ಸಮಾವೇಶಕ್ಕೆ ಬೆಳಿಗ್ಗೆ 11.30ಕ್ಕೆ ಆರಂಭವಾಗಬೇಕಿತ್ತು. ಆದರೆ, ಆ ಹೊತ್ತಿಗೆ ತೀನಾ ಕಡಿಮೆ ಸಂಖ್ಯೆಯಲ್ಲಿ ಜನರಿದ್ದರು. ಕೆಲ ಸಮಯ ಕಳೆಯುತ್ತಿದ್ದಂತೆಯೇ ನಿಧಾನವಾಗಿ ಜನರು ಬರಲು ಆರಂಭಿಸಿದ್ದರು. ಅಮಿತ್ ಶಾ ಅವರು ಸಮಾವೇಶಕ್ಕೆ ಆಗಮಿಸುವಷ್ಟರಲ್ಲಿ ಮಧ್ಯಾಹ್ನ 1.45 ಆಗಿತ್ತು. ಆದರೆ, ಆ ವೇಳೆಯೂ ಅರ್ಧದಷ್ಟು ಆಸನಗಳು ಮಾತ್ರ ಭರ್ತಿಯಾಗಿರಲಿಲ್ಲ. ಇದು ಅಮಿತ್ ಶಾ ಅವರಿಗೆ ತೀವ್ರ ಬೇಸರವನ್ನು ಮೂಡಿಸಿತ್ತು. ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಪಕ್ಷದಲ್ಲಿದ್ದ ಕೇಂದ್ರ ಸಚಿವರಾದ ಸದಾನಂದಗೌಡ, ಅನಂತ್ ಕುಮಾರ್ ಮೊದಲಾದವರಿಗೆ ವೇದಿಕೆ ಮುಂಭಾದತ್ತ ಕೈ ತೋರಿಸಿ ಅಸಮಾಧಾನ ವ್ಯಕ್ತಪಡಿಸಿದ್ದು ಕಂಡು ಬಂದಿತ್ತು.