AI ಯಿಂದ ಕೆಲಸ ಹೋಗುವುದಿಲ್ಲ, ಮರು ರೂಪಿಸುತ್ತದೆ; ತರಬೇತಿ ಅತ್ಯಂತ ಮುಖ್ಯ: Google CEO ಸುಂದರ್ ಪಿಚ್ಚೈ

ಇಪ್ಪತ್ತು ವರ್ಷ ಹಿಂದೆ ವೃತ್ತಿಪರ ಯೂಟ್ಯೂಬ್ ಕ್ರಿಯೇಟರ್ ಎಂಬ ಕಲ್ಪನೆ ಇರಲಿಲ್ಲ. ಆದರೆ ಇಂದು ವಿಶ್ವದಾದ್ಯಂತ ಲಕ್ಷಾಂತರ ಮಂದಿ ಈ ವೃತ್ತಿಯಲ್ಲಿ ತೊಡಗಿದ್ದಾರೆ. ಇದರಿಂದ ತರಬೇತಿ ಅತ್ಯಂತ ಪ್ರಮುಖವಾಗುತ್ತದೆ ಎಂದು ಅವರು ಹೇಳಿದರು.
Sundar Pichchai
ಸುಂದರ್ ಪಿಚ್ಚೈ
Updated on

ನವದೆಹಲಿ: ಕೃತಕ ಬುದ್ಧಿಮತ್ತೆ (AI) ಉದ್ಯೋಗ ಕ್ಷೇತ್ರವನ್ನು ಮರು ರೂಪಿಸುವುದು—ಕೆಲವು ಕೆಲಸಗಳನ್ನು ಸ್ವಯಂಚಾಲಿತಗೊಳಿಸಿ, ಕೆಲವು ಕೆಲಸಗಳ ಸ್ವರೂಪವನ್ನು ಬದಲಿಸಿ, ಸಂಪೂರ್ಣ ಹೊಸ ವೃತ್ತಿಗಳನ್ನು ಸೃಷ್ಟಿಸುತ್ತದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

ಇಂದು ದೆಹಲಿ‌ನಲ್ಲಿ ನಡೆದ ಇಂಡಿಯಾ AI ಇಂಪ್ಯಾಕ್ಟ್ ಸಮಿಟ್ 2026ರ ನಾಲ್ಕನೇ ದಿನ ಮಾತನಾಡಿದ ಪಿಚೈ ಅವರು, ಇಪ್ಪತ್ತು ವರ್ಷಗಳ ಹಿಂದೆ ವೃತ್ತಿಪರ ಯೂಟ್ಯೂಬ್ ಕ್ರಿಯೇಟರ್ ಎಂಬ ಕಲ್ಪನೆ ಇರಲಿಲ್ಲ. ಆದರೆ ಇಂದು ವಿಶ್ವದಾದ್ಯಂತ ಲಕ್ಷಾಂತರ ಮಂದಿ ಈ ವೃತ್ತಿಯಲ್ಲಿ ತೊಡಗಿದ್ದಾರೆ. ಇದರಿಂದ ತರಬೇತಿ ಅತ್ಯಂತ ಪ್ರಮುಖವಾಗುತ್ತದೆ ಎಂದು ಅವರು ಹೇಳಿದರು.

Sundar Pichchai
AI ಭಾರತದ ಭವಿಷ್ಯ, ಅದಕ್ಕೆ ಮುಕ್ತ ಅವಕಾಶ ಕೊಡಿ, ನಿಯಂತ್ರಣ ನಮ್ಮ ಕೈಯಲ್ಲಿರಲಿ, ಮಕ್ಕಳ ಸುರಕ್ಷತೆಯಿರಲಿ: ಪ್ರಧಾನಿ ಮೋದಿ-Video

