ಬೆಂಗಳೂರು: ಬಿಬಿಎಂಪಿ ಚುನಾವಣೆ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಸಭೆ ನಡೆಸಲಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಂಜೆ 4 ಸಭೆಯ ನಡೆಯಲಿದ್ದು, ಇದರಲ್ಲಿ ಸಚಿವರು ಮತ್ತು ನಗರದ ಕೆಲವು ಶಾಸಕರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಬಿಬಿಎಂಪಿ ಚುನಾವಣೆ ಸಿದ್ಧತೆ ಚರ್ಚೆಯಾಗಲಿದೆ.
ಹೈಕೋರ್ಟ್ ಸರ್ಕಾರಕ್ಕೆ ಹೇಗೆಲ್ಲಾ ಛೀಮಾರಿ ಹಾಕಿದೆ? ಇದಕ್ಕೆ ಕೈಗೊಳ್ಳಬೇಕಿರುವ ನಿರ್ಧಾರವೇ ನು ಎನ್ನುವ ಚರ್ಚೆ ನಡೆಯಲಿದೆ. ಹಾಗೆಯೇ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕೇ, ಕಾನೂನು ಹೋರಾಟ ನಿಲ್ಲಿಸಿ ಚುನಾವಣೆಗೆ ಸಜ್ಜಾಗಬೇಕೇ ಎನ್ನುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿದೆ.
Advertisement