Kerala assembly election 2026: ಕೇರಳದಲ್ಲಿ ಕ್ರೈಸ್ತ ಮತಗಳು ಏಕೆ ನಿರ್ಣಾಯಕವಾಗಿದೆ?

2011ರ ಜನಗಣತಿ ಪ್ರಕಾರ ಕೇರಳದ ಜನಸಂಖ್ಯೆಯ 18.4 ಶೇಕಡಾ ಭಾಗವನ್ನು ಕ್ರೈಸ್ತರು ಹೊಂದಿದ್ದರು. ಆದರೆ ನ್ಯಾಯಮೂರ್ತಿ ಜೆ.ಬಿ. ಕೊಶಿ ಮೊದಲಾದ ತಜ್ಞರ ಅಂದಾಜು ಪ್ರಕಾರ ಇದು ಸುಮಾರು 14 ಶೇಕಡಾಕ್ಕೆ ಇಳಿಕೆಯಾಗಿರಬಹುದು.
Each Christian denomination in Kerala has its own regional priorities, political leanings, and church leadership, often diverging during elections
ಕೇರಳದ ಪ್ರತಿಯೊಂದು ಕ್ರೈಸ್ತ ಪಂಗಡಕ್ಕೂ ತಮ್ಮದೇ ಆದ ಪ್ರಾದೇಶಿಕ ಆದ್ಯತೆಗಳು, ರಾಜಕೀಯ ಒಲವುಗಳು ಮತ್ತು ಚರ್ಚ್ ನಾಯಕತ್ವವಿದ್ದು, ಅವುಗಳು ಚುನಾವಣೆಯ ವೇಳೆ ವಿಭಿನ್ನ ದಿಕ್ಕುಗಳಲ್ಲಿ ಸಾಗುತ್ತವೆ.
Updated on

ಕೊಚ್ಚಿ: ಕೇರಳ ವಿಧಾನಸಭೆ ಚುನಾವಣಾ ಕಣ ರಂಗೇರುತ್ತಿದೆ. ಮಧ್ಯ ಕೇರಳದ ಹಲವಾರು ಕ್ಷೇತ್ರಗಳಲ್ಲಿ ಚುನಾವಣಾ ಫಲಿತಾಂಶವನ್ನು ತಿರುವು ಮಾಡಬಲ್ಲ ನಿರ್ಣಾಯಕ ಮತಬ್ಯಾಂಕ್ ಎಂದು ಕಾಣಿಸಿಕೊಂಡಿದ್ದ ಕ್ರೈಸ್ತ ಸಮುದಾಯದ ರಾಜಕೀಯ ಪ್ರಭಾವ ಮಹತ್ವವಾಗಿದ್ದರೂ ಇಂದು ವಿಭಜಿತವಾಗಿ ಹೋಗಿದೆ.

2011ರ ಜನಗಣತಿ ಪ್ರಕಾರ ಕೇರಳದ ಜನಸಂಖ್ಯೆಯ 18.4 ಶೇಕಡಾ ಭಾಗವನ್ನು ಕ್ರೈಸ್ತರು ಹೊಂದಿದ್ದರು. ಆದರೆ ನ್ಯಾಯಮೂರ್ತಿ ಜೆ.ಬಿ. ಕೊಶಿ ಮೊದಲಾದ ತಜ್ಞರ ಅಂದಾಜು ಪ್ರಕಾರ ಇದು ಸುಮಾರು 14 ಶೇಕಡಾಕ್ಕೆ ಇಳಿಕೆಯಾಗಿರಬಹುದು. ಆದರೆ ಅನೇಕ ಕ್ಷೇತ್ರಗಳಲ್ಲಿ ತಮ್ಮ ಸಂಖ್ಯೆಗೆ ಮೀರಿ ಕ್ರೈಸ್ತರು ಚುನಾವಣೆಯಲ್ಲಿ ಪ್ರಭಾವ ಬೀರುತ್ತಿದ್ದಾರೆ.

