ದೇಶಾದ್ಯಂತ 'ಗ್ಯಾಸ್ ಟ್ರಬಲ್': ಪ್ರಮುಖ ನಗರಗಳಲ್ಲಿ LPG ಕೊರತೆಯ ಭೀತಿ; ಸಮಸ್ಯೆ ಬಗೆಹರಿಸಲು ಅಗತ್ಯ ಸರಕುಗಳ ಕಾಯ್ದೆ ಬಳಸಿದ ಕೇಂದ್ರ!

ಮನೆಗಳಿಗೆ ಎಲ್‌ಪಿಜಿ ಕೊರತೆಯಿಲ್ಲದಿದ್ದರೂ, ವಾಣಿಜ್ಯ ಸರಬರಾಜುಗಳ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ ಎಂದು ಸಂಘಗಳು ತಿಳಿಸಿವೆ. ಮನೆಯ ಅವಶ್ಯಕತೆಗಳನ್ನು ಪೂರೈಸಿದ ನಂತರ ವಾಣಿಜ್ಯ ಸಂಸ್ಥೆಗಳಿಗೆ ಎಲ್‌ಪಿಜಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು
Representational image
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವು ಭಾರತಕ್ಕೆ ಪೂರೈಕೆ ಆಗುವ ಅನಿಲದಲ್ಲಿ ಶೇ 30ರಷ್ಟು ಪಾಲಿನ ಮೇಲೆ ಅಡ್ಡ ಪರಿಣಾಮ ಬೀರಿದೆ. ಪ್ರಮುಖ ನಗರಗಳಲ್ಲಿ ಎಲ್‌ಪಿಜಿ ಕೊರತೆಯ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ, ದೇಶೀಯ ಅಗತ್ಯಗಳನ್ನು ಪೂರೈಸಲು ವ್ಯವಸ್ಥೆ ಮಾಡಲಾಗಿದೆ ಮತ್ತು ಎಲ್‌ಪಿಜಿ ಉತ್ಪಾದನೆಯನ್ನು ಶೇ. 10 ರಷ್ಟು ಹೆಚ್ಚಿಸಲಾಗಿದೆ ಎಂದು ಸರ್ಕಾರ ಮಂಗಳವಾರ ಸಾರ್ವಜನಿಕರಿಗೆ ಭರವಸೆ ನೀಡಲು ಪ್ರಯತ್ನಿಸಿದೆ.

ಗ್ಯಾಸ್ ಸಿಲಿಂಡರ್‌ಗಳ Black market ಆರೋಪಗಳ ನಡುವೆ ಜನರು ಎಲ್‌ಪಿಜಿ ಸಿಲಿಂಡರ್‌ಗಳ ಬುಕಿಂಗ್ ಮತ್ತು ವಿತರಣೆಯಲ್ಲಿ ವಿಳಂಬವನ್ನು ಎದುರಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಮುಂಬೈ, ಬೆಂಗಳೂರು ಮತ್ತು ಚೆನ್ನೈನಲ್ಲಿನ ಆತಿಥ್ಯ ಸಂಘಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ತೀವ್ರ ಕೊರತೆ ಬಗ್ಗೆ ವರದಿ ಮಾಡಿವೆ, ಸರಬರಾಜುಗಳನ್ನು ತಕ್ಷಣ ಪುನಃಸ್ಥಾಪಿಸದಿದ್ದರೆ ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ಸ್ಥಗಿತಗೊಳ್ಳಬಹುದು ಎಂದು ಎಚ್ಚರಿಸಿದೆ.

ಎಲ್‌ಪಿಜಿ ಚಿಲ್ಲರೆ ವ್ಯಾಪಾರಿಗಳ ಸಂಘಗಳು ಮಾರ್ಚ್ 8 ರಿಂದ ಸರ್ಕಾರ ಇದ್ದಕ್ಕಿದ್ದಂತೆ ವಾಣಿಜ್ಯ ಸರಬರಾಜುಗಳನ್ನು ಸ್ಥಗಿತಗೊಳಿಸಿದೆ ಎಂದು ಟಿಎನ್‌ಐಇಗೆ ತಿಳಿಸಿವೆ. ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಂತಹ ಅಗತ್ಯ ವಲಯಗಳಿಗೆ ಸರಬರಾಜುಗಳನ್ನು ಪುನರಾರಂಭಿಸಿತು.

