ಭಾರತದ AI ಸಾಮರ್ಥ್ಯವನ್ನು ಹೈಲೈಟ್ ಮಾಡಿದ ಗೂಗಲ್ ಸಿಇಒ ಸುಂದರ್ ಪಿಚ್ಚೈ: ಯುಎಸ್- ಭಾರತ ಸಹಯೋಗದ ಪ್ರಾಜೆಕ್ಟ್ ಘೋಷಣೆ!

ಭಾರತದ ವೈವಿಧ್ಯತೆ, ಭಾಷಾ ಪರಿಸರ ವ್ಯವಸ್ಥೆ ಮತ್ತು ದೃಢವಾದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಉಲ್ಲೇಖಿಸಿದ ಪಿಚ್ಚೈ, ಇದನ್ನು "ನಾವೀನ್ಯತೆಗಾಗಿ ಪ್ರಬಲ ಅಡಿಪಾಯ" ಮತ್ತು ಜಾಗತಿಕವಾಗಿ AI ಅನ್ನು ಪ್ರಜಾಪ್ರಭುತ್ವಗೊಳಿಸುವ ನೀಲನಕ್ಷೆಯಾಗಿದೆ ಎಂದು ಹೇಳಿದರು.
Sundar Pichai
ಸುಂದರ್ ಪಿಚ್ಚೈ
Updated on

ನವದೆಹಲಿ: ಕೃತಕ ಬುದ್ಧಿಮತ್ತೆಯಲ್ಲಿ ಅಸಾಧಾರಣ ಸಾಧನೆಯತ್ತ ಭಾರತ ಸಾಗುತ್ತಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಬುಧವಾರ ಹೇಳಿದ್ದಾರೆ. ಅಲ್ಲದೇ ದೇಶದ A1 ಬದಲಾವಣೆಯಲ್ಲಿ ಸಹಯೋಗಕ್ಕೆ ಕಂಪನಿಯ ಬದ್ಧತೆಯನ್ನು ಒತ್ತಿ ಹೇಳಿದರು.

AI ನಮ್ಮ ಜೀವಿತಾವಧಿಯ ಅತಿದೊಡ್ಡ ಬದಲಾವಣೆಯಾಗಿದೆ. ಆರೋಗ್ಯದ ರೋಗನಿರ್ಣಯವನ್ನು ಸುಧಾರಿಸುವುದರಿಂದ ಹಿಡಿದು ನೈಜ-ಸಮಯದ ಎಚ್ಚರಿಕೆಗಳೊಂದಿಗೆ ರೈತರಿಗೆ ಬೆಂಬಲ ನೀಡುವವರೆಗೆ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಅವರು ಎತ್ತಿ ತೋರಿಸಿದರು. ಭಾರತದ ವೈವಿಧ್ಯತೆ, ಭಾಷಾ ಪರಿಸರ ವ್ಯವಸ್ಥೆ ಮತ್ತು ದೃಢವಾದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಉಲ್ಲೇಖಿಸಿದ ಪಿಚ್ಚೈ, ಇದನ್ನು "ನಾವೀನ್ಯತೆಗಾಗಿ ಪ್ರಬಲ ಅಡಿಪಾಯ" ಮತ್ತು ಜಾಗತಿಕವಾಗಿ AI ಅನ್ನು ಪ್ರಜಾಪ್ರಭುತ್ವಗೊಳಿಸುವ ನೀಲನಕ್ಷೆಯಾಗಿದೆ ಎಂದು ಹೇಳಿದರು.

AI ಅಳವಡಿಸಿಕೊಳ್ಳುವಾಗ ನಂಬಿಕೆ, ಸುರಕ್ಷತೆ ಮತ್ತು ಒಳಗೊಳ್ಳುವಿಕೆಗೆ ಆದ್ಯತೆ ನೀಡಬೇಕು. ಎಲ್ಲಾ ಭಾಷೆಗಳು ಮತ್ತು ಸ್ಥಳೀಯ ಸಂದರ್ಭಗಳಲ್ಲಿ ಎಐಸಿ ಕೆಲಸ ಮಾಡಬೇಕು. ತಂತ್ರಜ್ಞಾನವು ಪಾರದರ್ಶಕವಾಗಿ, ಜವಾಬ್ದಾರಿಯುತವಾಗಿ ಮತ್ತು ಫಲಿತಾಂಶಗಳಲ್ಲಿ ಆಧಾರವಾಗಿರುವಾಗ ಜನರ ನಂಬಿಕೆಯ ಮೇಲೆ ಅವಲಂಬಿಸಬಹುದಾದ ನೈಜ-ಪ್ರಪಂಚದ ಪ್ರಯೋಜನಗಳನ್ನು ಇದು ತಲುಪಿಸಬೇಕು ಎಂದು ಅವರು ಹೇಳಿದರು.

