ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗಂಡನಿಲ್ಲದಾಗ ಪ್ರೇಮಿಯನ್ನು ಕರೆಸಿಕೊಂಡ ವಿವಾಹಿತೆ ಮಾಡಿದ್ದು ಘೋರ ಕೃತ್ಯ: ಮರ್ಮಾಂಗ ಕಳೆದುಕೊಂಡು ವ್ಯಕ್ತಿ ನರಳಾಟ!

ಹೊಸ ವರ್ಷಾಚರಣೆಯನ್ನು ಆಚರಿಸುವ ಕನಸಿನೊಂದಿಗೆ ತನ್ನ ಗೆಳತಿಯನ್ನು ಭೇಟಿಯಾಗಲು ಬಂದ ವ್ಯಕ್ತಿಗೆ ಜೀವನವೇ ಕಳೆದುಕೊಂಡಂತಾಗಿದೆ. ಡಿಸೆಂಬರ್ 31ರ ರಾತ್ರಿ 25 ವರ್ಷದ ವಿವಾಹಿತೆಯೊಬ್ಬಳು ತನ್ನ 44 ವರ್ಷದ ಪ್ರೇಮಿಯನ್ನು ಭೇಟಿಯಾಗಲು ಮನೆಗೆ ಆಹ್ವಾನಿಸಿದ್ದಳು.
Published on

ಹೊಸ ವರ್ಷಾಚರಣೆಯನ್ನು ಆಚರಿಸುವ ಕನಸಿನೊಂದಿಗೆ ತನ್ನ ಗೆಳತಿಯನ್ನು ಭೇಟಿಯಾಗಲು ಬಂದ ವ್ಯಕ್ತಿಗೆ ಜೀವನವೇ ಕಳೆದುಕೊಂಡಂತಾಗಿದೆ. ಡಿಸೆಂಬರ್ 31ರ ರಾತ್ರಿ 25 ವರ್ಷದ ವಿವಾಹಿತೆಯೊಬ್ಬಳು ತನ್ನ 44 ವರ್ಷದ ಪ್ರೇಮಿಯನ್ನು ಭೇಟಿಯಾಗಲು ಮನೆಗೆ ಆಹ್ವಾನಿಸಿದ್ದಳು. ಸಿಹಿತಿಂಡಿ ಕೊಡುವ ನೆಪದಲ್ಲಿ ಆಕೆ ಚಾಕುವಿನಿಂದ ಪ್ರೇಮಿಯ ಮರ್ಮಾಂಗವನ್ನೇ ಕತ್ತರಿಸಿದ್ದಾಳೆ. ಸದ್ಯ ಗಾಯಾಳು ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದರೆ ಘಟನೆ ನಂತರ ಮಹಿಳೆ ತಲೆಮರೆಸಿಕೊಂಡಿದ್ದಾಳೆ. ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಮಹಿಳೆ ಮತ್ತು ಪುರುಷ ಸಂಬಂಧಿಕರು ಎಂದು ತಿಳಿದುಬಂದಿದೆ. ಆರೋಪಿ ಮಹಿಳೆ ಬಲಿಪಶುವಿನ ಸಹೋದರಿಯ ಅತ್ತಿಗೆ. ಕಳೆದ ಆರರಿಂದ ಏಳು ವರ್ಷಗಳಿಂದ ಇಬ್ಬರೂ ಸಂಬಂಧ ಹೊಂದಿದ್ದರು. ಅದಾಗಲೇ ಮದುವೆಯಾಗಿದ್ದ ವ್ಯಕ್ತಿಗೆ ಪತ್ನಿಯನ್ನು ಬಿಟ್ಟು ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು. ಇದು ಆಗಾಗ್ಗೆ ಜಗಳಗಳಿಗೆ ಕಾರಣವಾಗುತ್ತಿತ್ತು. ಆಕೆಯ ದೌರ್ಜನ್ಯದಿಂದ ಬೇಸತ್ತ ಆ ವ್ಯಕ್ತಿ 18 ವರ್ಷಗಳಿಂದ ಸಾಂತಾಕ್ರೂಜ್‌ನಲ್ಲಿ ವಾಸಿಸುತ್ತಿದ್ದರೂ, ನವೆಂಬರ್ 2025ರಲ್ಲಿ ಬಿಹಾರಕ್ಕೆ ಹೋಗಿದ್ದನು. ರಾಜ್ಯ ಬಿಟ್ಟು ಹೋಗಿದ್ದರೂ ಅವನಿಗೆ ನೆಮ್ಮದಿ ಇರಲಿಲ್ಲ. ಮಹಿಳೆ ಫೋನ್ ಮೂಲಕ ಅವನಿಗೆ ಬೆದರಿಕೆ ಹಾಕುತ್ತಲೇ ಇದ್ದಳು.

