

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇಂದು ಬೆಳಗ್ಗೆ ಕುಟುಂಬಸ್ಥರ ಜೊತೆ ಆಂಧ್ರ ಪ್ರದೇಶದ ಪ್ರಸಿದ್ಧ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದರು. ತಮ್ಮ ಪತ್ನಿ, ಪುತ್ರ, ಅಳಿಯ ಹಾಗೂ ಶಾಸಕ ಆಪ್ತ ಡಾ ಹೆಚ್ ರಂಗನಾಥ್ ಜೊತೆ ಆಗಮಿಸಿದ ಅವರು, ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ದೊರೆತ ರಾಜಕೀಯ ಜಯದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಡಿ ಕೆ ಶಿವಕುಮಾರ್ ಅವರು ಮುಂಜಾನೆ ನಡೆಯುವ ದೇವಾಲಯದ ಸೇವೆಗಳು ಮತ್ತು ವಿಶೇಷ ಪೂಜೆಗಳಲ್ಲಿ ಭಾಗವಹಿಸಿದರು. ಅವರು ಮಹಾದ್ವಾರಂ ತಲುಪಿದ ವೇಳೆ, ತಿರುಮಲ ತಿರುಪತಿ ದೇವಸ್ಥಾನ (TTD) ಅಧಿಕಾರಿಗಳು ಹಾಗೂ ಅರ್ಚಕರು ಅವರಿಗೆ ಅಧಿಕೃತವಾಗಿ ಸ್ವಾಗತ ಕೋರಿದರು.
ರಂಗನಾಯಕುಲ ಮಂಟಪದಲ್ಲಿ ವೇದ ಪಂಡಿತರು ಅವರಿಗೆ ವೇದಾಶೀರ್ವಚನ, ಶೇಷವಸ್ತ್ರ ಮತ್ತು ತೀರ್ಥ ಪ್ರಸಾದವನ್ನು ನೀಡಿದರು. ಡಿ ಕೆ ಶಿವಕುಮಾರ್ ಅವರು ಮೊದಲು ರೆನಿಗುಂಟಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅಲ್ಲಿ ಡಾ ವಿ ವೆಂಕಟೇಶ್ವರ ಹಾಗೂ ಬೊಜ್ಜಲ ಸುಧೀರ್ ರೆಡ್ಡಿ ಸೇರಿದಂತೆ ಸ್ಥಳೀಯ ಗಣ್ಯರು ಅವರನ್ನು ಸ್ವಾಗತಿಸಿದರು.
Advertisement