ಇದಕ್ಕೆ ಖಡಕ್ ಉತ್ತರ ನೀಡಿರುವ ದಿನೇಶ್, ನಾನು ಯಾರನ್ನು ಮದುವೆಯಾಗಿದ್ದೇನೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅದರಿಂದ ಸಮಾಜಕ್ಕೆ ಯಾವುದೇ ತಪ್ಪು ಸಂದೇಶ ಹೋಗಿಲ್ಲ, ಒಂದು ವೇಳೆ ನಾನು ದಲಿತ ಹುಡುಗಿಯನ್ನು ಇಷ್ಟಪಟ್ಟಿದ್ದರೇ,ದಲಿತ ಯುವತಿಯನ್ನೇ ವಿವಾಹವಾಗುತ್ತಿದ್ದೆ. ನಾನು ಯಾರನ್ನು ವಿವಾಹವಾಗಿದ್ದೇನೆ ಎಂಬ ಬಗ್ಗೆ ಶೋಭಾ ಯಾಕೆ ಚಿಂತೆ ಮಾಡುತ್ತಿದ್ದಾರೋ ತಿಳಿಯದು, ಕುಮಾರಿ ಶೋಭಾ ಕರಂದ್ಲಾಜೆಯಂಥ ನಾಯಕಿಯ ನಿಲುವು ಇಂತಹ ಮಟ್ಟಕ್ಕೆ ಇಳಿದಿರುವುದು ನಿಜವಾಗಿಯು ದುರಾದೃಷ್ಟಕರ, ಅವರು ಮದುವೆಯಾಗರದಿರುವುದರಿಂದ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.