ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿದ್ದ ಆನಂದ್ ಅಸ್ವೋಟಿಕರ್ ಜನಪ್ರಿಯ ಮುಖ, ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವ ಮೂಲಕ ಮತ್ತಷ್ಟು ಚಿರಪರಿಚಿತರಾಗುತ್ತಿದ್ದಾರೆ, ಕರಾವಳಿ ತೀರದಲ್ಲಿ ಜೆಡಿಎಸ್ ಅಸ್ತಿತ್ವದಲ್ಲಿಲ್ಲ ಆದರೆ ಆನಂದ್ ಅಸ್ನೋಟಿಕರ್, ಇಲ್ಲಿನ ಮತದಾರರಿಗೆ ಪರಿಚಿತರು, ಉತ್ತರ ಕನ್ನಡದಲ್ಲಿ ನೀರು, ನೀರಾವರಿ, ಸಮಸ್ಯೆಗಳಿದ್ದು ಕೈಗಾರಿಕೋದ್ಯಮದಲ್ಲೂ ಹಿಂದೆ ಬಿದ್ದಿದೆ,ಖಾಸಗಿ ಅಥವಾ ಸರ್ಕಾರಿ ನೌಕರಿಗಳನ್ನು ಇಲ್ಲಿನ ಜನರು ಅವಲಂಭಿಸಿದ್ದಾರೆ, ಸರಿಯಾದ ನೀರಾವರಿ ಯೋಜನೆಗಳಿಲ್ಲದ ಕಾರಣ ಕೃಷಿ ಮಾಡುವುದರಿಂದ ಜನರು ದೂರ ಉಳಿದಿದ್ದಾರೆ.