ರಾಜ್ಯದಲ್ಲಿ ಕೇವಲ ಟಿಪ್ಪು ಜಯಂತಿಯಷ್ಟೇ ಅಲ್ಲ, ಕನಕ ಜಯಂತಿ, ವಾಲ್ಮೀಕಿ, ಶಿವಾಜಿ, ರಾಣಿ ಚೆನ್ನಮ್ಮ, ಭಗೀರಥ, ಕೃಷ್ಣ, ಮಹಾವೀರ, ಸೇವಾಲಾಲ್ ಸೇರಿದಂತೆ ಎಲ್ಲಾ ಸಂತರು ಹಾಗೂ ಶರಣರ ಜಯಂತಿಗಳನ್ನೂ ಆಚರಿಸುತ್ತೇವೆ. ಶ್ರೀರಾಮ, ಶ್ರೀಕೃಷ್ಣ ಇರುವುದು ಇವರೊಬ್ಬರಿಗೇನಾ? ನಾನು ಈ ಮಣ್ಣಿನ ಮಗ. ಇಲ್ಲಿನ ಇತಿಹಾಸ, ರಾಜ್ಯದ ಧರ್ಮದ ವಿಚಾರ ನನಗೆ ಗೊತ್ತು. ಯೋಗಿ ಆದಿತ್ಯನಾಥ್ ಅವರು ತಮ್ಮ ರಾಜ್ಯ ಕಾನೂನು ಸುವ್ಯವಸ್ಥೆಯನ್ನು ನೋಡಿಕೊಂಡರೆ ಉತ್ತಮ. ಹಿಂದುತ್ವ ಎಂಬುದು ಯಾರೊಬ್ಬರ ಆಸ್ತಿಯಲ್ಲ. ನಾವೂ ಕೂಡ ಹಿಂದೂಗಳೇ. ನಾವು ಮುಸ್ಲಿಮರು, ಕ್ರಿಶ್ಚಿಯನ್ನರು ಹಾಗೂ ಜೈನರ ವಿರುದ್ಧವಿಲ್ಲ ಎಂದು ಯೋಗಿ ಆದಿತ್ಯನಾಥ್ ಅವರಿಗೆ ಟಾಂಗ್ ನೀಡಿದ್ದಾರೆ.