

ನವದೆಹಲಿ: ಇತ್ತೀಚೆಗೆ ಆಮ್ ಆದ್ಮಿ ಪಕ್ಷ ತೊರೆದು ಭಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರನ್ನು ಮೇಲ್ಮನೆಯ ಅರ್ಜಿಗಳ ಸಮಿತಿಯ ಹೊಸ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಅರ್ಜಿಗಳ ಸಮಿತಿಯನ್ನು ಪುನರ್ರಚಿಸಿದ ನಂತರ, ರಾಜ್ಯಸಭಾ ಅಧ್ಯಕ್ಷ ಸಿ ಪಿ ರಾಧಾಕೃಷ್ಣನ್ ಅವರು ಸದನದ 10 ಸದಸ್ಯರನ್ನು ಸಮಿತಿಗೆ ನಾಮನಿರ್ದೇಶನ ಮಾಡಿದರು.
"ರಾಘವ್ ಚಡ್ಡಾ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ" ಎಂದು ರಾಜ್ಯಸಭೆ ಅಧಿಸೂಚನೆಯಲ್ಲಿ ತಿಳಿಸಿದೆ. ಮೇ 20 ರಿಂದ ಜಾರಿಗೆ ಬರುವಂತೆ ರಾಜ್ಯಸಭಾ ಅಧ್ಯಕ್ಷರು ಸಮಿತಿಯನ್ನು ಪುನರ್ರಚಿಸಿದ್ದಾರೆ ಎಂದು ಅಧಿಸೂಚನೆ ಹೇಳಿದೆ.
ರಾಘವ್ ಚಡ್ಡಾ ನೇತೃತ್ವದ ಸಮಿತಿಯ ಸದಸ್ಯರು
ಹರ್ಷ್ ಮಹಾಜನ್, ಗುಲಾಮ್ ಅಲಿ, ಶಂಭು ಶರಣ್ ಪಟೇಲ್, ಮಯಂಕ್ಕುಮಾರ್ ನಾಯಕ್, ಮಸ್ತಾನ್ ರಾವ್ ಯಾದವ್ ಬೀಡಾ, ಜೆಬಿ ಮಾಥರ್ ಹಿಶಾಮ್, ಸುಭಾಶಿಶ್ ಖುಂಟಿಯಾ, ರುಂಗ್ವ್ರಾ ನರ್ಜಾರಿ ಮತ್ತು ಸಂತೋಷ್ ಕುಮಾರ್ ಪಿ.
ಮತ್ತೊಂದು ಅಧಿಸೂಚನೆಯಲ್ಲಿ, "ರಾಜ್ಯಸಭೆಯ ಅಧ್ಯಕ್ಷರು, ಮೇ 20, 2026 ರಂದು, ಕಾರ್ಪೊರೇಟ್ ಕಾನೂನುಗಳ(ತಿದ್ದುಪಡಿ) ಮಸೂದೆ, 2026 ರ ಜಂಟಿ ಸಮಿತಿಯ ಸದಸ್ಯರಾಗಿ ರಾಜ್ಯಸಭಾ ಸದಸ್ಯರಾದ ಡಾ ಮೇನಕಾ ಗುರುಸ್ವಾಮಿ ಅವರನ್ನು ನಾಮನಿರ್ದೇಶನ ಮಾಡಿದ್ದಾರೆ."
Advertisement