ಬಿಜೆಪಿ ನಾಯಕರ ಖಂಡನಾ ಭಾಷಣದೊಂದಿಗೆ ರ್ಯಾಲಿ ಅಂತ್ಯವಾಗಿದ್ದು, ಭಾಷಣದ ಬಳಿಕ, ಯಡಿಯೂರಪ್ಪ, ಜದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಹಾಗೂ ಆರ್ ಅಶೋಕ್ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಅಲ್ಲದೆ ಪೊಲೀಸರ ಕಣ್ತಪ್ಪಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ 60 ಮಂದಿ ಬಿಜೆಪಿಯ ಕಾರ್ಯಕರ್ತರನ್ನು ಬಂಧಿಸಲಾಗಿದೆ.