

ಚೆನ್ನೈ: ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವು ಮೂರು ತಿಂಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರ ಹೇಳಿಕೆಗಳು ಸರ್ಕಾರವನ್ನು ಉರುಳಿಸುವ ಯಾವುದೇ ಉದ್ದೇಶ ಹೊಂದಿಲ್ಲ ಎಂದು ಡಿಎಂಕೆ ಮಂಗಳವಾರ ಸ್ಪಷ್ಟಪಡಿಸಿದೆ.
ಸ್ಟಾಲಿನ್ ಅವರು ನೀಡಿರುವ ಹೇಳಿಕೆಗಳ ಹಿಂದೆ 'ಸರ್ಕಾರವನ್ನು ವಿಸರ್ಜಿಸುವ ಅಥವಾ ಉರುಳಿಸುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಡಿಎಂಕೆ ಹಿರಿಯ ನಾಯಕ ಮತ್ತು ಮಾಜಿ ಸಚಿವ ತಂಗಮ್ ತೆನ್ನರಸು ಹೇಳಿದ್ದಾರೆ.
'ಸದ್ಯ ಅಧಿಕಾರದಲ್ಲಿರುವ ಸರ್ಕಾರದ ಬಗ್ಗೆ ನಾನು ಹೆಚ್ಚು ಹೇಳಬೇಕಾಗಿಲ್ಲ. ಅದು ಅಧಿಕಾರ ವಹಿಸಿಕೊಂಡಾಗ, ಆರು ತಿಂಗಳ ಕಾಲ ನಾನು ಅದನ್ನು ಟೀಕಿಸುವುದಿಲ್ಲ ಎಂದು ಹೇಳಿದ್ದೆ. ಆದಾಗ್ಯೂ, ಸಂದರ್ಭಗಳು ನನ್ನನ್ನು ಬೇಗ ಮಾತನಾಡುವಂತೆ ಒತ್ತಾಯಿಸಬಹುದು ಎಂಬ ಭಯ ಈಗ ಇದೆ. ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರ ಮೂರು ತಿಂಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ' ಎಂದು ಸ್ಟಾಲಿನ್ ಭಾನುವಾರ ಹೇಳಿದ್ದರು.
'ಸದ್ಯದ ಸರ್ಕಾರವನ್ನು ಆರು ತಿಂಗಳ ಕಾಲ ಟೀಕಿಸುವುದಿಲ್ಲ ಎಂದು ಸ್ಟಾಲಿನ್ ಹೇಳಿದ್ದರು ಮತ್ತು ಸರ್ಕಾರವು ಮೂರು ತಿಂಗಳೂ ಸಹ ಉಳಿಯದಷ್ಟು ಅನಿಶ್ಚಿತ ಸ್ಥಿತಿಯಲ್ಲಿ ಮುಂದುವರಿಯುತ್ತಿದೆ ಎಂದವರು ಟೀಕಿಸಿದ್ದರು. ಈ ಬಗ್ಗೆ ವರದಿಗಾರರು ವಿವಿಧ ರಾಜಕೀಯ ಪಕ್ಷಗಳ ನಾಯಕರನ್ನು ಕೇಳಿದಾಗ, ಡಿಎಂಕೆ ನಾಯಕರು ಆ ರೀತಿ ಮಾತನಾಡಬಾರದಿತ್ತು ಎಂದು ಅವರು ಹೇಳಿದರು. ವಾಸ್ತವದಲ್ಲಿ, ನಮ್ಮ ನಾಯಕರು ಸರ್ಕಾರ ಕುಸಿಯುತ್ತದೆ ಎಂದು ಎಂದಿಗೂ ಹೇಳಿಲ್ಲ ಅಥವಾ ಅದು ಅವರ ನಿಲುವೂ ಅಲ್ಲ' ಎಂದು ಡಿಎಂಕೆ ನಾಯಕರು ಪಕ್ಷದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಇದನ್ನೇ ನಾಯಕರು (ಸ್ಟಾಲಿನ್) ತಮ್ಮ ಭಾಷಣದಲ್ಲಿ ಎತ್ತಿ ತೋರಿಸಿದ್ದಾರೆಯೇ ಹೊರತು ಸರ್ಕಾರವನ್ನು ವಿಸರ್ಜಿಸುವ ಅಥವಾ ಉರುಳಿಸುವ ಉದ್ದೇಶದಿಂದಲ್ಲ. ಸ್ಟಾಲಿನ್ 'ಮೂಲಭೂತವಾಗಿ ಸರ್ಕಾರವು ಮೂರು ತಿಂಗಳು ಉಳಿಯುತ್ತದೆಯೇ ಎಂಬ ಬಗ್ಗೆ ಅನಿಶ್ಚಿತತೆ ಮೂಡಿದೆ ಎಂದಿದ್ದರು' ಎಂದರು.
'ಕೊಲೆಗಳು, ದರೋಡೆಗಳು, ಮಚ್ಚಿನಿಂದ ದಾಳಿಗಳು, ಮಾದಕವಸ್ತು ಕಳ್ಳಸಾಗಣೆ, ವಿದ್ಯುತ್ ಕಡಿತ, ರೈತರ ಪ್ರತಿಭಟನೆಗಳು ಮತ್ತು ಲೈಂಗಿಕ ದೌರ್ಜನ್ಯದಂತಹ ವಿಚಾರಗಳು ದೈನಂದಿನ ವರದಿಗಳನ್ನು ನೋಡುತ್ತಿರುವಾಗ ಅವರು ಹೇಗೆ ಮೌನವಾಗಿರಲು ಸಾಧ್ಯ. ಆ ಸಂದರ್ಭದಲ್ಲಿ ಸರ್ಕಾರ ಮೂರು ತಿಂಗಳುಗಳಾದರೂ ಮುಂದುವರಿಯಬಹುದೇ ಎಂಬುದರ ಬಗ್ಗೆ ಯಾರಿಗಾದರೂ ಆಶ್ಚರ್ಯ ಉಂಟಾಗುತ್ತದೆ ಎಂದು ಅವರು (ಸ್ಟಾಲಿನ್) ಹೇಳಿದರು' ಎಂದು ತೆನ್ನರಸು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡು ಒಂದು ತಿಂಗಳಾಗಿದೆ ಮತ್ತು ಈ ಅವಧಿಯಲ್ಲಿ ಟಿವಿ ಮತ್ತು ಪತ್ರಿಕೆಗಳ ವರದಿಗಳು ಕೊಲೆಗಳು, ದರೋಡೆಗಳು, ಲೈಂಗಿಕ ದೌರ್ಜನ್ಯಗಳು ಮತ್ತು ಮಾದಕವಸ್ತು ಕಳ್ಳಸಾಗಣೆಯಿಂದ ತುಂಬಿವೆ. ಆಡಳಿತ ಪಕ್ಷದ ಕಾರ್ಯಕರ್ತರು ವಿವಿಧ ಅಪರಾಧ ಘಟನೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದರು.
Advertisement