ಆಘಾತಕಾರಿ ವಿಷಯ: ಮಹಾನಗರಗಳ ಪೈಕಿ ಆತ್ಮಹತ್ಯೆ ದರದಲ್ಲಿ ಬೆಂಗಳೂರಿಗೆ ಅಗ್ರಸ್ಥಾನ!

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದೇಶದ ನಗರಗಳಲ್ಲಿ ಆತ್ಮಹತ್ಯೆ ದರಗಳ ಕುರಿತಾದ ಡೇಟಾ, ಬೆಂಗಳೂರನ್ನು ಕಳವಳಕಾರಿ ಸ್ಥಾನದಲ್ಲಿರಿಸಿದೆ. ಮಹಾನಗರಗಳಲ್ಲಿ ಬೆಂಗಳೂರು ಆತ್ಮಹತ್ಯೆಗಳ ಸಂಖ್ಯೆಯಲ್ಲಿ ದೆಹಲಿಯ ನಂತರ ಎರಡನೇ ಸ್ಥಾನದಲ್ಲಿದ್ದರೂ...
Representation purpose only
ಸಂಗ್ರಹ ಚಿತ್ರTNIE
Updated on

ಬೆಂಗಳೂರು: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದೇಶದ ನಗರಗಳಲ್ಲಿ ಆತ್ಮಹತ್ಯೆ ದರಗಳ ಕುರಿತಾದ ಡೇಟಾ, ಬೆಂಗಳೂರನ್ನು ಕಳವಳಕಾರಿ ಸ್ಥಾನದಲ್ಲಿರಿಸಿದೆ. ಮಹಾನಗರಗಳಲ್ಲಿ ಬೆಂಗಳೂರು ಆತ್ಮಹತ್ಯೆಗಳ ಸಂಖ್ಯೆಯಲ್ಲಿ ದೆಹಲಿಯ ನಂತರ ಎರಡನೇ ಸ್ಥಾನದಲ್ಲಿದ್ದರೂ, ಜನಸಂಖ್ಯೆಯ ಪ್ರಕಾರ ಅದರ ಆತ್ಮಹತ್ಯೆ ಅನುಪಾತ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಮಹಾನಗರಗಳಲ್ಲಿ ಮೊದಲ ಸ್ಥಾನವನ್ನು ಗಳಿಸಿದೆ.

2024ರ ಕ್ಯಾಲೆಂಡರ್ ವರ್ಷದ NCRB ಡೇಟಾ ಹೇಳುವ ಪ್ರಕಾರ, 84.99 ಲಕ್ಷ ಜನಸಂಖ್ಯೆಯೊಂದಿಗೆ ಬೆಂಗಳೂರಿನಲ್ಲಿ 2403 ಆತ್ಮಹತ್ಯೆಗಳನ್ನು ತೋರಿಸುತ್ತದೆ. ಇದು ನಗರದ ಆತ್ಮಹತ್ಯೆ ದರವನ್ನು 28.3 ಎಂದು ಉಲ್ಲೇಖಿಸುತ್ತದೆ. ಇನ್ನು ದೆಹಲಿಯಲ್ಲಿ 163.15 ಲಕ್ಷ ಜನಸಂಖ್ಯೆಯಲ್ಲಿ 2905 ಆತ್ಮಹತ್ಯೆಗಳು ಸಂಭವಿಸಿದ್ದು ಇದು ಆತ್ಮಹತ್ಯೆ ದರವನ್ನು 17.8 ಎಂದು ತೋರಿಸುತ್ತದೆ. ಏಕಕಾಲದಲ್ಲಿ ಬಹು ಒತ್ತಡಗಳು ಆತ್ಮಹತ್ಯೆಗೆ ಪ್ರೇರೆಪಿಸುತ್ತದೆ. ಆರ್ಥಿಕ ಸಂಕಷ್ಟ, ನಿರ್ದಿಷ್ಠ ಉದ್ಯೋಗಗಳು, ಹೆಚ್ಚುತ್ತಿರುವ ಜೀವನ ವೆಚ್ಚಗಳು, ಸಂಬಂಧಗಳಲ್ಲಿ ಬಿರುಕು, ಸಾಮಾಜಿಕ ಪ್ರತ್ಯೇಕತೆ ಮತ್ತು ನಿರಂತರವಾಗಿ ಕಾರ್ಯನಿರ್ವಹಿಸಲು ಒತ್ತಡವು ಅತಿರೇಕದ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಸುತ್ತದೆ ಎಂದು ಕ್ಯಾಡಬಮ್ ಆಸ್ಪತ್ರೆಯ ಹಿರಿಯ ಮನಶ್ಶಾಸ್ತ್ರಜ್ಞೆ ನೇಹಾ ಕ್ಯಾಡಬಮ್ ಹೇಳಿದರು.

