ನೇಪಾಳ ಪ್ರವಾಹ ದುರಂತ: ನಾಪತ್ತೆಯಾದವರ ಕುಟುಂಬಕ್ಕೆ ಭಾರತ ನೆರವು, DNA ಪರೀಕ್ಷೆಗೆ ಕೇಂದ್ರದಿಂದ ವ್ಯವಸ್ಥೆ..!

ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಗಳು (CFSL), ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಗಳು (SFSL), ರಾಷ್ಟ್ರೀಯ ವಿಧಿವಿಜ್ಞಾನ ವಿಜ್ಞಾನ ವಿಶ್ವವಿದ್ಯಾಲಯದ (NFSU) ಪ್ರಯೋಗಾಲಯಗಳು ಹಾಗೂ ಡಿಎನ್‌ಎ ಪ್ರೊಫೈಲಿಂಗ್ ಸಾಮರ್ಥ್ಯ ಹೊಂದಿರುವ NABL ಮಾನ್ಯತೆ ಪಡೆದ ಇತರ ಪ್ರಯೋಗಾಲಯಗಳಲ್ಲಿ ಈ ಪರೀಕ್ಷೆ ನಡೆಸಬಹುದು.
Nepal police officers prepare to load the bodies of flash flood victims for transport from a morgue for mass burial in Kathmandu, Nepal, Tuesday, Sept. 1, 2026
ಸಾಮೂಹಿಕ ಅಂತ್ಯಕ್ರಿಯೆಗಾಗಿ ಶವಾಗಾರದಿಂದ ಶವಗಳನ್ನು ಸಾಗಿಸುತ್ತಿರುವುದು.
Updated on

ನವದೆಹಲಿ: ಹೊಸ ದೆಹಲಿ: ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಲ್ಲಿ ನಾಪತ್ತೆಯಾಗಿರುವ ಸಂತ್ರಸ್ತರನ್ನು ಗುರುತಿಸಲು ಭಾರತ ಸರ್ಕಾರವು ಅತ್ಯಂತ ಮಹತ್ವದ ಮಾನವೀಯ ನೆರವನ್ನು ಘೋಷಿಸಿದೆ.

ಪ್ರವಾಹದಲ್ಲಿ ಸಿಲುಕಿ ನಾಪತ್ತೆಯಾಗಿರುವ ವ್ಯಕ್ತಿಗಳ ಭಾರತದಲ್ಲಿರುವ ಪ್ರಥಮ ದರ್ಜೆ ಜೈವಿಕ ಸಂಬಂಧಿಕರಾದ ತಂದೆ-ತಾಯಿ, ಮಕ್ಕಳು ಹಾಗೂ ಸಹೋದರ-ಸಹೋದರಿಯರ ಜೈವಿಕ ಮಾದರಿಗಳನ್ನು ಸಂಗ್ರಹಿಸಿ ಡಿಎನ್‌ಎ ಪ್ರೊಫೈಲಿಂಗ್ (DNA profiling) ಸೌಲಭ್ಯವನ್ನು ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಗಳು (CFSL), ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಗಳು (SFSL), ರಾಷ್ಟ್ರೀಯ ವಿಧಿವಿಜ್ಞಾನ ವಿಜ್ಞಾನ ವಿಶ್ವವಿದ್ಯಾಲಯದ (NFSU) ಪ್ರಯೋಗಾಲಯಗಳು ಹಾಗೂ ಡಿಎನ್‌ಎ ಪ್ರೊಫೈಲಿಂಗ್ ಸಾಮರ್ಥ್ಯ ಹೊಂದಿರುವ ಎನ್‌ಎಬಿಎಲ್‌ ಮಾನ್ಯತೆ ಪಡೆದ ಇತರ ಪ್ರಯೋಗಾಲಯಗಳಲ್ಲಿ ಈ ಪರೀಕ್ಷೆ ನಡೆಸಬಹುದು.

ಆಗಸ್ಟ್ 26ರಂದು ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಮೃತದೇಹಗಳನ್ನು ಗುರುತಿಸುವ ಕುರಿತು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ರೂಪಿಸಿರುವ ಕಾರ್ಯವಿಧಾನದ ಮುಂದುವರಿದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ನಾಪತ್ತೆಯಾದವರ ಗುರುತಿಸುವ ಪ್ರಕ್ರಿಯೆಗೆ ಹೆಚ್ಚುವರಿ ನೆರವು ನೀಡುವ ಉದ್ದೇಶದಿಂದ ವಿಧಿವಿಜ್ಞಾನ ಸೌಲಭ್ಯಗಳನ್ನು ಒದಗಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ನೇಪಾಳ ಪೊಲೀಸರ ಸಲಹೆಯಂತೆ, ತಾಂತ್ರಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಆಟೋಸೋಮಲ್ ಎಸ್‌ಟಿಆರ್ (Autosomal STR) ವಿಧಾನದಲ್ಲಿ ಡಿಎನ್‌ಎ ಪ್ರೊಫೈಲಿಂಗ್ ನಡೆಸಬೇಕು ಎಂದು ಸಚಿವಾಲಯ ತಿಳಿಸಿದೆ.

