ಉತ್ತರ ಪ್ರದೇಶ: ಬರೇಲಿಯಲ್ಲಿ ಹಳಿ ಮೇಲೆ ಮುಸ್ಲಿಂ ಧರ್ಮಗುರುವಿನ ಶವ ಪತ್ತೆ; ಕುಟುಂಬದವರಿಂದ ದುಷ್ಕೃತ್ಯದ ಆರೋಪ

ಏಪ್ರಿಲ್ 24-25 ರಂದು ನಡೆದ 'ಉರ್ಸ್-ಎ-ತಾಜುಶ್ಶರಿಯಾ' ಕಾರ್ಯಕ್ರಮದಲ್ಲಿ ಭಾಗವಹಿಸಲು ಬರೇಲಿಗೆ ಬಂದಿದ್ದರು ಎಂದು ತಿಳಿದು ಬಂದಿದೆ.
File image
ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ online desk
Updated on

ಲಖನೌ: 35 ವರ್ಷದ ಮುಸ್ಲಿಂ ಧರ್ಮಗುರುವಿನ ಮೃತದೇಹ ಬರೇರಿಯ ರೈಲ್ವೆ ಹಳಿಗಳ ಮೇಲೆ ಪತ್ತೆಯಾಗಿದ್ದು, ಅವರನ್ನು ರೈಲಿನಿಂದ ಎಸೆಯಲಾಗಿದೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಆದರೆ ಪೊಲೀಸರು ಮೌಲ್ವಿಯ ಹೇಳಿಕೆಯನ್ನು ನಿರಾಕರಿಸಿದ್ದಾರೆ.

ಬರೇಲಿ ಪೊಲೀಸ್ ವರಿಷ್ಠಾಧಿಕಾರಿ (ನಗರ) ಮಾನುಷ್ ಪರೀಕ್ ಅವರ ಮೃತದೇಹ ಏಪ್ರಿಲ್ 27 ರ ಬೆಳಿಗ್ಗೆ ಲಾಲ್ ಫಾಟಕ್ ಬಳಿಯ ರೈಲ್ವೆ ಹಳಿಗಳ ಬಳಿ ಮೃತದೇಹ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಬಿಹಾರದ ಠಾಕೂರ್ ಗಂಜ್ ನಿವಾಸಿ ಮೃತ ಮೌಲಾನಾ ತೌಸಿಫ್ ರಜಾ ಮಝಾರಿ ರೈಲಿನಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ಧರ್ಮಗುರುವಿನ ಕುಟುಂಬ ಸದಸ್ಯರು ಮತ್ತು ಸ್ಥಳೀಯ ಧಾರ್ಮಿಕ ಮುಖಂಡರನ್ನು ಸಂಪರ್ಕಿಸಿದ್ದು, ಏಪ್ರಿಲ್ 24-25 ರಂದು ನಡೆದ 'ಉರ್ಸ್-ಎ-ತಾಜುಶ್ಶರಿಯಾ' ಕಾರ್ಯಕ್ರಮದಲ್ಲಿ ಭಾಗವಹಿಸಲು ಬರೇಲಿಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಇಲ್ಲಿಯವರೆಗೆ ಯಾವುದೇ ಔಪಚಾರಿಕ ದೂರು ಬಂದಿಲ್ಲ, ಮತ್ತು ಹಲ್ಲೆ ಅಥವಾ ದರೋಡೆ ಆಯಾಮವಿದೆಯೇ ಎಂಬುದು ಖಚಿತವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

File image
ಒಂಟಿಯಾಗಿದ್ದ ಬುರ್ಕಾ ಮಹಿಳೆ ಎದೆ ಮುಟ್ಟಿ ಕಿರುಕುಳ ನೀಡಿದ ಮುಸ್ಲಿಂ ವ್ಯಕ್ತಿ: ಕಾಲಿಗೆ ಗುಂಡಿಕ್ಕಿ ಬಂಧಿಸಿದ UP ಪೊಲೀಸರು; Video

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಆದಾಗ್ಯೂ, ಅಖಿಲ ಭಾರತ ಮುಸ್ಲಿಂ ಜಮಾಅತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ, ಮನೆಗೆ ಹಿಂದಿರುಗುತ್ತಿದ್ದಾಗ ರೈಲಿನಲ್ಲಿ "ಸಮಾಜ ವಿರೋಧಿ ಶಕ್ತಿಗಳು" ಧರ್ಮಗುರುವಿನ ಮೇಲೆ ಹಲ್ಲೆ ನಡೆಸಿ, ದರೋಡೆ ಯತ್ನದ ಸಮಯದಲ್ಲಿ ಅವರನ್ನು ಹೊರಗೆ ಎಸೆಯಲಾಗಿದೆ ಎಂದು ಆರೋಪಿಸಿದ್ದಾರೆ.

ಹಲ್ಲೆಯ ಸಮಯದಲ್ಲಿ, ಧರ್ಮಗುರು ತನ್ನ ಪತ್ನಿ ತಬಸ್ಸುಮ್ ಖಾತೂನ್ ಅವರಿಗೆ ಕರೆ ಮಾಡಿ ತಾವು ಎದುರಿಸಿದ ಘಟನೆಯನ್ನು ವಿವರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com