Representation purpose only
ಬೆಂಗಳೂರಿನಲ್ಲಿ 2 ಪ್ರತ್ಯೇಕ ಅಪಘಾತ: ಇಬ್ಬರ ಸಾವು, ಪೋಷಕರು-ಬೈಕ್ ಮಾಲೀಕರ ವಿರುದ್ಧ ಪೊಲೀಸ್ ಕೇಸ್!

ಒತ್ತಡಗಳನ್ನು ಆರಂಭದಲ್ಲಿ ಅನೇಕರು ಸ್ವತಂತ್ರವಾಗಿ ನಿಭಾಯಿಸಲು ಪ್ರಯತ್ನಿಸುತ್ತಾರೆ. ಆದರೆ ದೀರ್ಘಕಾಲದ ಅನಿಶ್ಚಿತತೆಯು ಖಿನ್ನತೆ, ಆತಂಕ, ಮಾದಕವಸ್ತು ಬಳಕೆ ಮತ್ತು ಅಸಹಾಯಕತೆಯ ಭಾವನೆಗಳಿಗೆ ಕಾರಣವಾಗಬಹುದು. ದುರದೃಷ್ಟವಶಾತ್, ಹಣಕಾಸಿನ ಕಾಳಜಿಗಳು ಸಾಮಾನ್ಯವಾಗಿ ವೃತ್ತಿಪರ ಸಮಾಲೋಚನೆಯನ್ನು ವಿಳಂಬಗೊಳಿಸುತ್ತವೆ, ಅಂದರೆ ರೋಗಲಕ್ಷಣಗಳು ದೈನಂದಿನ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುವಷ್ಟು ತೀವ್ರವಾದ ನಂತರವೇ ಅನೇಕರು ಮನೋವೈದ್ಯಕೀಯ ಸಹಾಯವನ್ನು ಪಡೆಯುತ್ತಾರೆ ಎಂದು ಕ್ಲಿನಿಕಲ್ ಮನಶ್ಶಾಸ್ತ್ರಜ್ಞ ಮೇಘಾ ಶಂಕರ್ ಹೇಳಿದರು.

ಬೆಂಗಳೂರಿನಂತಹ ನಗರದಲ್ಲಿ ಕೈಗಾರಿಕೀಕರಣದ ವಿಷಯದಲ್ಲಿ ಅದರ ಸ್ಯಾಚುರೇಶನ್ ಪಾಯಿಂಟ್ ಮೀರಿ ಕಾರ್ಯನಿರ್ವಹಿಸುತ್ತಿರುವ ಕೆಲಸದ ಒತ್ತಡದ ಸಂದರ್ಭದಲ್ಲಿ, ನಗರವನ್ನು ಕೇವಲ ವಿಕೇಂದ್ರೀಕರಿಸುವುದು ಸಾಕಾಗುವುದಿಲ್ಲ ಎಂದು ತಜ್ಞರು ನಂಬುತ್ತಾರೆ. ವಿಕೇಂದ್ರೀಕರಣವು ಕೆಲವು ಪರಿಸರ ಒತ್ತಡಗಳನ್ನು ಕಡಿಮೆ ಮಾಡಬಹುದು, ಆದರೆ ಆತ್ಮಹತ್ಯೆ ದರಗಳನ್ನು ಜನಸಂಖ್ಯಾ ಸಾಂದ್ರತೆಯಿಂದ ಮಾತ್ರ ನಿರ್ಧರಿಸಲಾಗುವುದಿಲ್ಲ. ಆರ್ಥಿಕ ಅಭಿವೃದ್ಧಿಯ ಜೊತೆಗೆ ಈ ವ್ಯವಸ್ಥೆಗಳನ್ನು ಬಲಪಡಿಸದ ಹೊರತು ಕೈಗಾರಿಕೆಗಳನ್ನು ಸರಳವಾಗಿ ಮರುಹಂಚಿಕೆ ಮಾಡುವುದರಿಂದ ಮಾನಸಿಕ ಅಪಾಯವು ಸ್ವಯಂಚಾಲಿತವಾಗಿ ಕಡಿಮೆಯಾಗುವುದಿಲ್ಲ ಎಂದು ಶಂಕರ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com