ಭಾರತ- ಅಮೆರಿಕ ಸಹಯೋಗದ ಹೊಸ ಪಾಜೆಕ್ಟ್ ನ್ನು ಘೋಷಿಸಿದರು. ಯುನೈಟೆಡ್ ಸ್ಟೇಟ್ಸ್, ಭಾರತ ಮತ್ತು ದಕ್ಷಿಣ ಗೋಳಾರ್ಧದಾದ್ಯಂತ ಹಲವಾರು ಸ್ಥಳಗಳ ನಡುವೆ AI ಸಂಪರ್ಕವನ್ನು ಹೆಚ್ಚಿಸಲು ಹೊಸ ಸಬ್ ಸೀ ಕೇಬಲ್ ಮಾರ್ಗಗಳನ್ನು ನಿಯೋಜಿಸುವ ಯೋಜನೆ ಇದಾಗಿದೆ. "Google ಭಾರತದಲ್ಲಿ ಪೂರ್ಣ ಸಂಪರ್ಕವನ್ನು ಹೊಂದಿದೆ. ನಾವು ಒಟ್ಟಿಗೆ ನಿರ್ಮಿಸುತ್ತಿರುವ ಭವಿಷ್ಯದ ಬಗ್ಗೆ ನಾನು ಹೆಚ್ಚು ಉತ್ಸುಕನಾಗಿರುವುದಾಗಿ ಹೇಳಿದರು.

ಭಾರತದ AI ಹಬ್ ನಲ್ಲಿ ಗೂಗಲ್ ಈ ಹಿಂದೆ 15 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದನ್ನು ತಿಳಿಸಿದ ಪಿಚ್ಚೈ, ಇದು ಗಿಗಾವ್ಯಾಟ್-ಪ್ರಮಾಣದ ಕಂಪ್ಯೂಟ್ ಮತ್ತು ಅಂತಾರಾಷ್ಟ್ರೀಯ ಸಬ್‌ಸೀ ಕೇಬಲ್ ಗೇಟ್‌ವೇಯನ್ನು ಹೊಂದಿದ್ದು, ಉದ್ಯೋಗಗಳು ಮತ್ತು ಸುಧಾರಿತ AI ಮೂಲಸೌಕರ್ಯವನ್ನು ದೇಶಕ್ಕೆ ತರುತ್ತದೆ ಎಂದರು.

ವಿದ್ಯಾರ್ಥಿಗಳು ಮತ್ತು ವೃತ್ತಿಪರರನ್ನು ಗುರಿಯಾಗಿಸಿಕೊಂಡು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಗೂಗಲ್ AI ವೃತ್ತಿಪರ ಪ್ರಮಾಣಪತ್ರ ಕಾರ್ಯಕ್ರಮ ಸೇರಿದಂತೆ ಮಹತ್ವಾಕಾಂಕ್ಷೆಯ ಕೌಶಲ್ಯ ಕಾರ್ಯಕ್ರಮಗಳನ್ನು ಅವರು ಬಹಿರಂಗಪಡಿಸಿದರು.

Sundar Pichai
AI ಬಳಕೆಯಲ್ಲಿ ಮುಂಚೂಣಿಯಲ್ಲಿ ಭಾರತ: ಜಗತ್ತಿಗೆ ಪರಿಹಾರ ರೂಪಿಸುತ್ತೇವೆ- ಪ್ರಧಾನಿ ಮೋದಿ

20 ಮಿಲಿಯನ್ ನಾಗರಿಕ ಸೇವಕರನ್ನು ಬೆಂಬಲಿಸಲು ಕರ್ಮಯೋಗಿ ಭಾರತ್ ಜೊತೆಗಿನ ಪಾಲುದಾರಿಕೆ, 10,000 ಶಾಲೆಗಳಿಗೆ Gen AI ಪರಿಕರಗಳನ್ನು ಪರಿಚಯಿಸಲು ಅಟಲ್ ಟಿಂಕರಿಂಗ್ ಲ್ಯಾಬ್‌ಗಳು ಮತ್ತು ಜಾಗತಿಕ ಸಂಶೋಧನೆಯನ್ನು ಮುನ್ನಡೆಸಲು ಸೈನ್ಸ್ ಇಂಪ್ಯಾಕ್ಟ್ ಚಾಲೆಂಜ್‌ಗಾಗಿ USD 30 ಮಿಲಿಯನ್ ಮೊತ್ತದ AI ಇದರಲ್ಲಿ ಸೇರಿದೆ. AIಯನ್ನು ಜವಾಬ್ದಾರಿಯುತವಾಗಿ ಮತ್ತು ಪ್ರಮಾಣದಲ್ಲಿ ವಿಸ್ತರಿಸಲು IITಗಳು, ಸರ್ಕಾರಿ ಏಜೆನ್ಸಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಸಹಯೋಗವನ್ನು ಸುಂದರ್ ಪಿಚ್ಚೈ ಸೂಚಿಸಿದರು.

ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸುಂದರ್ ಪಿಚೈ ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com