ತಮಿಳುನಾಡು: ಸ್ಪೀಕರ್ ಆಗಿ ಜೆ.ಸಿ.ಡಿ ಪ್ರಭಾಕರ್ ಅವಿರೋಧವಾಗಿ ಆಯ್ಕೆ; ನಾಳೆ ವಿಜಯ್ ಗೆ ಅಗ್ನಿಪರೀಕ್ಷೆ; AIADMK ಷಣ್ಮುಗಂ ಬಣ ಬೆಂಬಲ!

ಇಂದು ಬೆಳ್ಳಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಷಣ್ಮುಗಂ, ನಾವು ಪಕ್ಷವನ್ನು ಪುನರು ಸಂಘಟಿಸಬೇಕಾಗಿದೆ. ಎಐಎಡಿಎಂಕೆಯ ಭವಿಷ್ಯದ ಬಗ್ಗೆ ಚರ್ಚಿಸಬೇಕಾಗಿದೆ ಎಂದರು.
Vijay, Shanmugam
ಸಿಎಂ ವಿಜಯ್, ಷಣ್ಮುಗಂ
Updated on

ಚೆನ್ನೈ: ತಮಿಳುನಾಡು ವಿಧಾನಸಭೆಯ ಸ್ಪೀಕರ್ ಆಗಿ ಜೆ.ಸಿ.ಡಿ ಪ್ರಭಾಕರ್ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಾಳೆ ವಿಶ್ವಾಸಮತ ಯಾಚಿಸಲು ಸಿಎಂ ವಿಜಯ್ ಸಜ್ಜಾಗುತ್ತಿರುವಂತೆಯೇ ವೇಲುಮಣಿ-ಷಣ್ಮುಗಂ ನೇತೃತ್ವದ ಎಐಎಡಿಎಂಕೆ ಬಣವು ಆಡಳಿತಾರೂಢ ಟಿವಿಕೆಗೆ ಬೆಂಬಲ ಘೋಷಿಸಿದೆ. ಕಳೆದ ದಶಕದಲ್ಲಿ ಪಕ್ಷದ ಚುನಾವಣಾ ಹಿನ್ನಡೆಯೇ ತಮ್ಮ ನಿಲುವಿಗೆ ಕಾರಣ ಎಂದು ಷಣ್ಮುಗಂ ಹೇಳಿದ್ದಾರೆ.

ಇಂದು ಬೆಳ್ಳಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಷಣ್ಮುಗಂ, ನಾವು ಪಕ್ಷವನ್ನು ಪುನರು ಸಂಘಟಿಸಬೇಕಾಗಿದೆ. ಎಐಎಡಿಎಂಕೆಯ ಭವಿಷ್ಯದ ಬಗ್ಗೆ ಚರ್ಚಿಸಬೇಕಾಗಿದೆ ಎಂದರು. ಆದಾಗ್ಯೂ, ಪಕ್ಷವನ್ನು ವಿಭಜಿಸುವ ಯಾವುದೇ ಯೋಜನೆಗಳಿಲ್ಲ ಎಂದು ಅವರು ತಿಳಿಸಿದರು.

ಕಳೆದ ವಾರ ಸರ್ಕಾರ ರಚನೆ ಕುರಿತಂತೆ ಮಾತುಕತೆ ನಡೆಯುತ್ತಿದ್ದಾಗ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ವಿಜಯ್ ಮತ್ತು ಟಿವಿಕೆ ಜೊತೆಗಿ ಮೈತ್ರಿಯನ್ನು ತಿರಸ್ಕರಿಸಿದ್ದರು. ಡಿಎಂಕೆ ಜೊತೆಗೆ ಮೈತ್ರಿಗೆ ಒಲವು ತೋರಿದ್ದರು. ಇದೇ ವಿಚಾರವಾಗಿ ಎಐಎಡಿಎಂಕೆ ಛಿದ್ರವಾಗಿದ್ದು, ಇದೀಗ ಪಳನಿಸ್ವಾಮಿ ವಿರುದ್ಧ ಸಿಡಿದೆದ್ದಿರುವ ಷಣ್ಮುಗಂ ನೇತೃತ್ವದ ಬಣ ಟಿವಿಕೆಗೆ ಬೆಂಬಲ ಘೋಷಿಸಿದೆ.

Vijay, Shanmugam
ತಮಿಳುನಾಡು ಸಿಎಂ ವಿಜಯ್‌ಗೆ Z+ ಭದ್ರತೆ: ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ

ಪಳನಿಸ್ವಾಮಿ ಎಐಎಡಿಎಂಕೆ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿ ರಾಜಕೀಯ ಎದುರಾಳಿ ಡಿಎಂಕೆ ಜೊತೆಗೆ ಮೈತ್ರಿಗೆ ಮುಂದಾಗುವ ಮೂಲಕ ಪಕ್ಷವನ್ನು ನಾಶಪಡಿಸಲು ಮುಂದಾಗಿದ್ದರು ಎಂದು ಷಣ್ಮುಗಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ವಿಧಾನಸಭೆಯಲ್ಲಿ ಸಭಾನಾಯಕರಾಗಲು ಯೋಜಿಸುತ್ತಿದ್ದ ಪಳನಿಸ್ವಾಮಿಗೆ ಹಿನ್ನಡೆ ಆದಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com