ಮನೆಗಳಿಗೆ ಎಲ್‌ಪಿಜಿ ಕೊರತೆಯಿಲ್ಲದಿದ್ದರೂ, ವಾಣಿಜ್ಯ ಸರಬರಾಜುಗಳ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ ಎಂದು ಸಂಘಗಳು ತಿಳಿಸಿವೆ. ಮನೆಯ ಅವಶ್ಯಕತೆಗಳನ್ನು ಪೂರೈಸಿದ ನಂತರ ವಾಣಿಜ್ಯ ಸಂಸ್ಥೆಗಳಿಗೆ ಎಲ್‌ಪಿಜಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಅವರು ವಿನಂತಿಸಿದರು.

Representational image
ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನ ಹೋಟೆಲ್‌ಗಳು ಬಂದ್?

ಇಂತಹ ಪೂರೈಕೆಯನ್ನು ಆಡಿಟ್, ಹಣಕಾಸು ಮತ್ತು ಉತ್ಪನ್ನ ಮಾರ್ಗಗಳ ಮೂಲಕ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಬಹುದು, ನೋಂದಾಯಿತ ವಾಣಿಜ್ಯ ಗ್ರಾಹಕರಿಗೆ ಮಾತ್ರ LPG ಸರಬರಾಜು ಮಾಡಲಾಗುತ್ತಿದೆ ಮತ್ತು ಉತ್ಪನ್ನವನ್ನು ತನ್ನ ಆದ್ಯತಾ ವಲಯಗಳ ಮೂಲ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳಬಹುದು" ಎಂದು ಭಾರತೀಯ LPG ವಿತರಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪವನ್ ಸೋನಿ ಹೇಳಿದರು.

ನವದೆಹಲಿಯ ಹಲವಾರು ಅನಿಲ ಸಂಸ್ಥೆಗಳು ತಕ್ಷಣದ ಕೊರತೆಯಿಲ್ಲ ಮತ್ತು ಮರುಪೂರಣಗಳನ್ನು ಎಂದಿನಂತೆ ವಿತರಿಸಲಾಗುತ್ತಿದೆ ಎಂದು ಹೇಳುತ್ತವೆ. ತಮ್ಮ ವ್ಯವಹಾರಕ್ಕಾಗಿ LPG ಅನ್ನು ಸಂಪೂರ್ಣವಾಗಿ ಅವಲಂಬಿಸಿರುವ ರಸ್ತೆಬದಿಯ ಆಹಾರ ಮಾರಾಟಗಾರರಿಗೆ ಆತಂಕ ಎದುರಾಗಿದೆ.

ಭಾರತದ LPG ಆಮದುಗಳ ಹೆಚ್ಚಿನ ಭಾಗವು ಹಾದುಹೋಗುವ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆಯಲ್ಲಿನ ಅಡಚಣೆಗಳಿಂದ ಉಂಟಾಗುವ ಸಂಭಾವ್ಯ ಕೊರತೆಯನ್ನು ಸರಿದೂಗಿಸಲು ಸರ್ಕಾರ ಪರ್ಯಾಯ ಪೂರೈಕೆದಾರರೊಂದಿಗೆ ತೊಡಗಿಸಿಕೊಂಡಿದೆ ಎಂದು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಮನೆಗಳಲ್ಲಿನ ಅಡುಗೆ ಕೆಲಸಗಳಿಗೆ ಎಲ್‌ಪಿಜಿ ಪೂರೈಕೆ ಖಾತರಿಪಡಿಸಲು ಹಾಗೂ ವಾಹನಗಳಿಗೆ ಸಿಎನ್‌ಜಿ ಲಭ್ಯವಿರುವಂತೆ ನೋಡಿಕೊಳ್ಳಲು ಕೇಂದ್ರವು ‘ಅಗತ್ಯ ವಸ್ತುಗಳ ಕಾಯ್ದೆ – 1955’ರ ಅಡಿಯಲ್ಲಿ ಈ ಕ್ರಮ ತೆಗೆದುಕೊಂಡಿದೆ.

