ಮುಂದಿನ ಚುನಾವಣೆಯನ್ನು ಈಗಾಗಲೇ ಗೆದ್ದಿದ್ದೇವೆ: ಎಲ್ಲಾ ವಿಷವನ್ನು ನುಂಗುವ ಶಿವನಂತೆ 'ಕಾಂಗ್ರೆಸ್'; ರಾಹುಲ್‌ ಗಾಂಧಿ

ಇಂಡಿಯಾ ಒಕ್ಕೂಟದ ನಡುವೆ ಸಮನ್ವಯವಿಲ್ಲ ಎಂಬ ಬಿಜೆಪಿ ನಡೆಸುತ್ತಿರುವ ಪ್ರಚಾರಕ್ಕೆ ನಾಯಕರು ಬಲಿಯಾಗಬಾರದು. ಒಕ್ಕೂಟದ ಕಲ್ಪನೆಯನ್ನು ಸಮರ್ಥಿಸಲು ಎಲ್ಲರೂ ಒಟ್ಟಿಗೆ ಇರುತ್ತೇವೆ.
Rahul Gandhi
ರಾಹುಲ್ ಗಾಂಧಿ
Updated on

ನವದೆಹಲಿ: ಸರ್ಕಾರದ ವಿರುದ್ಧ ಜನರಲ್ಲಿರುವ ಕೋಪವನ್ನು ಗಮನಿಸಿದರೆ, ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಈಗಾಗಲೇ ನಾವು ಗೆದ್ದಿದ್ದೇವೆ. ಆದರೆ, ಮುಖ್ಯ ಸಮಸ್ಯೆ ಏನೆಂದರೆ, ಗೆಲ್ಲಲು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಯುವುದಿಲ್ಲ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಒಟ್ಟಾಗಿ ನಿಂತು ವಿರೋಧಿಸಿದರೆ" ಬಿಜೆಪಿಯನ್ನು ಸೋಲಿಸುವುದು ಸುಲಭ ಎಂದು ಹೇಳಿದ ರಾಹುಲ್ ಗಾಂಧಿ, ಕಾಂಗ್ರೆಸ್ "ಎಲ್ಲಾ ವಿಷವನ್ನು ಕುಡಿಯುವ ನೀಲಿ ಕುತ್ತಿಗೆಯ (ಶಿವ)ನ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಅವರು ಹೇಳಿದರು, ಪಕ್ಷದ ಬಗ್ಗೆ ಮಿತ್ರಪಕ್ಷಗಳು ಹೊಂದಿರುವ ಯಾವುದೇ ಟೀಕೆಗಳನ್ನು "ನಗುತ್ತಾ ಸ್ವೀಕರಿಸಲಾಗುತ್ತದೆ ಎಂದರು.

ಇಂಡಿಯಾ ಒಕ್ಕೂಟದ ನಡುವೆ ಸಮನ್ವಯವಿಲ್ಲ ಎಂಬ ಬಿಜೆಪಿ ನಡೆಸುತ್ತಿರುವ ಪ್ರಚಾರಕ್ಕೆ ನಾಯಕರು ಬಲಿಯಾಗಬಾರದು. ಒಕ್ಕೂಟದ ಕಲ್ಪನೆಯನ್ನು ಸಮರ್ಥಿಸಲು ಎಲ್ಲರೂ ಒಟ್ಟಿಗೆ ಇರುತ್ತೇವೆ. ಇದರಲ್ಲಿ ಡಿಎಂಕೆ ಕೂಡ ಒಳಗೊಂಡಿರುತ್ತದೆ’ ಎಂದು ರಾಹುಲ್‌ ಗಾಂಧಿ ತಿಳಿಸಿದ್ದಾರೆ.

‘ಇಂಡಿಯಾ’ದಲ್ಲಿ ಒಗ್ಗಟ್ಟಿಲ್ಲ ಎಂದು ಬಿಜೆಪಿ ಬಿಂಬಿಸುತ್ತಿದೆ. ಇದು ಸತ್ಯವಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಜೊತೆಗಿದ್ದರೂ ಕೂಡ ಕೆಲವು ಪಕ್ಷಗಳ ಜೊತೆಗೆ ಭಿನ್ನಾಭಿಪ್ರಾಯ ಹೊಂದಿದ್ದೇವೆ. ಕೇರಳದಲ್ಲಿ ನಾವು ಪಿಣರಾಯಿ ವಿಜಯನ್‌ ಅವರನ್ನು ಕಟುವಾಗಿ ಟೀಕಿಸಿದ್ದೆವು. ನೀವು ಹೋಗಿ ಅವರನ್ನು ಆಲಂಗಿಸಿಕೊಳ್ಳಿ ಎಂದರೆ ಅದು ಸಾಧ್ಯವಿಲ್ಲ. ನಾವು ಅವರ ಜೊತೆ ರಾಜಕೀಯವಾಗಿ ಹೋರಾಟ ನಡೆಸುತ್ತಿದ್ದೇವೆ’ ಎಂದು ರಾಹುಲ್‌ ಸ್ಪಷ್ಟಪಡಿಸಿದ್ದಾರೆ.

Rahul Gandhi
ನಾನು 20 ವರ್ಷದಲ್ಲಿ ಮಾಡಲಾಗದ್ದನ್ನು ನನ್ನ ತಂಗಿ 5 ನಿಮಿಷದಲ್ಲಿ ಮಾಡಿ ತೋರಿದಳು; ನಮ್ ಇಬ್ರಿಗೂ ಹೆಂಡ್ತಿ ಸಮಸ್ಯೆ ಇಲ್ಲ: ನಗೆಗಡಲಲ್ಲಿ ತೇಲಿಸಿದ Rahul gandhi

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com