ಇಲ್ಲಿ ಎದ್ದಿರುವ ಪ್ರಶ್ನೆಯೆಂದರೆ, 1980 ಮತ್ತು 1990ರ ದಶಕಗಳಲ್ಲಿ ಇದ್ದಂತೆ ಇಂದಿಗೂ ಅವರು ಒಗ್ಗಟ್ಟಿನ ರಾಜಕೀಯ ಶಕ್ತಿಯನ್ನು ಹೊಂದಿದ್ದಾರೆಯೇ ಎಂಬುದು. ಅದಕ್ಕೆ ಉತ್ತರ ಸಮುದಾಯದ ಒಳಗಿನ ವೈವಿಧ್ಯದಲ್ಲಿದೆ. ಕೇರಳದ ಕ್ರೈಸ್ತರು ಏಕಮುಖ ಗುಂಪಲ್ಲ; ಅವರು ಕ್ಯಾಥೋಲಿಕ್ ಚರ್ಚ್‌ಗಳು, ಮಲಂಕರಾ ಘಟಕ ಹಾಗೂ ಇವಾಂಜೆಲಿಕಲ್ ಗುಂಪುಗಳಂತೆ ಹಲವು ಪಂಗಡಗಳಾಗಿ ವಿಭಜಿತರಾಗಿದ್ದಾರೆ.

ಪ್ರತಿ ಗುಂಪಿಗೂ ತನ್ನದೇ ಆದ ಪ್ರಾದೇಶಿಕ ಆದ್ಯತೆಗಳು, ರಾಜಕೀಯ ಅಭಿರುಚಿಗಳು ಹಾಗೂ ಧಾರ್ಮಿಕ ನಾಯಕತ್ವವಿದ್ದು, ಚುನಾವಣಾ ಸಮಯದಲ್ಲಿ ವಿವಿಧ ದಿಕ್ಕುಗಳಲ್ಲಿ ಸಾಗುತ್ತವೆ. ಈ ವಿಭಜನೆಯಿಂದ ಒಗ್ಗಟ್ಟಿನ ‘ಕ್ರೈಸ್ತ ಮತ’ದ ಸಾಧ್ಯತೆ ಕುಂದಿದರೂ, ಒಟ್ಟಾರೆ ಅವರ ಪ್ರಭಾವ ಇನ್ನೂ ಮಹತ್ವದ್ದಾಗಿದೆ.

Each Christian denomination in Kerala has its own regional priorities, political leanings, and church leadership, often diverging during elections
ತಮಿಳುನಾಡು ವಿಧಾನಸಭೆ ಚುನಾವಣೆ 2026: ಸೀಟು ಹಂಚಿಕೆ ಬಗ್ಗೆ ಅಸಮಾಧಾನ; ಸ್ಪರ್ಧಿಸಲು ಅಣ್ಣಾಮಲೈ ಹಿಂದೇಟು; ಬಿಎಲ್ ಸಂತೋಷ್ ಸಭೆಗೆ ಗೈರು!

ಕೆಲವು ಪ್ರಮುಖ ವಿಷಯಗಳು ಸಮುದಾಯವನ್ನು ಒಂದಾಗಿಸುತ್ತವೆ. ಪರ್ವತ ಪ್ರದೇಶಗಳಲ್ಲಿ ಮಾನವ-ಕಾಡುಪ್ರಾಣಿ ಸಂಘರ್ಷ — ಇದರಿಂದ ಹೆಚ್ಚಾಗಿ ಕ್ರೈಸ್ತ ವಲಸಿಗರ ಜೀವನೋಪಾಯ ಹಾನಿಗೊಳಗಾಗುತ್ತಿದೆ. ಇದೇ ರೀತಿ, ರಾಜ್ಯದಲ್ಲಿನ ಸಮುದಾಯದ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಿದ ಜೆ.ಬಿ. ಕೊಶಿ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವ ಪ್ರಶ್ನೆಯೂ ಮಹತ್ವದ್ದಾಗಿದೆ. ಈ ವಿಷಯಗಳು ಚರ್ಚ್ ನಾಯಕತ್ವದ ರಾಜಕೀಯ ಸಂದೇಶಗಳಿಗಿಂತ ಮತದಾನ ವೇಳೆ ಹೆಚ್ಚು ಪ್ರಭಾವ ಬೀರುತ್ತವೆ.