ಡಿಸೆಂಬರ್ 19ರಂದು ಬಿಹಾರದಿಂದ ಮುಂಬೈಗೆ ಹಿಂದಿರುಗಿದ ನಂತರ, ಆ ವ್ಯಕ್ತಿ ಮಹಿಳೆಯಿಂದ ದೂರ ಉಳಿದು ಅವಳನ್ನು ನೋಡುವುದನ್ನು ನಿಲ್ಲಿಸಿದನು. ಆದಾಗ್ಯೂ, ಡಿಸೆಂಬರ್ 31ರಂದು ಬೆಳಗಿನ ಜಾವ 1:30ರ ಸುಮಾರಿಗೆ, ಮಹಿಳೆ ಅವನನ್ನು ತನ್ನ ಮನೆಗೆ ಆಹ್ವಾನಿಸಿದಳು. ಹೊಸ ವರ್ಷದ ಮುನ್ನಾದಿನದಂದು ಅವನಿಗೆ ಸಿಹಿತಿಂಡಿಗಳನ್ನು ನೀಡಲು ಬಯಸಿದ್ದಾಗಿ ಅವಳು ಹೇಳಿದಳು. ಮನೆಗೆ ಬಂದ ಪ್ರೇಮಿಯ ಪ್ಯಾಂಟ್ ಅನ್ನು ತೆಗೆಯಲು ಕೇಳಿದಳು ಎಂದು ವರದಿಯಾಗಿದೆ.

ಸಂಗ್ರಹ ಚಿತ್ರ
Himachal Pradesh: ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಸಾವು: Viral Video ಬಳಿಕ ಪ್ರೊಫೆಸರ್ ಸೇರಿ ನಾಲ್ವರ ವಿರುದ್ಧ ಪ್ರಕರಣ!

ಪ್ರೇಮಿ ಪ್ಯಾಂಟ್ ತೆಗೆದು ಅಂಗಾತ ಮಲಗಿದ್ದಾಗ ಅಡುಗೆಮನೆಗೆ ಹೋಗಿ ತರಕಾರಿ ಕತ್ತರಿಸುವ ಚಾಕುವನ್ನು ತೆಗೆದುಕೊಂಡು ಬಂದು ನಂತರ ಅವಳು ಇದ್ದಕ್ಕಿದ್ದಂತೆ ಅವನ ಮರ್ಮಾಂಗವನ್ನು ಕತ್ತರಿಸಿದ್ದಾಳೆ. ಆ ವ್ಯಕ್ತಿಗೆ ತೀವ್ರ ಗಾಯಗಳಾಗಿದ್ದು ರಕ್ತಸ್ರಾವವಾಗಲು ಪ್ರಾರಂಭಿಸಿತ್ತು. ಪ್ರೇಮಿ ಗಾಯಗೊಂಡ ಸ್ಥಿತಿಯಲ್ಲಿ ಮನೆಗೆ ಮರಳಿದನು. ಅಲ್ಲಿ ಅವನ ಮಗ ಮತ್ತು ಸ್ನೇಹಿತರು ಅವನನ್ನು ಆಸ್ಪತ್ರೆಗೆ ಕರೆದೊಯ್ದರು. ಗಾಯವು ತುಂಬಾ ಆಳವಾಗಿದೆ ಮತ್ತು ಶಸ್ತ್ರಚಿಕಿತ್ಸೆಯ ಅಗತ್ಯವಿರಬಹುದು ಎಂದು ವೈದ್ಯರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com