ಡಿಜಿಟಲ್ ತರಬೇತಿ

ನಾವು 10 ಕೋಟಿ ಜನರಿಗೆ ಡಿಜಿಟಲ್ ಕೌಶಲ್ಯಗಳಲ್ಲಿ ತರಬೇತಿ ನೀಡಿದ್ದೇವೆ. ನಮ್ಮ ಹೊಸ ಗೂಗಲ್ AI ಪ್ರೊಫೆಷನಲ್ ಪ್ರಮಾಣಪತ್ರವು ಜನರಿಗೆ ತಮ್ಮ ಉದ್ಯೋಗಗಳಲ್ಲಿ AI ನ್ನು ಅರ್ಥಮಾಡಿಕೊಳ್ಳಲು ಮತ್ತು ಬಳಸಲು ಸಹಾಯ ಮಾಡುತ್ತದೆ. ಇದು ಜಾಗತಿಕವಾಗಿ ಲಭ್ಯವಾಗುತ್ತದೆ ಎಂದು ಪಿಚೈ ಹೇಳಿದರು.

AI ನಮ್ಮ ಜೀವನಕಾಲದ ಅತ್ಯಂತ ದೊಡ್ಡ ತಾಂತ್ರಿಕ ವೇದಿಕೆ ಬದಲಾವಣೆಯಾಗಿದ್ದು, ವೇಗವಾದ ಪ್ರಗತಿ ಮತ್ತು ಹೊಸ ಕಂಡುಹಿಡಿಯುವಿಕೆಯ ತೀರದಲ್ಲಿ ನಾವು ನಿಂತಿದ್ದೇವೆ. ಇದು ಉದಯೋನ್ಮುಖ ಆರ್ಥಿಕತೆಗಳಿಗೆ ಹಳೆಯ ಮೂಲಸೌಕರ್ಯಗಳ ಕೊರತೆಯನ್ನು ಮೀರಿ ವೇಗವಾಗಿ ಮುನ್ನಡೆಯಲು ಸಹಾಯ ಮಾಡಬಹುದು ಎಂದರು.

ಎಷ್ಟೇ ಧೈರ್ಯಶಾಲಿ ಅಥವಾ ಹೊಣೆಗಾರಿಕೆಯ ದೃಷ್ಟಿಕೋನ ಇದ್ದರೂ, ಎಲ್ಲಾ ಹಿತಾಸಕ್ತಿದಾರರು ಒಟ್ಟಾಗಿ ಕೆಲಸ ಮಾಡದಿದ್ದರೆ AIಯ ಸಂಪೂರ್ಣ ಪ್ರಯೋಜನಗಳು ಲಭಿಸುವುದಿಲ್ಲ ಎಂದು ಕೂಡ ಹೇಳಿದರು.

Sundar Pichchai
'10 ವರ್ಷ ಹಿಂದೆ ಬ್ಯಾಂಕ್ ಖಾತೆ ಇಲ್ಲದಿದ್ದ ಮುಂಬೈಯ ಒಬ್ಬ ಬೀದಿ ವ್ಯಾಪಾರಿ ಇಂದು ಆನ್‌ಲೈನ್ ನಲ್ಲಿ ವ್ಯವಹರಿಸುತ್ತಾರೆ; ಭಾರತ ಅಭಿವೃದ್ಧಿಯಾಗಿದೆ': ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್

ಸರ್ಕಾರಗಳು ಮಹತ್ವದ ಪಾತ್ರ ವಹಿಸಬೇಕು, ಸ್ಪಷ್ಟ ನಿಯಮಗಳನ್ನು ರೂಪಿಸುವ ನಿಯಂತ್ರಕರಾಗಿ ಮಾತ್ರವಲ್ಲದೆ, ಸಾರ್ವಜನಿಕ ಸೇವೆಗಳಲ್ಲಿ AI ನ್ನು ಅಳವಡಿಸುವ ಹೊಸತನದ ಸಂಸ್ಥೆಗಳಾಗಿಯೂ ಕೆಲಸ ಮಾಡಬೇಕು. ತಂತ್ರಜ್ಞಾನ ಕಂಪನಿಗಳು ಜನರ ಜ್ಞಾನ, ಸೃಜನಶೀಲತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಜನರು ತಮ್ಮ ಕನಸುಗಳನ್ನು ಸಾಧಿಸಲು ಸಹಾಯ ಮಾಡಬೇಕು ಎಂದು ಅವರು ಹೇಳಿದರು.

