NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಮುಖ್ಯ ಆರೋಪಿ, ಬಿಜೆಪಿ ಕಾರ್ಯಕರ್ತನ ಕುಟುಂಬ ಸದಸ್ಯರು ಕಳೆದ ವರ್ಷ ಪರೀಕ್ಷೆ ಬರೆದಿದ್ದರು !

ಸಿಬಿಐ ತನಿಖೆಯಲ್ಲಿ ದಿನೇಶ್ ಮತ್ತು ಮಂಗೀಲಾಲ್ ಕುಟುಂಬದ ಮೂವರು ಹೆಣ್ಣುಮಕ್ಕಳಾದ ಪಲಕ್, ಸೋನಿಯಾ ಮತ್ತು ಪ್ರಕೃತಿ ಕಳೆದ ವರ್ಷ ನೀಟ್ ಪರೀಕ್ಷೆ ಉತ್ತೀರ್ಣರಾಗಿದ್ದರೆಂಬ ಮಾಹಿತಿ ದೊರೆತಿದ್ದು, ಈಗ ಅವರು ಕೂಡ ತನಿಖೆಯ ವ್ಯಾಪ್ತಿಗೆ ಬಂದಿದ್ದಾರೆ.
ದೆಹಲಿಯ ಜಂತರ್ ಮಂತರ್ ನಲ್ಲಿ NEET 2026 ಹಗರಣದ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು.
ದೆಹಲಿಯ ಜಂತರ್ ಮಂತರ್ ನಲ್ಲಿ NEET 2026 ಹಗರಣದ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು.
Updated on

ಜೈಪುರ/ಮುಂಬೈ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ವಿಸ್ತರಿಸಿದೆ. ಪ್ರಮುಖ ಆರೋಪಿ ಹಾಗೂ ಬಿಜೆಪಿ ಕಾರ್ಯಕರ್ತ ದಿನೇಶ್ ಬಿನ್ವಾಲ್ ಅವರ ಕುಟುಂಬದ ಮೂವರು ಸದಸ್ಯರು ಕಳೆದ ವರ್ಷವೂ ವೈದ್ಯಕೀಯ ಪ್ರವೇಶ ಪಡೆದಿರುವುದು ಹೊಸ ಬೆಳವಣಿಗೆಯಲ್ಲಿ ಬಹಿರಂಗವಾಗಿದೆ. 2025ರ ನೀಟ್ ಪರೀಕ್ಷೆಯನ್ನೂ ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ.

ನಿನ್ನೆ, ಸಿಬಿಐ ಐವರು ಪ್ರಮುಖ ಆರೋಪಿಗಳಾದ ನಾಸಿಕ್‌ನ ಶುಭಂ ಖೈರ್ನಾರ್, ದಿನೇಶ್ ಬಿನ್ವಾಲ್, ಅವರ ಸಹೋದರ ಮಂಗೀಲಾಲ್, ಮಂಗೀಲಾಲ್ ಪುತ್ರ ವಿಕಾಸ್ ಹಾಗೂ ಹರಿಯಾಣದ ಯಶ್ ಯಾದವ್ ವಿರುದ್ಧ ಸ್ಥಳಾಂತರ ಬಂಧನ ಆದೇಶ ಪಡೆದಿದೆ. ಬಳಿಕ ಐವರನ್ನೂ ವಿಚಾರಣೆಗೆ ದೆಹಲಿಗೆ ಕರೆದೊಯ್ಯಲಾಯಿತು.

ಸಿಬಿಐ ತನಿಖೆಯಲ್ಲಿ ದಿನೇಶ್ ಮತ್ತು ಮಂಗೀಲಾಲ್ ಕುಟುಂಬದ ಮೂವರು ಹೆಣ್ಣುಮಕ್ಕಳಾದ ಪಲಕ್, ಸೋನಿಯಾ ಮತ್ತು ಪ್ರಕೃತಿ ಕಳೆದ ವರ್ಷ ನೀಟ್ ಪರೀಕ್ಷೆ ಉತ್ತೀರ್ಣರಾಗಿದ್ದರೆಂಬ ಮಾಹಿತಿ ದೊರೆತಿದ್ದು, ಈಗ ಅವರು ಕೂಡ ತನಿಖೆಯ ವ್ಯಾಪ್ತಿಗೆ ಬಂದಿದ್ದಾರೆ.

ದೆಹಲಿಯ ಜಂತರ್ ಮಂತರ್ ನಲ್ಲಿ NEET 2026 ಹಗರಣದ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು.
NEET UG re-exam- ಪ್ರಶ್ನೆಪತ್ರಿಕೆ ಸೋರಿಕೆ: ಜೂ.21ಕ್ಕೆ ನೀಟ್-ಯುಜಿ ಮರು ಪರೀಕ್ಷೆ ನಿಗದಿ

ತನಿಖೆಯಲ್ಲಿ ಮತ್ತಷ್ಟು ಬೆಳಕಿಗೆ ಬಂದಿದ್ದು, ವಿಕಾಸ್ ಮತ್ತು ಯಶ್ ಯಾದವ್ ಸಿಕಾರ್‌ನ ಕೋಚಿಂಗ್ ಸಂಸ್ಥೆಯಲ್ಲಿ ಒಟ್ಟಿಗೆ ಓದಿದ್ದರೆಂಬುದು ಗೊತ್ತಾಗಿದೆ. ಕಳೆದ ವರ್ಷದ ದೀಪಾವಳಿ ಸಂದರ್ಭದಲ್ಲಿ, ಯಶ್ ಯಾದವ್ ಪರೀಕ್ಷೆಗೆ ಮುನ್ನವೇ NEET ಪ್ರಶ್ನೆಪತ್ರಿಕೆ ಒದಗಿಸಬಹುದು ಎಂದು ವಿಕಾಸ್ ಹಾಗೂ ಮಂಗೀಲಾಲ್‌ಗೆ ಹೇಳಿದ್ದಾನೆ ಎನ್ನಲಾಗಿದೆ.

ತನಿಖಾಧಿಕಾರಿಗಳು, ಪ್ರಶ್ನೆಪತ್ರಿಕೆಯ ಹಲವು ಪ್ರತಿಗಳನ್ನು ನಾಸಿಕ್‌ನ ಮುದ್ರಣಾಲಯದಲ್ಲಿ ಮುದ್ರಿಸಿ ಬಳಿಕ ಹಲವು ರಾಜ್ಯಗಳಿಗೆ ಪೂರೈಸಿದ್ದರು ಎಂದು ಪತ್ತೆಹಚ್ಚಿದ್ದಾರೆ.

ಮಹಾರಾಷ್ಟ್ರದಲ್ಲಿ ಸಿಬಿಐ ಅಹಿಲ್ಯಾನಗರದ ಧನಂಜಯ್ ಲೋಕಂಡಾ ಮತ್ತು ಪುಣೆಯ ಮನಿಷಾ ವಾಘ್ಮಾರೆ ಎಂಬ ಇಬ್ಬರನ್ನು ಬಂಧಿಸಿದೆ.

ಮೇ 3ರಂದು ನಡೆದ ಪರೀಕ್ಷೆಗೆ ಮುನ್ನ ಮನಿಷಾ ಅವರ ಬ್ಯಾಂಕ್ ಖಾತೆಗೆ 21 ಬ್ಯಾಂಕ್ ಖಾತೆಗಳಿಂದ ಹಣ ಜಮೆಯಾಗಿತ್ತು ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ, ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ 21 ವರ್ಷದ ನೀಟ್ ಅಭ್ಯರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೂಡ ವರದಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com