ಕೋಟ್‌ ಧರಿಸಿ ಕೋರ್ಟ್‌ಗೆ ಹಾಜರಾದ ಮಮತಾಗೆ ಸಂಕಷ್ಟ?: ವಕೀಲ ವೃತ್ತಿಯ ವಿವರ ಕೇಳಿದ ಬಾರ್ ಕೌನ್ಸಿಲ್

ಚುನಾವಣಾ ನಂತರದ ಹಿಂಸಾಚಾರ ಮತ್ತು ಪಕ್ಷದ ಕಚೇರಿಗಳ ಮೇಲಿನ ದಾಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ವಾದ ಮಂಡಿಸಲು ಮಮತಾ ಬ್ಯಾನರ್ಜಿ ಅವರು ಇಂದು ಕಲ್ಕತ್ತಾ ಹೈಕೋರ್ಟ್ ಗೆ ಕರಿ ಕೋಟ್ ಧರಿಸಿ ಆಗಮಿಸಿ ಗಮನ ಸೆಳೆದಿದ್ದರು.
BCI seeks Mamata Banerjee's enrolment details after she appears in lawyer's gown to argue case at Calcutta HC
ಮಮತಾ ಬ್ಯಾನರ್ಜಿ
Updated on

ನವದೆಹಲಿ: ಲಾಯರ್‌ ಕೋಟ್‌ ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಹಾಜರಾದ ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಇದೀಗ ಸಂಕಷ್ಟ ಎದುರಾಗಿದ್ದು, ಟಿಎಂಸಿ ನಾಯಕಿ ವಕೀಲೆಯಾಗಿ ನೋಂದಾಸಿಕೊಂಡ ದಾಖಲಾತಿ ಮತ್ತು ವೃತ್ತಿಪರ ಅಭ್ಯಾಸದ ಬಗ್ಗೆ 48 ಗಂಟೆಗಳ ಒಳಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ(ಬಿಸಿಐ) ಗುರುವಾರ ಪಶ್ಚಿಮ ಬಂಗಾಳ ಬಾರ್ ಕೌನ್ಸಿಲ್‌ಗೆ ಸೂಚಿಸಿದೆ.

ಚುನಾವಣಾ ನಂತರದ ಹಿಂಸಾಚಾರ ಮತ್ತು ಪಕ್ಷದ ಕಚೇರಿಗಳ ಮೇಲಿನ ದಾಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ವಾದ ಮಂಡಿಸಲು ಮಮತಾ ಬ್ಯಾನರ್ಜಿ ಅವರು ಇಂದು ಕಲ್ಕತ್ತಾ ಹೈಕೋರ್ಟ್ ಗೆ ಕರಿ ಕೋಟ್ ಧರಿಸಿ ಆಗಮಿಸಿ ಗಮನ ಸೆಳೆದಿದ್ದರು.

2011 ರಿಂದ 2026 ರವರೆಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮತ್ತು ನಂತರ ಮಮತಾ ಅವರು ವಕೀಲರಾಗಿ ನೋಂದಾಸಿಕೊಂಡಿದ್ದಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳು, ಯಾವುದಾದರೂ ಇದ್ದರೆ ಮತ್ತು ಅವರ ಅಭ್ಯಾಸದ ಸ್ಥಿತಿಗತಿಗೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಎರಡು ದಿನಗಳಲ್ಲಿ ಸಲ್ಲಿಸುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ(ಬಿಸಿಐ) ಪಶ್ಚಿಮ ಬಂಗಾಳ ಬಾರ್ ಕೌನ್ಸಿಲ್‌ನ ಕಾರ್ಯದರ್ಶಿಗೆ ಪತ್ರ ಬರೆದು ಸೂಚಿಸಿದೆ.