ಸಣ್ಣದರಿಂದ ದೊಡ್ಡದಾದ ಎಲ್ಲ ವ್ಯವಹಾರಗಳೂ AI ನ್ನು ಬಳಸಿ ನವೀನತೆ ತರಬೇಕು, ತಮ್ಮ ಕ್ಷೇತ್ರಗಳನ್ನು ರೂಪಾಂತರಿಸಬೇಕು, ವಿಸ್ತರಿಸಬೇಕು ಮತ್ತು ಕಾರ್ಮಿಕರನ್ನು ಸಬಲಗೊಳಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿ ದಿನ ನೆನೆಸಿಕೊಂಡ ಪಿಚ್ಚೈ

ಭಾರತದಲ್ಲಿ ತನ್ನ ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಂಡ ಪಿಚೈ, ಚೆನ್ನೈಯಿಂದ ಐಐಟಿ ಖರಗ್ಪುರ್‌ಗೆ ಹೋಗುವಾಗ ಕೊರಮಂಡಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದುದನ್ನು ಹಾಗೂ ವಿಶಾಖಪಟ್ಟಣಂ (ವಿಜಾಗ್) ಮೂಲಕ ಹೋಗುತ್ತಿದ್ದುದನ್ನು ನೆನಪಿಸಿಕೊಂಡರು.ಆ ವರ್ಷಗಳಲ್ಲಿ ರೈಲಿನಲ್ಲಿ ಕುಳಿತಿದ್ದಾಗ, ವಿಜಾಗ್ ಒಂದು ಜಾಗತಿಕ AI ಕೇಂದ್ರವಾಗಬಹುದು ಎಂದು ತಾನು ಊಹಿಸಿರಲಿಲ್ಲ ಎಂದು ಅವರು ಹೇಳಿದರು.

ಅದು ಶಾಂತ ಮತ್ತು ಸರಳ ಸಮುದ್ರ ತೀರದ ನಗರವಾಗಿದ್ದು, ಅಪಾರ ಸಾಮರ್ಥ್ಯ ಹೊಂದಿತ್ತು. ಇಂದು ಅದೇ ನಗರದಲ್ಲಿ, ಭಾರತದಲ್ಲಿ 15 ಬಿಲಿಯನ್ ಡಾಲರ್ ಮೂಲಸೌಕರ್ಯ ಹೂಡಿಕೆಯ ಭಾಗವಾಗಿ, ಗೂಗಲ್ ಸಂಪೂರ್ಣ AI ಹಬ್ ನ್ನು ಸ್ಥಾಪಿಸುತ್ತಿದೆ ಎಂದು ಹೇಳಿದರು.

ಈ ಹಬ್ ಪೂರ್ಣಗೊಂಡ ನಂತರ ಗಿಗಾವಾಟ್ ಮಟ್ಟದ ಗಣಕ ಸಾಮರ್ಥ್ಯ ಮತ್ತು ಹೊಸ ಅಂತಾರಾಷ್ಟ್ರೀಯ ಸಮುದ್ರದಡ ಕೇಬಲ್ ಸಂಪರ್ಕವನ್ನು ಹೊಂದಿರುತ್ತದೆ. ಇದು ಉದ್ಯೋಗಗಳನ್ನು ಸೃಷ್ಟಿಸಿ, ಭಾರತದಾದ್ಯಂತ ಜನರು ಮತ್ತು ಉದ್ಯಮಗಳಿಗೆ ಅತ್ಯಾಧುನಿಕ AI ತಂತ್ರಜ್ಞಾನವನ್ನು ತಲುಪಿಸುತ್ತದೆ ಎಂದು ಹೇಳಿದರು.

ಮಾನವಕುಲ ದೊಡ್ಡ ಕನಸು ಕಂಡಾಗ ಏನು ಸಾಧ್ಯ ಮಾಡಬಹುದು ಎಂಬುದನ್ನು ಇದು ತೋರಿಸುತ್ತದೆ, ಯಾವುದೇ ತಂತ್ರಜ್ಞಾನ ಎಐಗಿಂತ ಹೆಚ್ಚು ದೊಡ್ಡ ಕನಸುಗಳನ್ನು ನನಗೆ ನೀಡುವುದಿಲ್ಲ ಎಂದು ಪಿಚೈ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com