West Bengal polls 2026: ಇಂದು ರಾಜಕೀಯ ಬದ್ಧ ವೈರಿ, ಆದರೆ ಬಿಜೆಪಿ ಗೆಲುವಿನ ಖಾತೆ ತೆರೆಯಲು ಕಾರಣವೇ TMC; ಹೇಗೆ ಗೊತ್ತೇ?

2021 ರಲ್ಲಿ ಟಿಎಂಸಿ ಟಿಕೆಟ್ ನಿರಾಕರಿಸಿದಾಗ, ಅಸಮಾಧಾನಗೊಂಡ ಬಿಸ್ವಾಸ್ ಬಿಜೆಪಿಗೆ ಸೇರಿದರು. ಆದರೆ ಬಿಸ್ವಾಸ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಿಲ್ಲ.
mamata banerjee- Narendra Modi
ಮಮತಾ ಬ್ಯಾನರ್ಜಿ- ನರೇಂದ್ರ ಮೋದಿonline desk
Updated on

ಕೋಲ್ಕತ್ತ: ಒಂದು ಕಾಲದಲ್ಲಿ ಎನ್ ಡಿಎ ಜೊತೆಗಿದ್ದ ತೃಣಮೂಲ ಕಾಂಗ್ರೆಸ್ ಇಂದಿಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಬದ್ಧವೈರಿ. ಮಮತಾ ಬ್ಯಾನರ್ಜಿ ಕಮ್ಯುನಿಸ್ಟರಿಂದ ಅಧಿಕಾರ ಕಸಿದುಕೊಂಡಂತೆಯೇ ಇಂದು ಬಿಜೆಪಿ ಮಮತಾ ಬ್ಯಾನರ್ಜಿ ಅವರಿಂದ ಶತಾಯಗತಾಯ ಅಧಿಕಾರ ಕಸಿದುಕೊಳ್ಳಲು ರಣತಂತ್ರ ಹೆಣೆಯುತ್ತಿದೆ. ಈ ಹಾದಿಯಲ್ಲಿ ಸಾಕಷ್ಟು ದೂರ ಸಾಗಿರುವ ಬಿಜೆಪಿಗೆ ಪಶ್ಚಿಮ ಬಂಗಾಳದಲ್ಲಿ ಗೆಲುವಿನ ಖಾತೆ ತೆರೆಯಲು ಸಹಾಯ ಮಾಡಿದ್ದೇ ಟಿಎಂಸಿ ಎಂಬ ಅಚ್ಚರಿಯ ಮಾಹಿತಿ ನಿಮಗೆ ಗೊತ್ತೇ?

ಟಿಎಂಸಿ ಇಂದಿನ ತನ್ನ ಬದ್ಧ ವೈರಿಗೆ ಹಿಂದೊಮೆ ಗೆಲುವಿನ ಖಾತೆ ತೆರೆಯುವುದಕ್ಕೆ ಅವಕಾಶ ನೀಡಿದ್ದು ಹೇಗೆ? ಅಂದಿನ ಸನ್ನಿವೇಶ ಹೇಗಿತ್ತು? ಎಂಬುದನ್ನು ಈ ವರದಿಯ ಮೂಲಕ ತಿಳಿಯೋಣ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಮೊದಲ ಲೋಕಸಭಾ ಸ್ಥಾನವನ್ನು 1998 ರಲ್ಲಿ ಗೆದ್ದಿತ್ತು. ಒಂದು ವರ್ಷದ ನಂತರ, ಅದು ರಾಜ್ಯದಲ್ಲಿ ತನ್ನ ಮೊದಲ ವಿಧಾನಸಭಾ ಸ್ಥಾನವನ್ನು ಗೆದ್ದಿತ್ತು. ಎರಡೂ ಗೆಲುವುಗಳು ಮೈತ್ರಿಕೂಟದಲ್ಲಿ ಕಿರಿಯ ಪಾಲುದಾರನಾಗಿದ್ದಾಗ ಗಳಿಸಿದ್ದಾಗಿದೆ.

