ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷ(ಬಿಜೆಪಿ) ದೇಶವನ್ನು ಶೋಚನೀಯ ಸ್ಥಿತಿಗೆ ತಂದಿವೆ. ಎಂದ ಕೆಸಿಆರ್ "ಕಾಂಗ್ರೆಸ್ ಪಕ್ಷ ಮತ್ತು ಬಿಜೆಪಿ 65 ವರ್ಷಗಳಿಂದ ಭಾರತವನ್ನು ಆಳ್ವಿಕೆ ನಡೆಸಿದೆ ಮತ್ತು ಅವರು ದೇಶವನ್ನು ಶೋಚನೀಯ ಸ್ಥಿತಿಗೆ ತಂದಿದ್ದಾರೆ, ನಮ್ಮ ತೃತೀಯ ರಂಗವು ಕೇವಲ ರಾಜಕೀಯ ಪಕ್ಷಗಳ ಒಕ್ಕೂಟ ಮಾತ್ರವೇ ಅಲ್ಲ ಅದು ಭಾರತದ ಜನಸಾಮಾನ್ಯರ ಜತೆಗಿರಲಿದೆ. ಜನಪರ, ಜನ ಸಾಮಾನ್ಯರ, ರೈತರ ಪರವಾದ ತೃತೀಯ ರಂಗವನ್ನು ರಚಿಸುವುದು ನಮ್ಮ ಉದ್ದೇಶ.." ಎಂದಿದ್ದಾರೆ.