ಚುನಾವಣೆಗಳಲ್ಲಿ ಸತತ ಸೋಲು: ವಿಡಿಯೋ ಬಿಡುಗಡೆ ಮಾಡಿ AIADMK ಕಾರ್ಯಕರ್ತ ಆತ್ಮಹತ್ಯೆ!

ಮೃತರನ್ನು ಕೆಎಎಸ್ ಮಹೇಂದ್ರನ್ ಎಂದು ಗುರುತಿಸಲಾಗಿದ್ದು, ಅವರು ಎಐಎಡಿಎಂಕೆ ತಂಜಾವೂರು ಪೂರ್ವ ಟ್ರೇಡರ್ಸ್ ವಿಭಾಗದ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.
Stop Suicide (file pic)
ಸಾಂಕೇತಿಕ ಚಿತ್ರ
Updated on

ತಂಜಾವೂರು: ಎಐಎಡಿಎಂಕೆ ಪಕ್ಷದ ಸತತ ಚುನಾವಣಾ ಹಿನ್ನಡೆಗಳಿಂದ ಬೇಸತ್ತ 32 ವರ್ಷದ ಪಕ್ಷದ ಕಾರ್ಯಕರ್ತ ತಂಜಾವೂರು ಜಿಲ್ಲೆಯ ತಿರುಪ್ಪನಂಡಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮೃತರನ್ನು ಕೆಎಎಸ್ ಮಹೇಂದ್ರನ್ ಎಂದು ಗುರುತಿಸಲಾಗಿದ್ದು, ಅವರು ಎಐಎಡಿಎಂಕೆ ತಂಜಾವೂರು ಪೂರ್ವ ಟ್ರೇಡರ್ಸ್ ವಿಭಾಗದ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಅವರಿಗೆ ಪತ್ನಿ ಮತ್ತು ಒಂದು ವರ್ಷದ ಮಗು ಇದೆ.

ಭಾನುವಾರ, ಮಹೇಂದ್ರನ್ ಅವರು ಪಕ್ಷದ ಇತ್ತೀಚಿನ ರಾಜಕೀಯ ಸೋಲುಗಳ ಬಗ್ಗೆ ತೀವ್ರ ದುಃಖವನ್ನು ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಸ್ವಯಂ ಚಿತ್ರೀಕರಿಸಿದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು.

ವಿಡಿಯೋ ಸಂದೇಶದಲ್ಲಿ, ಪಕ್ಷವನ್ನು ಬಲಪಡಿಸಲು ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್) ಅವರ ನಾಯಕತ್ವದಲ್ಲಿ ತಮ್ಮ ಭಿನ್ನಾಭಿಪ್ರಾಯಗಳನ್ನು ತೊರೆದು ಒಂದಾಗಬೇಕೆಂದು ಎಐಎಡಿಎಂಕೆಯ ವಿವಿಧ ಬಣಗಳ ನಾಯಕರು ಮತ್ತು ಕಾರ್ಯಕರ್ತರಿಗೆ ಮನವಿ ಮಾಡಿದರು.

ಮಾಹಿತಿ ಪಡೆದ ನಂತರ, ತಿರುಪ್ಪನಂದಲ್ ಪೊಲೀಸರು ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ತಿರುಪ್ಪನಂದಲ್‌ನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಪಳನಿಸ್ವಾಮಿ ತಿರುಪ್ಪನಂದಲ್‌ಗೆ ಭೇಟಿ ನೀಡಿ ಮೃತ ಕಾರ್ಯಕರ್ತನಿಗೆ ಅಂತಿಮ ನಮನ ಸಲ್ಲಿಸುವ ಮತ್ತು ದುಃಖಿತ ಕುಟುಂಬಕ್ಕೆ ಸಾಂತ್ವನ ಹೇಳುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com