ದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ ಸಂಚು': ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್!

ಸೋಶಿಯಲ್ ಮೀಡಿಯಾ, bot, ಎಐ ಮತ್ತು ಅದರ ಶಸ್ತ್ರಾಸ್ತ್ರೀಕರಣದ ಯುಗದಲ್ಲಿ, ಪ್ರಭಾವ ಕಾರ್ಯಾಚರಣೆಗಳು ಅಪಾಯಕಾರಿಯಾಗಿದ್ದು, ಸುಳ್ಳು ಮಾಹಿತಿ ಹರಡುವ ಮೂಲಕ ಅಸ್ಥಿರಗೊಳಿಸುವ ಪರಿಣಾಮಕಾರಿ ಮಾರ್ಗಗಳಾಗಿವೆ ಎಂದು ಅವರು ಹೇಳಿದ್ದಾರೆ.
Rajeev Chandrasekhar
ರಾಜೀವ್ ಚಂದ್ರಶೇಖರ್!
Updated on

ತಿರುವನಂತಪುರ: ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿರುವ "ಕಾಕ್ರೋಚ್ ಜನತಾ ಪಾರ್ಟಿ" ಭಾರತವನ್ನು ಅಸ್ಥಿರಗೊಳಿಸುವ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು ಗುರಿಯಾಗಿಸುವ ಗುರಿ ಹೊಂದಿರುವ ಗಡಿಯಾಚೆಗಿನ ಕಾರ್ಯಾಚರಣೆಯ ಭಾಗವಾಗಿದೆ ಎಂದು ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಶನಿವಾರ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಚಂದ್ರಶೇಖರ್, CockroachParty gambit ಎಂದು ಕರೆದಿದ್ದು, ವಿಪಕ್ಷಗಳ ನೆರವಿನಿಂದ ಆಗಿರುವ ಗಡಿಯಾಚೆಗಿನ ಪ್ರಭಾವಿ ಕಾರ್ಯಾಚರಣೆ ಎಂದು ಕರೆದಿದ್ದಾರೆ.

ಸೋಶಿಯಲ್ ಮೀಡಿಯಾ, bot, ಎಐ ಮತ್ತು ಅದರ ಶಸ್ತ್ರಾಸ್ತ್ರೀಕರಣದ ಯುಗದಲ್ಲಿ, ಪ್ರಭಾವ ಕಾರ್ಯಾಚರಣೆಗಳು ಅಪಾಯಕಾರಿಯಾಗಿದ್ದು, ಸುಳ್ಳು ಮಾಹಿತಿ ಹರಡುವ ಮೂಲಕ ಅಸ್ಥಿರಗೊಳಿಸುವ ಪರಿಣಾಮಕಾರಿ ಮಾರ್ಗಗಳಾಗಿವೆ ಎಂದು ಅವರು ಹೇಳಿದ್ದಾರೆ.

Rajeev Chandrasekhar
Cockroach Janata Party ಖಾತೆ ನಿರ್ಬಂಧಿಸುವುದು 'ವಿನಾಶಕಾರಿ ಮತ್ತು ತೀವ್ರ ಅವಿವೇಕತನ': ಈ ಅವಕಾಶ ಬಳಸಿಕೊಳ್ಳಿ; ಪ್ರತಿಪಕ್ಷಗಳಿಗೆ ಶಶಿ ತರೂರ್ ಸಲಹೆ

ಮೋದಿ ನಾಯಕತ್ವದಲ್ಲಿ ಭಾರತದ ಪ್ರಗತಿ ಮತ್ತು ಆಧುನೀಕರಣವು ಹಲವಾರು ದೇಶಗಳು ಮತ್ತು ಸ್ವಾರ್ಥ ಹಿತಾಸಕ್ತಿಗಳಲ್ಲಿ ಅಸಮಾಧಾನವನ್ನು ಸೃಷ್ಟಿಸಿದೆ. ನಮ್ಮ ದೇಶದ ನಿರಂತರ ಪ್ರಗತಿಗೆಅನೇಕ ಅಡೆತಡೆಗಳು ಸೃಷ್ಟಿಯಾಗುತ್ತಿವೆ ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com