮನ್ನಾ ಮಲಿಕ್ (ತುಳಸಿ) ಅವರು ನಾನು ಯಾವುದೇ ಸಮಸ್ಯೆ ಅನುಭವಿಸಿಲ್ಲ ಎಂದು ಹೇಳಿದರು. ಆರಂಭದಲ್ಲಿ ಎರಡು ಸ್ಥಳಗಳಲ್ಲಿ ಕೆಲವರು ತಮ್ಮನ್ನು ವಿಚಿತ್ರವಾಗಿ ನೋಡಿದರು. ಇದು ನನಗೆ ಸ್ವಲ್ಪ ಕಸಿವಿಸಿ ಉಂಟುಮಾಡಿತು. ಆದಾಗ್ಯೂ, ಪೊಲೀಸ್ ಆಡಳಿತ ಭದ್ರತೆ ಒದಗಿಸಿದ ನಂತರ, ಪರಿಸ್ಥಿತಿ ಸಂಪೂರ್ಣವಾಗಿ ಸಾಮಾನ್ಯವಾಗಿದೆ ಎಂದರು. ಕೆಲವರು ಅನಗತ್ಯ ಕಾಮೆಂಟ್‌ಗಳನ್ನು ಮಾಡುತ್ತಾರೆ. ಆದರೆ ಅಂತಹ ಜನರ ಬಗ್ಗೆ ಗಮನ ಹರಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು. ನನ್ನ ಪತಿಗೆ ನಾನು ಬುರ್ಖಾ ಧರಿಸುವುದರಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೆ, ಇತರರು ಏಕೆ?" ತಾನೂ ಮೊದಲು ಬುರ್ಖಾ ಧರಿಸುತ್ತಿದ್ದು ಈಗಲೂ ಅದನ್ನು ಧರಿಸುವುದನ್ನು ಮುಂದುವರಿಸಿದ್ದೇನೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com