ಕುತೂಹಲಕಾರಿಯಾಗಿ, ಶತಮಾನದ ತಿರುವಿನಲ್ಲಿದ್ದ ವರ್ಷಗಳಲ್ಲಿ ಗಳಿಸಿದ ಆ ವಿಜಯಗಳ ಸಮಯದಲ್ಲಿ ಬಿಜೆಪಿಯ ಮಿತ್ರ ಪಕ್ಷ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆಗಿತ್ತು.

1998 ರ ಲೋಕಸಭಾ ಚುನಾವಣೆಗಳು ಆ ವರ್ಷ ಜನವರಿ 1 ರಂದು ಟಿಎಂಸಿ ರಚನೆಯಾದ ನಂತರ ಸ್ಪರ್ಧಿಸಿದ ಮೊದಲ ಚುನಾವಣೆಗಳಾಗಿವೆ.

ಪಶ್ಚಿಮ ಬಂಗಾಳದ ಮೂಲಕ ಬಿಜೆಪಿಯ ಮೊದಲ ಲೋಕಸಭೆ ಪ್ರವೇಶವು ದಮ್ ದಮ್ ಸ್ಥಾನದಿಂದ ಬಂದಿದ್ದಾಗಿದೆ. ಅಲ್ಲಿ ತಪನ್ ಸಿಕ್ದಾರ್ ಅವರು ಸತತ ಮೂರು ಬಾರಿ ಸಿಪಿಐ(ಎಂ) ನ ನಿರ್ಮಲ್ ಕಾಂತಿ ಚಟರ್ಜಿ ಅವರನ್ನು 1,37,405 ಮತಗಳಿಂದ ಸೋಲಿಸಿದರು.

1999 ರಲ್ಲಿ ಅಶೋಕನಗರದಲ್ಲಿ ಬಾದಲ್ ಭಟ್ಟಾಚಾರ್ಯ ಗೆದ್ದ ಉಪಚುನಾವಣೆಯಲ್ಲಿ ಎರಡೂ ಪಕ್ಷಗಳು ಮತ್ತೆ ಪರಸ್ಪರ ಮೈತ್ರಿ ಮಾಡಿಕೊಂಡವು, ಇದು ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯ ಮೊದಲ ಉಪಸ್ಥಿತಿಯನ್ನು ಗುರುತಿಸಿದ್ದ ಸಂದರ್ಭವಾಗಿದೆ. ಅದೇ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ತನ್ನ ಸ್ಥಾನಗಳ ಸಂಖ್ಯೆಯನ್ನು ಎರಡು ಸ್ಥಾನಗಳಿಗೆ ಹೆಚ್ಚಿಸಿಕೊಂಡಿತು, ಸಿಕ್ದರ್ ಮತ್ತೆ ಗೆದ್ದರು.

ಬಿಜೆಪಿ ಮತ್ತು ಟಿಎಂಸಿ ಒಂದೇ ಕಡೆ ಇರುವುದು ಅದೇ ಕೊನೆಯ ಬಾರಿಯಾಗಿತ್ತು.

ಬಾದಲ್ ಭಟ್ಟಾಚಾರ್ಯ ಅವರು ಸಿಪಿಎಂನ ರೇಖಾ ಗೋಸ್ವಾಮಿ ಅವರನ್ನು 9,498 ಮತಗಳಿಂದ ಸೋಲಿಸಿದ್ದರು. 2001 ರವರೆಗೆ ವಿಧಾನಸಭೆಯಲ್ಲಿ ತಮ್ಮ ಎರಡು ವರ್ಷಗಳ ಅವಧಿಯಲ್ಲಿ, ಮುಖ್ಯಮಂತ್ರಿ ಜ್ಯೋತಿ ಬಸು ಅವರನ್ನು ಬಜರಂಗದಳ ಪ್ರತಿನಿಧಿ ಎಂದು ಪದೇ ಪದೇ ಉಲ್ಲೇಖಿಸುತ್ತಿದ್ದರು ಮತ್ತು ಆದ್ದರಿಂದ ಅವರನ್ನು ಹನುಮಾನ್ ಎಂದು ಕರೆಯುತ್ತಿದ್ದರು ಎಂದು ಭಟ್ಟಾಚಾರ್ಯ ದಿ ಟೆಲಿಗ್ರಾಫ್‌ಗೆ ತಿಳಿಸಿದ್ದಾರೆ.

