ಸನಾತನವನ್ನು ನಾಶ ಮಾಡೋಕೆ ಬಂದಿರೋದು: ಸಿಎಂ ವಿಜಯ್'ರ TVK ಶಾಸಕ ಮುಸ್ತಫಾ ಹೇಳಿಕೆ ವಿವಾದ, Video!

ಮುಖ್ಯಮಂತ್ರಿ ಜೋಸೆಫ್ ವಿಜಯ್'ರ TVK ಶಾಸಕನೊಬ್ಬ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ 'ಸನಾತನ ಧರ್ಮ ನಿರ್ಮೂಲನೆ ಮಾಡಬೇಕು' ಎಂಬ ನಿಲುವನ್ನು ಬೆಂಬಲಿಸಿದ್ದು ಪಕ್ಷವು ಪೆರಿಯಾರ್ ಇವಿ ರಾಮಸಾಮಿ ಮತ್ತು ಬಿಆರ್ ಅಂಬೇಡ್ಕರ್ ಅವರ ಆದರ್ಶಗಳನ್ನು ಅನುಸರಿಸುತ್ತದೆ.
Vijay-Mustafa
ವಿಜಯ್-ಮುಸ್ತಫಾ
Updated on

ಮುಖ್ಯಮಂತ್ರಿ ಜೋಸೆಫ್ ವಿಜಯ್'ರ TVK ಶಾಸಕನೊಬ್ಬ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ 'ಸನಾತನ ಧರ್ಮ ನಿರ್ಮೂಲನೆ ಮಾಡಬೇಕು' ಎಂಬ ನಿಲುವನ್ನು ಬೆಂಬಲಿಸಿದ್ದು ಪಕ್ಷವು ಪೆರಿಯಾರ್ ಇವಿ ರಾಮಸಾಮಿ ಮತ್ತು ಬಿಆರ್ ಅಂಬೇಡ್ಕರ್ ಅವರ ಆದರ್ಶಗಳನ್ನು ಅನುಸರಿಸುತ್ತದೆ. ಸನಾತನವನ್ನು ನಾಶಮಾಡುವ ಹೋರಾಟಕ್ಕೆ ಸೇರಿಕೊಂಡಿದೆ ಎಂದು ಹೇಳಿದ್ದು ಇದೀಗ ತಮಿಳುನಾಡಿನಲ್ಲಿ ಹೊಸ ರಾಜಕೀಯ ವಿವಾದ ಭುಗಿಲೆದ್ದಿದೆ.

ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮದ ಕುರಿತು ಮಾಡಿದ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಮಧುರೈ ಸೆಂಟ್ರಲ್‌ನ ಟಿವಿಕೆ ಶಾಸಕ ವಿಎಂಎಸ್ ಮುಸ್ತಫಾ, ನಾವು ಕೂಡ ಪೆರಿಯಾರ್ ಮತ್ತು ಅಂಬೇಡ್ಕರ್ ಅವರ ಆದರ್ಶಗಳನ್ನು ಅನುಸರಿಸುತ್ತೇವೆ. ಸನಾತನ ಧರ್ಮವನ್ನು ನಾಶಮಾಡುವ ಅಭಿಯಾನಕ್ಕೆ ನಾವು ಕೂಡ ಸೇರಿಕೊಂಡಿದ್ದೇವೆ ಎಂದು ಹೇಳಿದರು.

ಈ ಹೇಳಿಕೆಗಳನ್ನು ಬಿಜೆಪಿ ಬಲವಾಗಿ ಖಂಡಿಸಿದೆ. ಟಿವಿಕೆ ಮತ್ತು ಡಿಎಂಕೆ ವಿಭಜಕ ವಾಕ್ಚಾತುರ್ಯವನ್ನು ಬಳಸುತ್ತಿದ್ದು ಹಿಂದೂ ಭಾವನೆಗಳನ್ನು ಅವಮಾನಿಸುತ್ತಿದೆ ಎಂದು ಆರೋಪಿಸಿದೆ. ಬಿಜೆಪಿ ನಾಯಕ ನಾರಾಯಣನ್ ತಿರುಪತಿ, ಮುಸ್ತಫಾ ಅವರ ಹೇಳಿಕೆಯನ್ನು ಬಲವಾಗಿ ಟೀಕಿಸಿದರು. ಇದು ಖಂಡನೀಯ ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಹಾನಿಕಾರಕವಾಗಿದೆ ಎಂದು ಕರೆದರು.

Vijay-Mustafa
Tamil Nadu: ಫ್ಯಾಷನ್ ಟ್ರೆಂಡ್ ಆಗ್ತಿದೆ ವಿಜಯ್ CM ಸ್ಟೈಲ್; 'ಕಾಂಬೊ ಪ್ಯಾಕೇಜ್‌' ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ, ಬಿಜೆಪಿ ನಾಯಕರು, ಮುಸ್ತಫಾ ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮದ ವಿರುದ್ಧ ಇದೇ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು. ಹಿಂದೂ ಭಾವನೆಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು. ಅಂತಹ ಕಾಮೆಂಟ್‌ಗಳು ರಾಜಕೀಯ ದುರಹಂಕಾರವನ್ನು ಪ್ರತಿಬಿಂಬಿಸುತ್ತವೆ ಎಂದು ನಾಯಕ ಹೇಳಿದರು. ಮುಸ್ತಫಾ ಅವರ ಹೇಳಿಕೆಯನ್ನು ಅಥವಾ ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್ ಅವರ ಹಿಂದಿನ ಕಾಮೆಂಟ್‌ಗಳನ್ನು ಖಂಡಿಸದಿದ್ದಕ್ಕಾಗಿ ವಿಜಯ್ ಅವರನ್ನು ಬಿಜೆಪಿ ನಾಯಕರು ಟೀಕಿಸಿದರು.

ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ವಿಧಾನಸಭೆಯಲ್ಲಿ ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್ ಅವರ ಭಾಷಣವನ್ನಾಗಲಿ ಅಥವಾ ಡಿಎಂಕೆ ಶಾಸಕ ಮುಸ್ತಫಾ ಅವರ ಹೇಳಿಕೆಗಳನ್ನಾಗಲಿ ಇನ್ನೂ ಖಂಡಿಸಿಲ್ಲ. ಎಲ್ಲಾ ಜನರ ನಾಯಕ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗೆ, ಬಹುಸಂಖ್ಯಾತ ಸಮುದಾಯದ ಜೀವನಶೈಲಿಯನ್ನು ಟೀಕಿಸುವವರನ್ನು ಖಂಡಿಸದಿರುವುದು ಅವರ ಉನ್ನತ ಹುದ್ದೆಗೆ ಯೋಗ್ಯವಲ್ಲ ಎಂದು Xನಲ್ಲಿ ಬರೆದುಕೊಂಡಿದ್ದಾರೆ. ಸನಾತನ ಧರ್ಮವು ಶಾಶ್ವತವಾಗಿದ್ದು ಯಾವುದೇ ವ್ಯಕ್ತಿ ಅಥವಾ ರಾಜಕೀಯ ಚಳುವಳಿಯಿಂದ ಅದನ್ನು ನಾಶಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com