Nepal police officers prepare to load the bodies of flash flood victims for transport from a morgue for mass burial in Kathmandu, Nepal, Tuesday, Sept. 1, 2026
Nepal Floods: 'ನೀವೇನ್ ದಾನ ಕೊಡ್ತಿಲ್ಲ.. ಪ್ರವಾಹಕ್ಕೆ ನೀವೇ ಕಾರಣ.. ಪರಿಹಾರ ಕೊಡಿ ಅಷ್ಟೇ..'; ಭಾರತ, ಚೀನಾ, ಅಮೆರಿಕಕ್ಕೆ ನೇಪಾಳ ಆಗ್ರಹ!

ಡಿಎನ್‌ಎ ಪ್ರೊಫೈಲ್ ಸಿದ್ಧವಾದ ಬಳಿಕ, ನೇಪಾಳದ ಅಧಿಕಾರಿಗಳಿಗೆ ಅಗತ್ಯವಿರುವ ಪ್ರಾಥಮಿಕ ಮಾಹಿತಿಯೊಂದಿಗೆ ಅದನ್ನು ನೇಪಾಳ ಪೊಲೀಸರಿಗೆ ಇ-ಮೇಲ್ ಮೂಲಕ ಕಳುಹಿಸಬಹುದು. ಅಪರಿಚಿತ ಮೃತದೇಹಗಳಿಂದ ಪಡೆದ ಡಿಎನ್‌ಎ ಪ್ರೊಫೈಲ್‌ಗಳೊಂದಿಗೆ ಹೋಲಿಕೆ ನಡೆಸಿ, ಗುರುತು ಪತ್ತೆಹಚ್ಚಲು ಈ ಮಾಹಿತಿಯನ್ನು ಬಳಸಲಾಗುತ್ತದೆ.

ಸಮನ್ವಯ ಮತ್ತು ಅಗತ್ಯ ನೆರವಿಗಾಗಿ ಡಿಎನ್‌ಎ ಪ್ರೊಫೈಲ್‌ನ ಪ್ರತಿಯನ್ನು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಗೂ ಕಳುಹಿಸಬಹುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಡಿಎನ್‌ಎ ಪ್ರೊಫೈಲಿಂಗ್ ಸೌಲಭ್ಯ ಹೊಂದಿರುವ ಭಾರತದಲ್ಲಿನ ಸರ್ಕಾರಿ ವಿಧಿವಿಜ್ಞಾನ ಪ್ರಯೋಗಾಲಯಗಳ ಪಟ್ಟಿಯನ್ನೂ ಸಚಿವಾಲಯ ಹಂಚಿಕೊಂಡಿದೆ. ಈ ಸಂಬಂಧ ನೆರವು ಪಡೆಯಲು +977 9841 6160 95 ಸಹಾಯವಾಣಿ ಸಂಖ್ಯೆಯನ್ನು ಕೂಡ ನೀಡಲಾಗಿದೆ.

ನೇಪಾಳ-ಟಿಬೆಟ್ ಗಡಿಯ ಸಮೀಪ ಸಂಭವಿಸಿದ ಹಿಮ-ಬಂಡೆ ಕುಸಿತದಿಂದ ಉಂಟಾದ ಹಠಾತ್ ಪ್ರವಾಹದ ಬಳಿಕ ನೇಪಾಳದಲ್ಲಿ ದೊಡ್ಡ ಪ್ರಮಾಣದ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಳು ಮುಂದುವರಿದಿವೆ. ಉತ್ತರ ಮತ್ತು ಮಧ್ಯ ನೇಪಾಳದ ಹಲವು ಪ್ರದೇಶಗಳಲ್ಲಿ ಪ್ರವಾಹದಿಂದ ಭಾರೀ ಹಾನಿಯಾಗಿದೆ.

ನೇಪಾಳದ ಅಧಿಕಾರಿಗಳ ಪ್ರಕಾರ, ಕನಿಷ್ಠ 1,259 ಮಂದಿ ಮೃತಪಟ್ಟಿದ್ದು, 12,000ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಇನ್ನೂ ಸುಮಾರು 5,000 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ನಾಪತ್ತೆಯಾದವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com