ಇದಕ್ಕೆ ಪ್ರತಿಕ್ರಿಯಿಸಿದ ಪೀಠ, 'ಬೇಸಿಗೆ ಕಾಲ ಪೂರ್ಣಗೊಂಡಿದ್ದು, ಮಳೆಗಾಲ ಈಗಷ್ಟೇ ಆರಂಭವಾಗಿದೆ. ಅರ್ಜಿದಾರರ ವಿರುದಟಛಿ ಮತ್ತಷ್ಟು ಎಫ್ಐಆರ್ ದಾಖಲಾಗಿದ್ದು, ತನಿಖೆಗೆ ತಡೆಯಾಜ್ಞೆ ನೀಡಲು ಸಮಯ ಒದಗಿಬರಬೇಕಿದೆ 'ಎಂದು ಹೇಳಿತು. ವಿಚಾರಣೆ ವೇಳೆ ಲೋಕಾಯುಕ್ತ ಪರ ವಕೀಲರು ವಾದ ಮಂಡಿಸಿ, ಪ್ರಕರಣದ ಕುರಿತು ತಮಗೆ ವಾದ ಮಂಡಿಸಲು ಜು.13ರವರೆಗೂ ಕಾಲಾವಕಾಶ ಕೋರಿದರು. ಇದನ್ನು ಅಲ್ಲಗೆಳೆದ ಪೀಠ, ಸಂವಿಧಾನ ಮತ್ತು ವ್ಯಕ್ತಿಯ ವೈಯಕ್ತಿಕ ಹಕ್ಕು ರಕ್ಷಣೆ ಮಾಡಬೇಕಾಗಿದ್ದು, ಮುಂದಿನ ವಿಚಾರಣೆಗೆ ಮುನ್ನವೇ ಅವರನ್ನ ಬಂಧಿಸಿದರೆ ಏನು ಮಾಡಬೇಕು?