mamata banerjee- Narendra Modi
ಚುನಾವಣೆ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಬಂಗಾಳಕ್ಕೆ ನೂತನ ಮುಖ್ಯ ಕಾರ್ಯದರ್ಶಿ ನೇಮಕ: ಟಿಎಂಸಿ ಕಿಡಿ

ತರುವಾಯ 2014 ರವರೆಗೆ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೂನ್ಯ ಫಲಿತಾಂಶವನ್ನು ಕಂಡಿತು. ಅಂತಿಮವಾಗಿ ಮತ್ತೊಂದು ಉಪಚುನಾವಣೆಯನ್ನು ಗೆಲ್ಲುವ ಮೂಲಕ ಅದು ಸ್ವಂತವಾಗಿ ಸದನವನ್ನು ಪ್ರವೇಶಿಸಿತು.

ಅಂದಿನ ಶಾಸಕರಾಗಿದ್ದ ಸಿಪಿಐ(ಎಂ) ನ ನಾರಾಯಣ್ ಮುಖರ್ಜಿ ಅವರ ನಿಧನದಿಂದಾಗಿ ಬಸಿರ್ಹತ್ ದಕ್ಷಿಣದಲ್ಲಿ ಆ ಉಪಚುನಾವಣೆ ನಡೆಯಿತು. ಬಾಂಗ್ಲಾದೇಶದ ಗಡಿಯಲ್ಲಿರುವ ಇಲ್ಲಿನ ಅಕ್ರಮ ವಲಸೆಯ ವಿಷಯ ಇಲ್ಲಿನ ಜನರಲ್ಲಿ ಒಂದು ರೀತಿಯ ಆತಂಕ ಮೂಡಿಸಿತು. ಬಿಜೆಪಿಯ ವಿಜೇತ ಅಭ್ಯರ್ಥಿ ಸಮಿಕ್ ಭಟ್ಟಾಚಾರ್ಯ, ಟಿಎಂಸಿಯಿಂದ ಸ್ಪರ್ಧಿಸಿದ್ದ ಮಾಜಿ ಫುಟ್ಬಾಲ್ ಆಟಗಾರ ದಿಪೇಂಡು ಬಿಸ್ವಾಸ್ ಅವರನ್ನು ಕೇವಲ 1,586 ಮತಗಳಿಂದ ಸೋಲಿಸಿದರು. ಏತನ್ಮಧ್ಯೆ, ಸಿಪಿಐ(ಎಂ) ಮೂರನೇ ಸ್ಥಾನಕ್ಕೆ ಇಳಿದಿತ್ತು.

ಎರಡು ವರ್ಷಗಳ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಬಿಸ್ವಾಸ್ ಭಟ್ಟಾಚಾರ್ಯ ಅವರನ್ನು 24,058 ಮತಗಳಿಂದ ಸೋಲಿಸಿ, ಫಲಿತಾಂಶವನ್ನು ಬದಲಾಯಿಸಿದರು. ಆದಾಗ್ಯೂ, ಬಿಜೆಪಿ 2016 ರಲ್ಲಿ ತನ್ನ ಶಾಸಕರ ಸಂಖ್ಯೆಯನ್ನು ಮೂರಕ್ಕೆ ಮತ್ತು ನಂತರ 2021 ರಲ್ಲಿ 77 ಕ್ಕೆ ಹೆಚ್ಚಿಸಿತು.

2021 ರಲ್ಲಿ ಟಿಎಂಸಿ ಟಿಕೆಟ್ ನಿರಾಕರಿಸಿದಾಗ, ಅಸಮಾಧಾನಗೊಂಡ ಬಿಸ್ವಾಸ್ ಬಿಜೆಪಿಗೆ ಸೇರಿದರು. ಆದರೆ ಬಿಸ್ವಾಸ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಿಲ್ಲ.

ಈ ಬೆನ್ನಲ್ಲೇ 2026 ರ ಚುನಾವಣೆಗೆ ಮುಂಚಿತವಾಗಿ ಅವರು ಟಿಎಂಸಿಗೆ ಘರ್ ವಾಪ್ಸಿಯಾದರು. ಅವರನ್ನು ಇನ್ನೂ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಲಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ ಈಗ ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿರುವ ಭಟ್ಟಾಚಾರ್ಯ ಅವರನ್ನೂ ಇನ್ನೂ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com