ಬಿಬಿಎಂಪಿ ಮೂರು ಭಾಗಗಳಾಗಿ ವಿಭಜನೆ ಖಚಿತ: ಸಿಎಂ ಸಿದ್ದರಾಮಯ್ಯ

ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಅಭಿವೃದ್ಧಿ ದೃಷ್ಟಿಯಿಂದ ಬಿಬಿಎಂಪಿಗೆ ಮೂವರು ಮೇಯರ್'ಗಳ ಅಗತ್ಯವಿದೆ ಈ ಕಾರಣದಿಂದ ಪಾಲಿಕೆಯನ್ನು ಮೂರು ...
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಅಭಿವೃದ್ಧಿ ದೃಷ್ಟಿಯಿಂದ ಬಿಬಿಎಂಪಿಗೆ ಮೂವರು ಮೇಯರ್'ಗಳ ಅಗತ್ಯವಿದೆ ಈ ಕಾರಣದಿಂದ ಪಾಲಿಕೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸುವುದು ನಿಶ್ಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬಿಡಿಎ ವತಿಯಿಂದ ನಿರ್ಮಿಸಲಾಗುತ್ತಿರುವ  ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ಅವರು, ಬಿಬಿಎಂಪಿ ವಿಭಜನೆ ತಾತ್ಕಾಲಿಕವಾಗಿ ಮುಂದೂಡಲಾಗಿದ್ದರೂ ನಮ್ಮ ಅವಧಿಯಲ್ಲಿಯೇ ವಿಭಜಿಸುವುದು ಖಂಡಿತ ಎಂದರು.

ನಗರವು ವಿಪರೀತ ವೇಗವಾಗಿ ಬೆಳೆಯುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಗುರುತಿಸುವ ನಗರ ಇದಾಗಿದೆ. ಇವೆಲ್ಲ ಕಾರಣದಿಂದ ವಿಭಜನೆ ಆಗಬೇಕಾಗಿದೆ. ನಗರದಲ್ಲಿ 1 ಕೋಟಿ ಜನಸಂಖ್ಯೆಗೆ 55 ಲಕ್ಷ ವಾಹನಗಳಿವೆ. ಸಂಚಾರದಟ್ಟಣೆ ಸಮಸ್ಯೆ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಹಲವು ಅಭಿವೃದ್ಧಿ ಮಾರ್ಗೋಪಾಯಗಳು ಬೇಕಾಗಿವೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com