ನಾವು ಮತದಾರರಿಗೆ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗೆ ಮತ ಹಾಕುವಂತೆ ಹೇಳುವುದಿಲ್ಲ ಎಂದು ಕೇರಳ ಕ್ಯಾಥೋಲಿಕ್ ಬಿಷಪ್‌ಗಳ ಕೌನ್ಸಿಲ್ (KCBC) ಉಪ ಕಾರ್ಯದರ್ಶಿ ಜನರಲ್ ಫಾದರ್ ಥಾಮಸ್ ತಾರಾಯಿಲ್ ಹೇಳಿದ್ದಾರೆ. ಸಾಮಾಜಿಕ ಬದ್ಧತೆಯಿರುವ ಮತ್ತು ಚರ್ಚ್‌ಗೆ ಅನುಕೂಲಕರ ನಿಲುವುಗಳನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳನ್ನು ನಾವು ಬೆಂಬಲಿಸುತ್ತೇವೆ. ಅಂತಿಮವಾಗಿ, ಜನರಿಗೆ ತಮ್ಮದೇ ರಾಜಕೀಯ ಅರಿವು ಇದೆ.

Each Christian denomination in Kerala has its own regional priorities, political leanings, and church leadership, often diverging during elections
ಕೇರಳ ಚುನಾವಣೆ: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಡಿಕೆಶಿಗೆ ಸ್ಥಾನ, ಸಿಎಂ ಸಿದ್ದರಾಮಯ್ಯಗೆ ಇಲ್ಲ!

ಚರ್ಚ್ ರಾಜಕೀಯ ಸಂಬಂಧಗಳ ಮೇಲೆ ನಿರ್ಬಂಧ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮತದಾನ ವೈಯಕ್ತಿಕ ಆಯ್ಕೆಯಾಗಿದೆ ಎಂದು ಹೇಳಿದರು. ಆದರೆ ಪ್ರತಿನಿಧಿತ್ವವೂ ಮುಖ್ಯ ಎಂದರು. ಕೆಲವು ಪ್ರದೇಶಗಳಲ್ಲಿ ನಿರ್ದಿಷ್ಟ ಪಂಗಡಗಳ ಪ್ರಾಬಲ್ಯವಿರುವುದರಿಂದ, ಅಭ್ಯರ್ಥಿಗಳು ಆ ಗುಂಪಿನಿಂದಲೇ ಇರಬೇಕು ಎಂಬ ಬೇಡಿಕೆಗಳೂ ಇರುತ್ತವೆ. ಆದರೆ ರಾಜಕೀಯ ಪಕ್ಷಗಳು ಹಲವಾರು ಅಂಶಗಳನ್ನು ಸಮತೋಲನಗೊಳಿಸಬೇಕು ಎಂದರು.

ಫಾದರ್ ತಾರಾಯಿಲ್ ಜಿ.ಬಿ. ಕೊಶಿ ಆಯೋಗವನ್ನು ರಾಜಕೀಯ ಹೊಣೆಗಾರಿಕೆಯ ಪ್ರಮುಖ ಮಾನದಂಡವೆನ್ನುತ್ತಾರೆ. ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವ ಬಗ್ಗೆ ವಿವಿಧ ಪಕ್ಷಗಳ ಪ್ರತಿಕ್ರಿಯೆ ನಿರ್ಣಾಯಕವಾಗಿದೆ ಎಂದರು.

ಲ್ಯಾಟಿನ್ ಕ್ಯಾಥೋಲಿಕ್ ಗುಂಪುಗಳಲ್ಲಿ ಕೆಲವು ಪ್ರದೇಶಗಳಲ್ಲಿ ಅಭ್ಯರ್ಥಿತ್ವದ ಬಗ್ಗೆ ಬೇಡಿಕೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲಾಗುತ್ತಿದೆ. ಇದು ಹೊಸ ಬೆಳವಣಿಗೆಯಾಗಿದೆ. ಇದಕ್ಕೆ ವಿರುದ್ಧವಾಗಿ, ಕೊಟ್ಟಾಯಂ ಮತ್ತು ಇಡುಕ್ಕಿ ಪ್ರದೇಶಗಳ ರಬ್ಬರ್ ಹೆಚ್ಚು ಬೆಳೆಯುವ ಪ್ರದೇಶಗಳಲ್ಲಿ ಸೈರೋ-ಮಲಬಾರ್ ಸಮುದಾಯವು ಇನ್ನೂ ಕಾಂಗ್ರೆಸ್ ಪರ ಧೋರಣೆಯನ್ನು ಮುಂದುವರಿಸಿದೆ. ಚರ್ಚ್‌ನ ಅಭಿಪ್ರಾಯಗಳು ಅಪ್ರತ್ಯಕ್ಷವಾಗಿ ರಾಜಕೀಯ ಬದಲಾವಣೆಗಳಿಗೆ ಪ್ರಭಾವ ಬೀರುತ್ತಿವೆ.

