ಪ್ರಜ್ವಲ್ ಚುನಾವಣಾ ಸ್ಪರ್ಧೆ ವಿಚಾರದಲ್ಲಿ ದೇವೇಗೌಡ, ಕುಮಾರಸ್ವಾಮಿ ನಿರ್ಧಾರವೇ ಅಂತಿಮ: ಹೆಚ್.ಡಿ.ರೇವಣ್ಣ

ವಿಧಾನಸಭಾ ಚುನಾವಣೆಯಲ್ಲಿ ಪ್ರಜ್ವಲ್ ಸ್ಪರ್ಧಿಸುವ ಕುರಿತು ದೇವೇಗೌಡರು ಮತ್ತು ಕುಮಾರಸ್ವಾಮಿಯವರ ನಿರ್ಧಾರವೇ ಅಂತಿಮ ಎಂದು ಶಾಸಕ ಹೆಚ್.ಡಿ. ರೇವಣ್ಣ...
ಶಾಸಕ ಹೆಚ್.ಡಿ. ರೇವಣ್ಣ
ಶಾಸಕ ಹೆಚ್.ಡಿ. ರೇವಣ್ಣ
ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಪ್ರಜ್ವಲ್ ಸ್ಪರ್ಧಿಸುವ ಕುರಿತು ದೇವೇಗೌಡರು ಮತ್ತು ಕುಮಾರಸ್ವಾಮಿಯವರ ನಿರ್ಧಾರವೇ ಅಂತಿಮ ಎಂದು ಶಾಸಕ ಹೆಚ್.ಡಿ. ರೇವಣ್ಣ ಅವರು ಶುಕ್ರವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಪುತ್ರ ಪ್ರಜ್ವಲ್'ಗೆ ರಾಜ್ಯ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆ. ಪ್ರಜ್ವಲ್ ಚುನಾವಣಾ ಸ್ಪರ್ಧೆ ಕುರಿತಂತೆ ಸಹೋದರ ಹೆಚ್. ಡಿ. ಕುಮಾರಸ್ವಾಮಿ ಹಾಗೂ ತಂದೆ ದೇವೇಗೌಡ ಅವರು ಒಪ್ಪಿಗೆ ನೀಡದಿದ್ದರೆ, ಚುನಾವಣೆಯಿಂದ ಪ್ರಜ್ವಲ್ ದೂರ ಉಳಿಯುತ್ತಾನೆಂದು ಹೇಳಿದ್ದಾರೆ. 
ಪ್ರಜ್ವಲ್ ಸ್ಪರ್ಧೆ ವಿಚಾರದಲ್ಲಿ ನಮ್ಮ ಕುಟುಂಬದವರೇ ಹೊಡೆದಾಡುತ್ತಿದ್ದಾರೆನ್ನುವ ಭ್ರಮೆ ಕೆಲವರಲ್ಲಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಸುಮ್ಮನೆ ಗೊಂದಲವನ್ನು ಮೂಡಿಸುತ್ತಿದ್ದಾರೆ. ಅವರ ಕುತಂತ್ರಗಳು ಎಂದಿಗೂಫಲಿಸುವುದಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com