ಈಶ್ವರಪ್ಪ ಮತ್ತು ಅವರ ಕೆಲ ಬೆಂಬಲಿಗರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಮುರುಳಿಧರ ರಾವ್ ಅವರ ಬಳಿ ಒತ್ತಾಯಿಸಿರುವುದಾಗಿ ತುಮಕೂರು ಸಂಸದ ಜಿ.ಎಸ್ ಬಸವರಾಜು ಹೇಳಿದ್ದಾರೆ.ಇಂದು ಕೂಡ ಹಲವು ಬಿಜೆಪಿ ನಾಯಕರು ಮಲ್ಲೇಶ್ವರಂ ನ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ. ಈಶ್ವರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಭಾನುಪ್ರಕಾಶ್, ಎಸ್.ಆರ್ ರವೀಂದ್ರನಾಥ್, ಮತ್ತು ಸೊಗಡು ಶಿವಣ್ಣ ಶನಿವಾರ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಕಾಣಿಸಿಕೊಂಡಿದ್ದರು.