Representational image
LPG Price Hike: ಇರಾನ್ ಯುದ್ಧ ಮಧ್ಯೆ ಎಲ್ ಪಿಜಿ ಸಿಲಿಂಡರ್ ದರ 60 ರೂ ಏರಿಕೆ

ಭಾರತಕ್ಕೆ ನಿತ್ಯ 191 ಎಂಎಂಎಸ್‌ಸಿಎಂಡಿ (ಮಿಲಿಯನ್‌ ಮೆಟ್ರಿಕ್‌ ಸ್ಟ್ಯಾಂಡರ್ಡ್‌ ಕ್ಯೂಬಿಕ್‌ ಮೀಟರ್ಸ್‌ ಪರ್‌ ಡೇ) ಅನಿಲದ ಅಗತ್ಯವಿದೆ. ಇದರಲ್ಲಿ, ಶೇ 50ರಷ್ಟು ಅನಿಲವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಹೊರ್ಮುಜ್‌ ಜಲಸಂಧಿಯಲ್ಲಿ ಹಡಗು ಸಂಚಾರ ಸ್ಥಗಿತಗೊಂಡಿರುವ ಕಾರಣದಿಂದಾಗಿ 60 ಎಂಎಂಎಸ್‌ಸಿಎಂಡಿ ಅನಿಲ ಪೂರೈಕೆಗೆ ಧಕ್ಕೆ ಆಗಿದೆ.

ಲಭ್ಯವಿರುವ ದ್ರವೀಕೃತ ನೈಸರ್ಗಿಕ ಅನಿಲವನ್ನು (ಎಲ್‌ಎನ್‌ಜಿ) ಎಲ್‌ಪಿಜಿ ಉತ್ಪಾದನೆ, ಸಿಎನ್‌ಜಿ ಮತ್ತು ಪಿಎನ್‌ಜಿ ಉತ್ಪಾದನೆಗೆ ಬರುವ ಪೂರ್ಣ ಪ್ರಮಾಣದ ಬೇಡಿಕೆಗೆ ಸ್ಪಂದಿಸಲು ಬಳಸಬೇಕು. ವಾಣಿಜ್ಯ ಬಳಕೆಯವರ ಶೇ 80ರಷ್ಟು ಅಗತ್ಯಗಳನ್ನು ಪೂರೈಸಲು ಹಾಗೂ ರಸಗೊಬ್ಬರ ಘಟಕಗಳ ಶೇ 70ರಷ್ಟು ಬೇಡಿಕೆಯನ್ನು ಪೂರೈಸಲು ಇದನ್ನು ಬಳಸಬೇಕು ಎಂದು ಕೇಂದ್ರ ಸೂಚಿಸಿದೆ.

‘ನಾವು ಪರಿಸ್ಥಿತಿಯನ್ನು ಪ್ರತಿ ನಿಮಿಷವೂ ಅವಲೋಕಿಸು ತ್ತಿದ್ದೇವೆ. ಅಗತ್ಯಗಳ ಬಗ್ಗೆ ಅರಿವಿದೆ. ಪ್ರಮುಖ ವಲಯಗಳ ಬೇಡಿಕೆಗೆ ಪೂರ್ಣ ಪ್ರಮಾಣದಲ್ಲಿ ಸ್ಪಂದಿಸುವ ಉದ್ದೇಶದಿಂದ ಅನಿಲದ ಹಂಚಿಕೆಯ ಆದ್ಯತೆಗಳಲ್ಲಿ ನಾವು ಮರಹೊಂದಾಣಿಕೆ ಮಾಡಿಕೊಂಡಿದ್ದೇವೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಮುಖವಾಗಿ ಎಲ್‌ಪಿಜಿ ಪೂರೈಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಆದ್ಯತೆಗಳಲ್ಲಿ ಮರುಹೊಂದಾಣಿಕೆ ಮಾಡಲಾಗಿದೆ. ಯುದ್ಧ ಶುರುವಾದ ನಂತರದಲ್ಲಿ ಪೂರೈಕೆಯ ಮೇಲೆ ಪರಿಣಾಮ ಉಂಟಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com