ಬಿಜೆಪಿ ವಿರುದ್ಧ 'ಸತ್ಯಮೇವ ಜಯತೇ' ಹೆಸರಿನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಾಳೆ

ಬಿಜೆಪಿ ನಾಯಕರ ಸುಳ್ಳು ಆರೋಪ ಹಿನ್ನಲೆಯಲ್ಲಿ ಫೆ.23 ರಂದು ಬಿಜೆಪಿ ವಿರುದ್ಧ 'ಸತ್ಯಮೇವ ಜಯತೇ' ಹೆಸರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಬುಧವಾರ ತೀರ್ಮಾನಿಸಿದೆ...
ಕರ್ನಾಟಕ ಕಾಂಗ್ರೆಸ್ (ಸಂಗ್ರಹ ಚಿತ್ರ)
ಕರ್ನಾಟಕ ಕಾಂಗ್ರೆಸ್ (ಸಂಗ್ರಹ ಚಿತ್ರ)

ಬೆಂಗಳೂರು: ಬಿಜೆಪಿ ನಾಯಕರ ಸುಳ್ಳು ಆರೋಪ ಹಿನ್ನಲೆಯಲ್ಲಿ ಫೆ.23 ರಂದು ಬಿಜೆಪಿ ವಿರುದ್ಧ 'ಸತ್ಯಮೇವ ಜಯತೇ' ಹೆಸರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಬುಧವಾರ ತೀರ್ಮಾನಿಸಿದೆ.

ಕಾಂಗ್ರೆಸ್ ಪಕ್ಷದ ಉನ್ನತ ನಾಯಕರ ವತಿಯಿಂದ ನಾಳೆ ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾಂಗ್ರೆಸ್ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಐಟಿ ಅಧಿಕಾರಿಗಳೇ ಬಿಜೆಪಿ ನಾಯಕರಿಗೆ ಐಟಿ ದಾಳಿಯಲ್ಲಿ ಸಿಕ್ಕಿರುವ ಮಾಹಿತಿಗಳನ್ನು ಸೋರಿಕೆ ಮಾಡಿದ್ದಾರೆ. ಯಾವ ಅಧಿಕಾರಿ ಈ ಮಾಹಿತಿಯನ್ನು ನೀಡಿದ್ದಾರೆ ಎಂಬುದು ನಮಗೆ ತಿಳಿದಿದೆ. ಈ ಹಿನ್ನಲೆಯಲ್ಲಿ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.

ಕೇವಲ ಕಾಂಗ್ರೆಸ್ ನಾಯಕರ ಮೇಲಾದ ಐಟಿ ದಾಳಿಯ ಮಾಹಿತಿಗಳು ಮಾತ್ರ ಯಾಕೆ ಹೊರಗೆ ಬರುತ್ತಿದೆ? ಆ ಮಾಹಿತಿಗಳು ಸುಳ್ಳೋ ಅಥವಾ ನಿಜವೋ ಎಂಬುದು ತಿಳಿದಿಲ್ಲ. ಆದರೆ, ಮಾಹಿತಿಗಳ ಸೋರಿಕೆ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ದೂರು ನೀಡಿ ಕಾನೂನು ಹೋರಾಟ ನಡೆಸುತ್ತೇವೆಂದು ದಿನೇಶ್ ಗುಂಡುರಾವ್ ಅವರು ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com