ಉಜ್ಜಯಿನಿ ರಾಷ್ಟ್ರೀಯ ವೇದವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗೆ ಕ್ರೂರವಾಗಿ ಹೊಡೆದು-ಬಡಿದು ಶಿಕ್ಷೆ; Viral Video

ಈ ವಿಡಿಯೋ ಸಂಸ್ಥೆಯ ಆವರಣದಲ್ಲಿರುವ ಚಿಂತಾಮಣ ಗಣೇಶ ದೇವಸ್ಥಾನ ರಸ್ತೆಯಲ್ಲಿನ ಒಂದು ಕೊಠಡಿಯಲ್ಲಿ ನಡೆದಿದೆ. ದೃಶ್ಯದಲ್ಲಿ ಆರೋಪಿತ ಶಿಕ್ಷಕ ದತ್ತದಾಸ್ ಶೆವಡೆ, ವಿದ್ಯಾರ್ಥಿಯನ್ನು ಪ್ರಶ್ನಿಸುತ್ತಾ ಕೋಲಿನಿಂದ ನಿರಂತರವಾಗಿ ಹೊಡೆಯುತ್ತಿರುವುದು ಕಾಣುತ್ತದೆ.
Teacher beating student
ವಿದ್ಯಾರ್ಥಿಗೆ ಹೊಡೆಯುತ್ತಿರುವ ವಾರ್ಡನ್ ಕೂಡ ಆಗಿರುವ ಶಿಕ್ಷಕ
Updated on

ಉಜ್ಜಯಿನಿಯ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದಿಕ ಅಧ್ಯಯನ ಸಂಸ್ಥೆಯಲ್ಲಿ, ಶಿಕ್ಷಕರೊಬ್ಬರು ವಿದ್ಯಾರ್ಥಿಯನ್ನು ಕೋಲಿನಿಂದ ಕ್ರೂರವಾಗಿ ಹೊಡೆಯುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿ ನೋವಿನಿಂದ ಕಿರುಚುತ್ತಿದ್ದರೂ, ಶಿಕ್ಷಕ ಹೊಡೆಯುವುದನ್ನು ಮುಂದುವರಿಸಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿಯ ಹಾಸಿಗೆಯಲ್ಲಿ ಮಲಗಿದ್ದ ಕಾರಣಕ್ಕೆ ವಿದ್ಯಾರ್ಥಿಯನ್ನು ಹೊಡೆದಿದ್ದಾರೆ ಎಂಬ ಮಾಹಿತಿ ಇದೆ.

ಈ ವಿಡಿಯೋ ಸಂಸ್ಥೆಯ ಆವರಣದಲ್ಲಿರುವ ಚಿಂತಾಮಣ ಗಣೇಶ ದೇವಸ್ಥಾನ ರಸ್ತೆಯಲ್ಲಿನ ಒಂದು ಕೊಠಡಿಯಲ್ಲಿ ನಡೆದಿದೆ. ದೃಶ್ಯದಲ್ಲಿ ಆರೋಪಿತ ಶಿಕ್ಷಕ ದತ್ತದಾಸ್ ಶೆವಡೆ, ವಿದ್ಯಾರ್ಥಿಯನ್ನು ಪ್ರಶ್ನಿಸುತ್ತಾ ಕೋಲಿನಿಂದ ನಿರಂತರವಾಗಿ ಹೊಡೆಯುತ್ತಿರುವುದು ಕಾಣುತ್ತದೆ. ಅವರು ಸಾಮವೇದ ರಾಣಾಯಣೀಯ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಾರ್ಡನ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ಘಟನೆ ನಡೆದ ವೇಳೆ ಅದೇ ಕೊಠಡಿಯಲ್ಲಿ ಇದ್ದ ವ್ಯಕ್ತಿಯೊಬ್ಬರು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಶನಿವಾರ ಅದು ಹೊರಬಂದ ತಕ್ಷಣವೇ ವಿಷಯ ವೇಗವಾಗಿ ಹರಡಿದೆ. ವಿಡಿಯೋ ವೈರಲ್ ಆದರೂ ಸಂಸ್ಥೆಯಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ರಜೆ ಇರುವುದರಿಂದ ಸಂಸ್ಥೆಯನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.

ಈ ಸಂಸ್ಥೆ ಕೇಂದ್ರ ಸರ್ಕಾರದ ಅಧೀನದಲ್ಲಿ ನಡೆಯುವ ವಸತಿ ಆಧಾರಿತ ಶಿಕ್ಷಣ ಸಂಸ್ಥೆಯಾಗಿದೆ. ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಇಲ್ಲಿ ಬಂದು ವಾಸ್ತವ್ಯ ಮಾಡಿ ವೇದ ಅಧ್ಯಯನ ಮಾಡುತ್ತಾರೆ. ವಿದ್ಯಾರ್ಥಿಗಳು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸಂಧ್ಯಾವಂದನೆ ಮಾಡಿ ಕಠಿಣ ಶಿಸ್ತು ಪಾಲಿಸಬೇಕಾಗುತ್ತದೆ. ಈ ನಿಯಮಗಳನ್ನು ಪಾಲಿಸಲು ವಾರ್ಡನ್ ಮತ್ತು ಶಿಕ್ಷಕರಿಗೆ ಜವಾಬ್ದಾರಿ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com