ಮೈಸೂರಿನಲ್ಲಿ ಮಾತನಾಡಿದ್ದ ಸಿದ್ದರಾಮಾಯ್ಯ "ನಾನು ಚಾಮುಂಡೇಶ್ವರಿ ಕ್ಷೇತ್ರದೊಡನೆ ಬದಾಮಿಯಿಂದ ಸಹ ಏಕಕಾಲಕ್ಕೆ ಕಣಕ್ಕಿಳಿಯುವುದರ ಕುರಿತು ಹೈಕಮಾಂಡ್ ನಿರ್ಧರಿಸಲಿದೆ. ಬಾದಾಮಿಯಿಂದ ಸ್ಪರ್ಧಿಸುವಂತೆ ಉತ್ತರ ಕರ್ನಾಟಕದ ಕೆ;ಲ ಮುಖಂಡರು, ಬೆಂಬಲಿಗರು ಒತ್ತಡ ತರುತ್ತಿದ್ದಾರೆ. ಆದರೆ ಇದರಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ" ಎಂದರು.