BCI seeks Mamata Banerjee's enrolment details after she appears in lawyer's gown to argue case at Calcutta HC
ಚುನಾವಣೋತ್ತರ ಹಿಂಸಾಚಾರ ಕೇಸ್: ಸ್ವತಃ ವಾದ ಮಂಡಿಸಲು ವಕೀಲರ ಉಡುಪಿನಲ್ಲಿ ಕೋಲ್ಕತ್ತಾ ಹೈಕೋರ್ಟ್‌ಗೆ ಆಗಮಿಸಿದ Mamata Banerjee; Video

ಬಿಸಿಐ ಪ್ರಧಾನ ಕಾರ್ಯದರ್ಶಿ ಶ್ರೀರಾಮಂತೋ ಸೇನ್ ಬರೆದ ಪತ್ರದಲ್ಲಿ, ಮಮತಾ ಅವರು ಕೋಟ್ ಹಾಗೂ ಬಿಳಿ ವಕೀಲರ ಬ್ಯಾಂಡ್‌ ಸೇರಿದಂತೆ ಕಾನೂನು ಉಡುಪಿನಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ ಎಂದು ಹೇಳುವ "ವಿವಿಧ ಮಾಧ್ಯಮ ವರದಿಗಳನ್ನು" ಕೌನ್ಸಿಲ್ ಗಮನಿಸಿದೆ ಎಂದು ಹೇಳಿದ್ದಾರೆ.

ಪ್ರಚಲಿತ ಪದ್ಧತಿಯ ಪ್ರಕಾರ, ಸಾಂವಿಧಾನಿಕ ಹುದ್ದೆಯನ್ನು ಹೊಂದಿದ್ದ ಅಥವಾ ಲಾಭದಾಯಕವಾದ ಉದ್ಯೋಗದಲ್ಲಿದ್ದ ವ್ಯಕ್ತಿಯು ಸೇವೆಯ ಸಮಯದಲ್ಲಿ ಬಾರ್ ಪರವಾನಗಿಯನ್ನು ಅಮಾನತುಗೊಳಿಸಬೇಕು ಮತ್ತು ಅವರು ಮತ್ತೆ ವಕೀಲರಾಗಿ ವೃತ್ತಿ ಆರಂಭಿಸಲು ಅದನ್ನು ಪುನರುಜ್ಜೀವನಗೊಳಿಸಬೇಕು.

2026ರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ, ಪಕ್ಷದ ಕಚೇರಿಗಳ ಮೇಲೆ ದಾಳಿ ಮತ್ತು ನಮ್ಮ ಕಾರ್ಯಕರ್ತರ ಮೇಲೆ ದಾಳಿ ನಡೆಸಲಾಗಿದೆ ಎಂದು ಆರೋಪಿಸಿ ಟಿಎಂಸಿ ಪರವಾಗಿ ವಕೀಲ ಶಿರ್ಷಣ್ಯ ಬಂಡೋಪಾಧ್ಯಾಯ ಅವರು ಸಲ್ಲಿಸಿದ ಪ್ರಕರಣದಲ್ಲಿ ವಾದಿಸಲು ಮಮತಾ ಬ್ಯಾನರ್ಜಿ ಕಲ್ಕತ್ತಾ ಹೈಕೋರ್ಟ್ ಮುಂದೆ ಹಾಜರಾಗಿದ್ದರು.

ಚುನಾವಣೋತ್ತರ ಹಿಂಸಾಚಾರದ ಈ ಅರ್ಜಿಯನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹೆಚ್.ಸಿ ಸುಜಯ್ ಪಾಲ್ ನೇತೃತ್ವದ ಪೀಠ ವಿಚಾರಣೆ ನಡೆಸುತ್ತಿದೆ. ಪ್ರಕರಣದ ವಿಚಾರಣೆಯ ವೇಳೆ ಹಲವಾರು ಅಂಶಗಳ ಕುರಿತು ಮಮತಾ ಬ್ಯಾನರ್ಜಿ ಪ್ರಶ್ನೆಗಳನ್ನು ಎತ್ತುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com