ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿ ಮಗನೆಂದು ಹೇಳಿಕೊಂಡು ಶಾಸಕ ಆನಂದ್ ಸಿಂಗ್ ಅವರಿಗೆ ಕರೆ ಮಾಡಿ, ತಾನು ಹಂಪಿ ನೋಡಲು ಬರುತ್ತಿದ್ದು, ಅದಕ್ಕಾಗಿ ವ್ಯವಸ್ಥೆ ಮಾಡುವಂತೆ ಹೇಳಿದ್ದ, ಅದರಂತೆ ಶಾಸಕರು ಆತನಿಗಾಗಿ ಐಷಾರಾಮಿ ರೇಂಜ್ ರೋವರ್ ಎಸ್ ಯುವಿ ಕಾರನ್ನು ಪ್ರವಾಸಕ್ಕಾಗಿ ವ್ಯವಸ್ಥೆ ಮಾಡಿಕೊಟ್ಟಿದ್ದರು. ಹಂಪಿಯಿಂದ ವಾಪಾಸಾದ ನಂತರ ರಾಜ್ ವೀರ್ ಬಹದ್ದೂರ್ ಕಾರನ್ನು ತನಗೆ ಉಡುಗೊರೆಯಾಗಿ ನೀಡುವಂತೆ ಬೇಡಿಕೆಯಿಟ್ಟಿದ್ದ, ಇದರಿಂದ ಅನುಮಾನಗೊಂಡ ಆನಂದ್ ಸಿಂಗ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.