Each Christian denomination in Kerala has its own regional priorities, political leanings, and church leadership, often diverging during elections
West Bengal polls 2026: ಇಂದು ರಾಜಕೀಯ ಬದ್ಧ ವೈರಿ, ಆದರೆ ಬಿಜೆಪಿ ಗೆಲುವಿನ ಖಾತೆ ತೆರೆಯಲು ಕಾರಣವೇ TMC; ಹೇಗೆ ಗೊತ್ತೇ?

ಪ್ರತಿ ಪಂಗಡದ ರಾಜಕೀಯ ಧೋರಣೆಗಳು ವಿಭಿನ್ನವಾಗಿವೆ. ಆರ್ಥೋಡಾಕ್ಸ್ ಚರ್ಚ್‌ನ ಕೆಲವು ಭಾಗಗಳು ಕಾಂಗ್ರೆಸ್‌ಗೆ ಹತ್ತಿರವಾಗಿದ್ದರೆ, ಸಂಖ್ಯೆಯಲ್ಲಿ ಹೆಚ್ಚು ಇರುವ ಜಾಕೋಬೈಟ್ ಗುಂಪು ಎಡಪಕ್ಷದೊಂದಿಗೆ ಸಹಕಾರ ಹೊಂದಿದೆ.

ಪೆಂತೆಕೋಸ್ತ್ ಗುಂಪುಗಳು ಈಗ ಪ್ರತ್ಯೇಕ ರಾಜಕೀಯ ಮತಬ್ಯಾಂಕ್ ಆಗಿ ಹೊರಹೊಮ್ಮುತ್ತಿವೆ. ಇತ್ತೀಚಿನ ಸರ್ಕಾರದ ನಿರ್ಧಾರದಿಂದ ಅವರಿಗೆ ಪ್ರತ್ಯೇಕ ಪಂಗಡ ಮಾನ್ಯತೆ ನೀಡಿರುವುದು ಚುನಾವಣಾ ಲೆಕ್ಕಾಚಾರಕ್ಕೆ ಹೊಸ ಆಯಾಮ ನೀಡಿದೆ.

ರಾಜಕೀಯ ವಿಶ್ಲೇಷಕ ಮಿಲ್ಟನ್ ಫ್ರಾನ್ಸಿಸ್, ಪ್ರಸ್ತುತ ಚುನಾವಣಾ ಪ್ರಚಾರವು ಈ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ. ಕೊಚ್ಚಿ ಧರ್ಮಪ್ರಾಂತ್ಯದಂತಹ ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ಅನೇಕ ಲ್ಯಾಟಿನ್ ಕ್ಯಾಥೋಲಿಕ್ ಪ್ರದೇಶಗಳು ಯುಡಿಎಫ್ ಕಡೆ ಒಲವು ತೋರಿಸುತ್ತಿವೆ. ಆದರೆ ಬಿಜೆಪಿ ಮತ್ತು ಟ್ವೆಂಟಿ20 ಸೇರಿ ವಿವಿಧ ಪಕ್ಷಗಳಿಗೆ ಬೆಂಬಲವೂ ಕಂಡುಬರುತ್ತಿದೆ ಎಂದು ಹೇಳಿದರು.

ಏಪ್ರಿಲ್ 9ರಂದು ನಡೆಯಲಿರುವ ಚುನಾವಣೆಗೆ ಕೇರಳ ಸಜ್ಜಾಗುತ್ತಿರುವಾಗ, ಕ್ರೈಸ್ತ ಮತ ಒಂದೇ ದಿಕ್ಕಿನಲ್ಲಿ ಸಾಗದಿದ್ದರೂ, ಸ್ಪರ್ಧಾತ್ಮಕ ರಾಜಕೀಯ ಪರಿಸ್ಥಿತಿಯಲ್ಲಿ ಅದರ ವಿಭಜಿತವಾದರೂ ತಂತ್ರಾತ್ಮಕ ಪ್ರಭಾವ ಪ್ರತಿ ಕ್ಷೇತ್ರದಲ್ಲೂ ನಿರ್ಣಾಯಕವಾಗಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com