ಮಲ್ಲಿಕಾರ್ಜುನ್ ಖರ್ಗೆ ಅವರನ್ನು 1972ರಲ್ಲಿ ರಾಜಕೀಯಕ್ಕೆ ಕರೆತಂದವರು ನಾವು. ಧರಂ ಸಿಂಗ್ ಧರ್ಮರಾವ್ ಸೇರಿ ಖರ್ಗೆಗೆ ವೇದಿಕೆ ಕಲ್ಪಿಸಿಕೊಟ್ಟಿದ್ದೇವು .ಆದರೆ ಖರ್ಗೆ ಅವರು ಕಳೆದ ಚುನಾವಣೆಯಲ್ಲಿ ನನಗೆ ಟಿಕೇಟ್ ತಪ್ಪಿಸಲು ಯತ್ನಿಸಿದ್ದರು ಎಂದು ಆರೋಪಿಸಿದರು. ಅಲ್ಲದೆ ಈಗ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿ ಬೇಕಾಗಿಲ್ಲ, ಅವರ ಮಕ್ಕಳು ಶಾಸಕ, ಸಚಿವರಾದರೆ ಸಾಕು ಎನ್ನುತ್ತಿದ್ದಾರೆ ಎಂದರು.